ಕೆಎಸ್ಆರ್ ಪಿ ಪೊಲೀಸ್ ಪೇದೆ ಆತ್ಮಹತ್ಯೆ ; ತಾಯಿ ಅಗಲಿಕೆ ನೋವಲ್ಲಿ ಸಾವಿಗೆ ಶರಣು ಶಂಕೆ 

19-02-23 08:22 pm       Mangalore Correspondent   ಕರಾವಳಿ

ಅಸೈಗೋಳಿ ಕೆಎಸ್ಆರ್ ಪಿ ಏಳನೇ ಬೆಟಾಲಿಯನ್ ನೂತನ ಬ್ಯಾಚ್ ಪೊಲೀಸ್ ಪೇದೆ ಬಾಡಿಗೆ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಸೈಗೋಳಿ ಸೈಟ್ ನಲ್ಲಿ ನಡೆದಿದೆ. 

ಉಳ್ಳಾಲ, ಫೆ.19: ಅಸೈಗೋಳಿ ಕೆಎಸ್ಆರ್ ಪಿ ಏಳನೇ ಬೆಟಾಲಿಯನ್ ನೂತನ ಬ್ಯಾಚ್ ಪೊಲೀಸ್ ಪೇದೆ ಬಾಡಿಗೆ ರೂಮಿನಲ್ಲಿ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಅಸೈಗೋಳಿ ಸೈಟ್ ನಲ್ಲಿ ನಡೆದಿದೆ. 

ಮೂಲತಃ ಬೆಳಗಾವಿ ನಿವಾಸಿ ವಿಮಲನಾಥ ಜೈನ್ (28) ಆತ್ಮಹತ್ಯೆ ಮಾಡಿಕೊಂಡವರು. ತಿಂಗಳ ಹಿಂದಷ್ಟೇ ತಾಯಿ ತೀರಿಕೊಂಡ ನಂತರ ದುಃಖದಲ್ಲಿದ್ದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ನೂತನ ಬ್ಯಾಚ್ ಪೇದೆಯಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿದ್ದರು. ಈ ವೇಳೆ, ಬಾಡಿಗೆ ಕೊಠಡಿಯಲ್ಲೇ ಕೃತ್ಯ ಎಸಗಿದ್ದಾರೆ. ಮೃತರು ಅವಿವಾಹಿತರಾಗಿದ್ದರು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KSRP police Constable commits suicide at Assaigoli in Mangalore. The deceased has been identified as Vimalanath Jain (28). Recently he was depressed after his mother passed away.