ಉತ್ತರ ಪ್ರದೇಶದ ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಆ್ಯಂಟನಿ ಫೆರ್ನಾಂಡಿಸ್ ನಿಧನ 

03-02-23 07:54 pm       Mangalore Correspondent   ಕರಾವಳಿ

ಉತ್ತರ ಪ್ರದೇಶದ  ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಉಡುಪಿ ಮೂಲದ ಆ್ಯಂಟನಿ ಫೆರ್ನಾಂಡಿಸ್(86) ಅವರು ಅನಾರೋಗ್ಯದಿಂದ ಫೆಬ್ರುವರಿ 3 ರಂದು ನಿಧನ ಹೊಂದಿದರು. 

ಮಂಗಳೂರು, ಫೆ.3 : ಉತ್ತರ ಪ್ರದೇಶದ  ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಉಡುಪಿ ಮೂಲದ ಆ್ಯಂಟನಿ ಫೆರ್ನಾಂಡಿಸ್(86) ಅವರು ಅನಾರೋಗ್ಯದಿಂದ ಫೆಬ್ರುವರಿ 3 ರಂದು ನಿಧನ ಹೊಂದಿದರು. 

1936 ರಲ್ಲಿ ಉಡುಪಿ ಜಿಲ್ಲೆಯ ಕಳತ್ತೂರಿನಲ್ಲಿ ಜನಿಸಿದ ಅವರು ಶಿರ್ವ ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ವಾರಣಾಸಿ ಧರ್ಮ ಪ್ರಾಂತ್ಯಕ್ಕೆ ನಿಯೋಜನೆ ಹೊಂದಿದ್ದರು. ಲಕ್ನೋದಲ್ಲಿರುವ ಸೈಂಟ್ ಪಾವ್ಲ್ ಸೆಮಿನರಿ ಮತ್ತು ಅಲಹಾಬಾದ್ ನ ಸೈಂಟ್ ಜೋಸೆಫ್ ರೀಜನಲ್ ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪೂರೈಸಿದ ಬಳಿಕ 1964 ಡಿಸೆಂಬರ್ 2 ರಂದು ಮುಂಬಯಿ ನಲ್ಲಿ ಪೋಪ್ ಅವರು ಭಾಗವಹಿಸಿದ್ದ ಯೂಕರಿಸ್ತಿಕ್ ಸಮಾವೇಶದಲ್ಲಿ ಗುರು ದೀಕ್ಷೆ ಪಡೆದಿದ್ದರು. 

26 ವರ್ಷಗಳ ಕಾಲ ಧರ್ಮ ಗುರುಗಳಾಗಿ ವಾರಣಾಸಿ ಮತ್ತು ಗೋರಖ್ ಪುರ್ ನಲ್ಲಿ ಸೇವೆ ಸಲ್ಲಿಸಿದ್ದರು. ವಿಕಾರ್ ಜನರಲ್ ಆಗಿ ವಾರಣಾಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 1989 ಜನವರಿ 19 ರಂದು ಬರೇಲಿಯ ಪ್ರಥಮ ಬಿಷಪ್ ಆಗಿ ನೇಮಗೊಂಡಿದ್ದರು. ಅದೇ ವರ್ಷ ಮಾರ್ಚ್ 29 ರಂದು ಸೈಂಟ್ ಅಲ್ಫೋನ್ಸಸ್ ಕೆಥಡ್ರಲ್ ನಲ್ಲಿ ಬಿಷಪ್ ದೀಕ್ಷೆ ಪಡೆದು ಅಧಿಕಾರ ವಹಿಸಿಕೊಂಡಿದ್ದರು. 2014 ನವೆಂಬರ್ ನಲ್ಲಿ ಫೆರ್ನಾಂಡಿಸ್ ಬಿಷಪ್ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.

Bishop emeritus Anthony Fernandes passed away following a blood clot in the brain and multiple organ failure on Friday February 3. He was 86. The bishop was born on July 6, 1936, in Kalathur in Udupi to David and Bridgit Fernandes. Among the three siblings he is the eldest one. After his high school studies at Don Bosco School, Shriva, diocese of Udupi, he joined the diocese of Varanasi. He had his initial formation at St Paul’s Minor Seminary, in Lucknow. He completed his Philosophical and Theological studies from St Joseph’s Regional Seminary in Allahabad. He was ordained to the priesthood during the Eucharistic Congress held in Mumbai on December 2, 1964.