ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಗೆ ಸ್ಕೂಟರ್ ಡಿಕ್ಕಿ ; ಸವಾರ ಸಾವು, ನಸುಕಿನಲ್ಲಿ ಜವರಾಯನ ಅಟ್ಟಹಾಸ 

23-02-23 10:48 am       Mangalore Correspondent   ಕರಾವಳಿ

ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಮರದ ದಿಮ್ಮಿಗಳಿದ್ದ ಲಾರಿಯ ಹಿಂಬದಿಗೆ ಎರಡು ಸ್ಕೂಟರ್ ಡಿಕ್ಕಿಯಾದ ಘಟನೆ ಗುರುವಾರ ನಸುಕಿನ ಜಾವ ನಡೆದಿದ್ದು ಓರ್ವ ಸ್ಕೂಟರ್ ಸವಾರ ಯುವಕ ದಾರುಣ ಸಾವನ್ನಪ್ಪಿದ್ದಾನೆ.

ಉಳ್ಳಾಲ, ಫೆ.23 : ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಮರದ ದಿಮ್ಮಿಗಳಿದ್ದ ಲಾರಿಯ ಹಿಂಬದಿಗೆ ಎರಡು ಸ್ಕೂಟರ್ ಡಿಕ್ಕಿಯಾದ ಘಟನೆ ಗುರುವಾರ ನಸುಕಿನ ಜಾವ ನಡೆದಿದ್ದು ಓರ್ವ ಸ್ಕೂಟರ್ ಸವಾರ ಯುವಕ ದಾರುಣ ಸಾವನ್ನಪ್ಪಿದ್ದಾನೆ.

ಬೈಕಂಪಾಡಿಯಲ್ಲಿ ತರಕಾರಿ ಅಂಗಡಿ ಹೊಂದಿದ್ದ ಮಹಮ್ಮದ್ ನೌಫಾಲ್(25) ಮೃತ ಯುವಕ. ನೌಫಾಲ್ ಕಲ್ಲಾಪಿನ ಗ್ಲೋಬಲ್ ಮಾರ್ಕೆಟಿನಿಂದ ತರಕಾರಿ ಪಡೆಯಲು ದಿನವೂ ಬೈಕಂಪಾಡಿಯಿಂದ ಟೆಂಪೋದಲ್ಲಿ ಬರುತ್ತಿದ್ದರು. ಇಂದು ನಸುಕಿನ 3 ಗಂಟೆ ವೇಳೆಗೆ ನೌಫಾಲ್ ಸ್ಕೂಟರ್ ನಲ್ಲಿ ಬಂದಿದ್ದರು. ಮಂಗಳೂರಿಂದ ಕಲ್ಲಾಪಿನ ಕಡೆಗೆ ಸ್ಕೂಟರಲ್ಲಿ ಧಾವಿಸುತ್ತಿದ್ದ ವೇಳೆ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಯನ್ನು ಗಮನಿಸದೆ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ.

 

ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ನೌಫಾಲ್ ಆಸ್ಪತ್ರೆ ಸಾಗಿಸುವ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಸ್ಕೂಟರ್ ಸವಾರ ಕೂಡ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Two scooters crashed into a truck that was parked on the Netravati bridge as it had suffered a breakdown. While the rider of a scooter died and pillion seriously injured. The deceased is identified as Mohammed Naufal (26), a resident of Angaragundi. Pillion rider Ummer Farukh was seriously injured.