ಮಂಗಳೂರಿನ ಜಿಪಂ ಕಚೇರಿಗೆ ಲೋಕಾಯುಕ್ತ ದಾಳಿ ; ಲಂಚ ಪಡೀತಿದ್ದಾಗಲೇ ಸಿಕ್ಕಿಬಿದ್ದ ಲೇಡಿ ಇಂಜಿನಿಯರ್ 

20-02-23 04:35 pm       Mangalore Correspondent   ಕರಾವಳಿ

ನಗರದ ಉರ್ವಾ ಸ್ಟೋರ್ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಲಂಚ ಸ್ವೀಕರಿಸುತ್ತಿದ್ದ ಇಂಜಿನಿಯರ್ ಮಹಿಳೆ ಒಬ್ಬರನ್ನು ಬಂಧಿಸಿದ್ದಾರೆ. ‌

ಮಂಗಳೂರು, ಫೆ.20: ನಗರದ ಉರ್ವಾ ಸ್ಟೋರ್ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಲಂಚ ಸ್ವೀಕರಿಸುತ್ತಿದ್ದ ಇಂಜಿನಿಯರ್ ಮಹಿಳೆ ಒಬ್ಬರನ್ನು ಬಂಧಿಸಿದ್ದಾರೆ. ‌

ಜಿಲ್ಲಾ ಪಂಚಾಯತ್ ನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ರೂಪಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ‌ಇವರು 8 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 

ಕಾಂಟ್ರಾಕ್ಟರ್ ಮಾಡಿದ್ದ ಕಾಮಗಾರಿ ಒಂದಕ್ಕೆ ಬಿಲ್ ಪಾಸ್ ಮಾಡಲು ಜಿಪಂ ಇಂಜಿನಿಯರ್ ರೂಪಾ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತಕ್ಕೆ ದೂರು ನೀಡಿದ್ದು ಲಂಚ ಸ್ವೀಕರಿಸುವಾಗಲೇ ದಾಳಿ ನಡೆಸಿ ಬಂಧಿಸಿದ್ದಾರೆ. ದ.ಕ‌. ಲೋಕಾಯುಕ್ತ ಎಸ್ಪಿ ಸೈಮನ್ ಮತ್ತು ಡಿವೈಎಸ್ ಪಿ ಚಲುವರಾಜ್ ನೇತೃತ್ವದಲ್ಲಿ ದಾಳಿ ನಡೆದಿತ್ತು.

Mangalore Lokayukta raid on Zilla Panchayat office at Kottara, technical assistant engineer Roopa arrested for taking a bribe of eight thousand rupees. The raid was led by Lokayukta Sp Simon and team.