ಬ್ರೇಕಿಂಗ್ ನ್ಯೂಸ್
10-02-23 04:58 pm Mangalore Correspondent ಕರಾವಳಿ
ಮಂಗಳೂರು, ಫೆ.10: ಪೊಲೀಸರ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಹವಾಲು ಕೇಳಲು ಬಂದಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಎದುರಲ್ಲೇ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ತರಾಟೆಗೆತ್ತಿಕೊಂಡಿದ್ದಾರೆ.
ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ಹಿಡಿದು ಹೋದರೂ ಹಣ ಕೇಳುತ್ತಾರೆ. ದೂರು ಪಡೆಯೋದಕ್ಕೂ ಹಣ ಕೇಳುವ ಸ್ಥಿತಿಯಿದೆ. ಮಂಗಳೂರಿನಲ್ಲಿ ಒಂದು ಮಹಿಳಾ ಠಾಣೆ ಇರುವುದು. ಇಲ್ಲಿನ ದುರವಸ್ಥೆಯೇ ಹೀಗಾದರೆ ಗತಿಯೇನು. ಸಂತ್ರಸ್ತ ಯುವತಿಯೊಬ್ಬಳು ನನ್ನಲ್ಲಿ ಅಳಲು ಹೇಳಿಕೊಂಡಿದ್ದಾರೆ. ಆ ಕುರಿತ ದಾಖಲೆಯೂ ನನ್ನಲ್ಲಿದೆ ಎಂದು ಮಾಧ್ಯಮದ ಮುಂದೆಯೇ ಎಡಿಜಿಪಿ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.

ಇದಲ್ಲದೆ, ಯಾವುದೇ ಪ್ರಕರಣದಲ್ಲಿ ನಾವು ದನಿ ಎತ್ತಿ ಪೊಲೀಸರನ್ನು ಪ್ರಶ್ನಿಸಿದರೆ ನಮ್ಮ ವಿರುದ್ಧವೇ ಕೇಸು ದಾಖಲಿಸುತ್ತಾರೆ. ನಾವು ಸಮಾಜದ ಪರವಾಗಿ ದನಿ ಎತ್ತಿದರೆ, ಇನ್ನೊಬ್ಬರ ಮೂಲಕ ಮಾನನಷ್ಟ ಕೇಸು ಹಾಕಿಸುತ್ತಾರೆ. ಕೆಎಂಎಫ್ ನಲ್ಲಿ ಉದ್ಯೋಗ ತೆಗೆಸಿಕೊಡುತ್ತೇನೆಂದು ಹಣ ಪಡೆದ ವ್ಯಕ್ತಿಯ ವಿರುದ್ಧ ಆರೋಪ ಇದ್ದರೂ, ಸಿಸಿಬಿಯವರು ಅದನ್ನು ಸರಿಯಾಗಿ ತನಿಖೆ ನಡೆಸಿಲ್ಲ. ಆ ಬಗ್ಗೆ ನಾವು ಸಂತ್ರಸ್ತರನ್ನು ಒಂದೆಡೆ ಸೇರಿಸಿದ್ದರೂ, ಮರುದಿನ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಪೊಲೀಸರ ವಿರುದ್ಧ ಹೋಗದಂತೆ ತಡೆಯುತ್ತಾರೆ. ಆರೋಪಿ ವಿರುದ್ಧ ಬಜ್ಪೆ, ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆ ಪ್ರಕರಣದಲ್ಲಿ ಸಂತ್ರಸ್ತರನ್ನೇ ಬೆದರಿಸಲಾಗಿತ್ತು. ಎಸಿಪಿ ಬಂಡಾರು ಎಂಬವರು ಈ ಹಿಂದೆ ನನ್ನನ್ನೂ ಬೆದರಿಸಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ಮುಂದೆ ಪ್ರಸನ್ನ ರವಿ ಅಳಲು ತೋಡಿಕೊಂಡಿದ್ದಾರೆ.


ಮಹಿಳಾ ಠಾಣೆಯಲ್ಲಿ ಹಣ ಕೇಳಿರುವ ವಿಚಾರದ ಬಗ್ಗೆ ನನಗೆ ಯಾವ ಪ್ರಕರಣ ಎಂದು ಮಾಹಿತಿ ಕೊಡಿ, ಕ್ರಮ ಕೈಗೊಳ್ಳುತ್ತೇನೆ ಎಂದು ಎಡಿಜಿಪಿ ಹೇಳಿದರು. ಯಾವುದೇ ಆರೋಪ ಮಾಡಿದರೆ ಸಾಲದು. ಅದಕ್ಕೆ ಸೂಕ್ತ ದಾಖಲೆ ಕೊಟ್ಟರೆ ಮಾತ್ರ ನಮ್ಮ ಸಿಬಂದಿ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿ ಸಿಬಂದಿಯ ಪರವಾಗಿಯೇ ಎಡಿಜಪಿ ಮಾತನಾಡಿದರು.
Mangalore city police corruption, Activist Ravi prasanna slams about Woman police station to ADGP Alok Kumar during the grivences meeting. She alleged that anytime you go to the station they only demand money. She partially complained about Police Inspector Manjula. She also raised about how police have become corrupted and take bribes from all illegal centres in the city.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm