ಬೆಕ್ಕನ್ನು ಕಾರಿನಲ್ಲಿ ಆಸ್ಪತ್ರೆಗೆ ಒಯ್ದು ಬರುತ್ತಿದ್ದಾಗ ಅಪಘಾತ ; ಬೆಕ್ಕಿನ ಜೊತೆಗೆ ವ್ಯಕ್ತಿಯೂ ಸಾವು

13-03-23 09:52 pm       Mangalore Correspondent   ಕರಾವಳಿ

ಸಾಕು ಬೆಕ್ಕಿಗೆ ಹುಷಾರಿಲ್ಲವೆಂದು ಪಶು ಆಸ್ಪತ್ರೆಗೆ ಕೊಂಡೊಯ್ದು ಓಮ್ನಿ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಪಿಕಪ್ ಟೆಂಪೋ ವಾಹನ ಡಿಕ್ಕಿಯಾಗಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಸಾಕು ಬೆಕ್ಕು ಮೃತಪಟ್ಟ ಘಟನೆ ಬಿಸಿ ರೋಡಿನಲ್ಲಿ ನಡೆದಿದೆ.

ಬಂಟ್ವಾಳ, ಮಾ.13: ಸಾಕು ಬೆಕ್ಕಿಗೆ ಹುಷಾರಿಲ್ಲವೆಂದು ಪಶು ಆಸ್ಪತ್ರೆಗೆ ಕೊಂಡೊಯ್ದು ಓಮ್ನಿ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಪಿಕಪ್ ಟೆಂಪೋ ವಾಹನ ಡಿಕ್ಕಿಯಾಗಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಸಾಕು ಬೆಕ್ಕು ಮೃತಪಟ್ಟ ಘಟನೆ ಬಿಸಿ ರೋಡಿನಲ್ಲಿ ನಡೆದಿದೆ.

ಬಿಸಿ ರೋಡಿನ ಹೊರಭಾಗದ ತಲಪಾಡಿ ಬಸ್ ನಿಲ್ದಾಣದ ಮುಂಭಾಗ ಘಟನೆ ನಡೆದಿದ್ದು, ಮರಗಳನ್ನು ಹೊತ್ತಿದ್ದ ಪಿಕಪ್ ವಾಹನ ಹೆದ್ದಾರಿಗೆ ಎಂಟ್ರಿಯಾಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ನೇರವಾಗಿ ಡಿಕ್ಕಿಯಾಗಿದೆ. ಕಾರು ಚಲಾಯಿಸುತ್ತಿದ್ದ ಬ್ರಹ್ಮರಕೂಟ್ಲು ನಿವಾಸಿ ರಾಜೇಶ್ ಶೆಟ್ಟಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ವೇಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಹುಷಾರಿಲ್ಲದ ಬೆಕ್ಕು ಕೂಡ ಅಪಘಾತದ ತೀವ್ರತೆಗೆ ಗಾಯಗೊಂಡು ಸ್ಥಳದಲ್ಲೇ ಸಾವು ಕಂಡಿದೆ. ಬೆಕ್ಕಿಗೆ ಔಷಧಿ ಪಡೆದು ಮನೆಗೆ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ.

The driver who was critically injured in a collision between a pick-up van and a car on the Talapady, Mangaluru – Bengaluru national highway succumbed to his injuries.The pick-up van, which was laden with wooden logs on the road beside the Talapady bus depot, entered the highway and rammed the car that was approaching from the opposite direction near the B C Road crossing.