ಆಜಾನ್ ಅವಹೇಳನ ; ಮಾಜಿ ಸಚಿವ ಈಶ್ವರಪ್ಪ ವಿರುದ್ಧ ರಾಷ್ಟ್ರಪತಿಗೆ ದೂರು 

14-03-23 10:22 pm       Mangalore Correspondent   ಕರಾವಳಿ

ಆಜಾನ್ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ ಮುಸ್ಲಿಂ ಸಂಘಟನೆಯೊಂದು ರಾಷ್ಟ್ರಪತಿಗೆ ದೂರು ನೀಡಿದೆ.‌

ಶಿವಮೊಗ್ಗ, ಮಾ.14 : ಆಜಾನ್ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ ಮುಸ್ಲಿಂ ಸಂಘಟನೆಯೊಂದು ರಾಷ್ಟ್ರಪತಿಗೆ ದೂರು ನೀಡಿದೆ.‌

ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ್ದ ಈಶ್ವರಪ್ಪ, ಮೈಕ್ ಹಾಕಿಕೊಂಡು ಕೂಗಿದರೆ ಮಾತ್ರ ಅಲ್ಲಾಹನಿಗೆ ಕೇಳಿಸೋದಾ.? ಅಲ್ಲಾಹ ಕಿವುಡನಾ ಎಂದು ಪ್ರಶ್ನೆ ಮಾಡಿದ್ದರು.

ಶಿವಮೊಗ್ಗದ ಪೀಸ್ ಆರ್ಗನೈಸೇಷನ್ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ದೂರು ಸಲ್ಲಿಕೆ ಮಾಡಿದ್ದಾರೆ.‌ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಮುಖಂಡರು ಆಗ್ರಹ ಮಾಡಿದ್ದಾರೆ.

Eshwarappa remarks over azaan in Mangalore, Muslim organization has filed a complaint to the President of India. Senior Bharatiya Janata Party (BJP) leader and former Karnataka minister KS Eshwarappa on Monday justified his controversial remarks against use of loudspeakers by the Muslim community for azaan, or a prayer call, saying he was expressing the sentiments of the common public.