ಬ್ರೇಕಿಂಗ್ ನ್ಯೂಸ್
13-03-23 10:51 pm Mangalore Correspondent ಕರಾವಳಿ
ಮಂಗಳೂರು, ಮಾ.13: ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಬಂದಿದೆ. ರಾಜಮೌಲ್ವಿ ನಿರ್ದೇಶನದ ಚಿತ್ರದ ಹಾಡಿಗೆ ಪ್ರಶಸ್ತಿ ಬಂದಿರುವುದು ಭಾರತದಲ್ಲಿ ಭಾರೀ ಸುದ್ದಿಯೂ ಆಗಿದೆ. ಇದೇ ವೇಳೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಮಂಗಳೂರು ಮೂಲದ ಕೆಥೋಲಿಕ್ ಮಹಿಳೆಯೊಬ್ಬರು ನಿರ್ದೇಶಿಸಿರುವ ತಮಿಳು ಕಿರುಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ.
ಆನೆ ಮತ್ತು ಮಾನವನ ಸಂಬಂಧ ಕುರಿತಾಗಿ ಕಾರ್ತಿಕಿ ಗೊನ್ಸಾಲ್ವಿಸ್ ಎಂಬ ಮಹಿಳೆ 'ದಿ ಎಲಿಫೆಂಟ್ ವಿಸ್ಪರರ್ ' ಎನ್ನುವ ಕಿರುಚಿತ್ರ ತಯಾರಿಸಿದ್ದಾರೆ. ಗುನೀತ್ ಮೋಂಗಾ 39 ನಿಮಿಷದ ಕಿರುಚಿತ್ರದ ನಿರ್ಮಾಪಕರು. ಈ ಚಿತ್ರ ಜಗತ್ತಿನ ಹೆಸರಾಂತ ಚಿತ್ರಗಳೊಂದಿಗೆ ಸ್ಪರ್ಧಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಮೂಲತಃ ವನ್ಯಜೀವಿ ಫೋಟೋಗ್ರಾಫರ್ ಆಗಿದ್ದ ಕಾರ್ತಿಕಿ ಮೊದಲ ಬಾರಿಗೆ ಕಿರುಚಿತ್ರ ತಯಾರಿಸಿದ್ದರು. ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವ ದಂಪತಿ ಎರಡು ಮರಿಯಾನೆಗಳನ್ನು ದತ್ತು ಪಡೆದು ಸಾಕುವುದು ಮತ್ತು ಅವರ ನಡುವಿನ ಬಾಂಧವ್ಯದ ಕತೆಯಿರುವ ಚಿತ್ರ ಅದಾಗಿದ್ದು, ಶ್ರೇಷ್ಠ ನಿರೂಪಣೆ ಮತ್ತು ವಿಭಿನ್ನ ಕತೆಯ ಕಾರಣಕ್ಕಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಂದಹಾಗೆ, ಕಾರ್ತಿಕಿ ಗೊನ್ಸಾಲ್ವಿಸ್ ಮಂಗಳೂರು ಮೂಲದವರು. ಅವರ ಮುತ್ತಜ್ಜ ಮಂಗಳೂರಿನ ಪ್ರತಿಷ್ಠಿತ ಕೆಥೋಲಿಕ್ ಕೋಪರೇಟಿವ್ ಬ್ಯಾಂಕ್ (ಎಂಸಿಸಿ) ಸಂಸ್ಥಾಪಕ ಪಿಎಫ್ಎಕ್ಸ್ ಸಲ್ದಾನ. ಕಾರ್ತಿಕಿ ಅವರ ತಂದೆ ತಿಮೋತಿ ಸಲ್ದಾನ ಆಗಿದ್ದು, ಐಐಟಿ ಮಾಂಡಿಯ ಸ್ಥಾಪಕರು. ತಿಮೋತಿ ಅವರು ಅಲಾನ್ ಗೊನ್ಸಾಲ್ವಿಸ್ ಅವರ ಮಗ. ಅಲಾನ್ ಅವರು ಪಿಎಫ್ಎಕ್ಸ್ ಸಲ್ದಾನ ಅವರ ಪುತ್ರಿ ಮೋನಿಕಾ ಗೊನ್ಸಾಲ್ವಿಸ್ ಅವರ ಪುತ್ರ. ಮಂಗಳೂರು ಮೂಲದ ಪ್ರತಿಷ್ಠಿತ ಕುಟುಂಬದ ಸದಸ್ಯೆಯಾದ ಕಾರ್ತಿಕಿ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ. ಇವರ ಕುಟುಂಬ ಈ ಹಿಂದೆ ಊಟಿಯಲ್ಲಿ ನೆಲೆಸಿದ್ದರಿಂದ ಕಾರ್ತಿಕಿ ತಮಿಳು ಭಾಷಿಗಳಾಗಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಕಾರ್ತಿಕಿ ಗೊನ್ಸಾಲ್ವಿಸ್ ಪ್ರಶಸ್ತಿಯನ್ನು ತನ್ನ ತಾಯ್ನಾಡಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಸ್ಲಮ್ ಡಾಗ್ ಮಿಲಿಯನೇರ್ ಅನ್ನುವ ಕಿರುಚಿತ್ರ ಹಲವು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಅದರಲ್ಲಿ ಪ್ರಮುಖ ಪಾತ್ರ ಮಾಡಿದ್ದ ಫ್ರೀಡಾ ಪಿಂಟೋ ಮಂಗಳೂರು ಮೂಲದವರು ಆಗಿದ್ದರು. ಇದೀಗ ಮಂಗಳೂರು ಮೂಲದ ಮತ್ತೊಬ್ಬ ಕೆಥೋಲಿಕ್ ಮಹಿಳೆ ಆಸ್ಕರ್ ಪ್ರಶಸ್ತಿ ಸುತ್ತಿನಲ್ಲಿ ಗೆದ್ದಿದ್ದಾರೆ.
March 12 evening was a significant and magnificent one for India in so many ways. RRR’s Naatu Naatu won Best Original Song and The Elephant Whisperers won Best Documentary Short at the 95th Oscars, making it a historic double win for India. Both films showcased the beauty of India and its diverse culture in such dramatically different ways.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 05:20 pm
Mangalore Correspondent
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm