ಕಡಬದಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ; ನಾಗರಹೊಳೆ, ದುಬಾರೆಯ ಪಳಗಿದ ಆನೆಗಳಿಂದ ಆಪರೇಷನ್ 

21-02-23 12:15 pm       Mangalore Correspondent   ಕರಾವಳಿ

ಕಡಬದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಸಿಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಕ್ಕಾಗಿ ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ‌ 5 ಆನೆಗಳನ್ನು ತರಲಾಗಿದ್ದು ರೆಂಜಿಲಾಡಿಯಲ್ಲಿ ಬೀಡು ಬಿಟ್ಟಿವೆ. 

ಪುತ್ತೂರು, ಫೆ.21: ಕಡಬದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಸಿಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಕ್ಕಾಗಿ ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ‌ 5 ಆನೆಗಳನ್ನು ತರಲಾಗಿದ್ದು ರೆಂಜಿಲಾಡಿಯಲ್ಲಿ ಬೀಡು ಬಿಟ್ಟಿವೆ. 

ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಸಾಕಾನೆಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದ್ದು ಪಂಜ, ಸುಬ್ರಹ್ಮಣ್ಯ ವಲಯದ 50ಕ್ಕೂ ಹೆಚ್ಚು ಅರಣ್ಯ ಸಿಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ‌ಅಲ್ಲದೆ, 40ಕ್ಕೂ ಹೆಚ್ಚು ಮಾವುತರು, ಕಾವಾಡಿಗರು ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ಐದು ಸಾಕಾನೆಗಳನ್ನು ಸೋಮವಾರ ರಾತ್ರಿಯೇ ಲಾರಿಯಲ್ಲಿ ಕಡಬಕ್ಕೆ ಕರೆಸಲಾಗಿದೆ. ಆದರೆ ಇಬ್ಬರ ಸಾವಿಗೆ ಕಾರಣವಾದ ಎರಡು ಕಾಡಾನೆಗಳು ಕಣ್ಣಿಗೆ ಕಾಣದೆ ಮರೆಯಾಗಿದ್ದು ಅದರ ಪತ್ತೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಅಲ್ಲಲ್ಲಿ ವೀಕ್ಷಣೆ ನಡೆಸುತ್ತಿದೆ. ಅಲ್ಲಲ್ಲಿ ಡ್ರೋಣ್ ಬಳಸಿ ಕಾಡಾನೆ ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಡಿಸಿಎಫ್ ದಿನೇಶ್ ಕುಮಾರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದಾರೆ. ಸೋಮವಾರ ಬೆಳಗ್ಗೆ ರೆಂಜಿಲಾಡಿ ಗ್ರಾಮದಲ್ಲಿ ರಮೇಶ್ ರೈ ಮತ್ತು ರಂಜಿತಾ ರೈ ಎಂಬ ಇಬ್ಬರನ್ನು ಕಾಡಾನೆ ಸೊಂಡಿಲಿನಲ್ಲಿ ಎತ್ತಿ ಹಾಕಿ ಅವರ ಸಾವಿಗೆ ಕಾರಣವಾಗಿತ್ತು.

Five trained elephants arrived at Renjilady to capture the wild elephant that killed two people on Monday. Forest officers and district administration are on the spot and are overseeing the operation. DCF Dinesh Y K is leading the operation. More than 50 forest department personnel of Sullia, Panja and Subramanya, 30 trained mahouts, team of Kavadigas and locals are also involved in the operation.