ಬ್ರೇಕಿಂಗ್ ನ್ಯೂಸ್
18-03-23 07:41 pm Mangalore Correspondent ಕರಾವಳಿ
ಮಂಗಳೂರು, ಮಾ.18: ಗುಳಿಗ ದೈವಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವಮಾನಿಸಿದ್ದನ್ನು ಖಂಡಿಸಿ ತೀರ್ಥಹಳ್ಳಿಯಿಂದ ಕಾಂಗ್ರೆಸ್ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿಗಳು 50ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಂಗಳೂರಿಗೆ ವಾಹನ ಜಾಥಾ ಆಗಮಿಸಿದ್ದಾರೆ.
ಮಂಗಳೂರಿನ ಪಚ್ಚನಾಡಿ ಬಳಿಯ ಬಂದಲೆಯ ಶ್ರೀಮಂತ ರಾಜಗುಳಿಗ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿದ್ದಾರೆ. ದೈವಸ್ಥಾನದ ಎದುರು ಹರಿಕೆ ಮಾಡಿದ ಭಕ್ತರು, ಆರಗ ಜ್ಞಾನೇಂದ್ರ ಅವರು ಗುಳಿಗ ದೈವಕ್ಕೆ ಅವಮಾನ ಮಾಡಿದ್ದಾರೆ. ಆಮೂಲಕ ತೀರ್ಥಹಳ್ಳಿಯ ಜನತೆಗೆ ಮತ್ತು ಕರಾವಳಿಯ ದೈವದ ಆರಾಧಕರಿಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಗುಳಿಗ ದೈವವೇ ತನ್ನ ಕಾರಣಿಕ ತೋರಿಸಬೇಕು. ಶಿಕ್ಷೆ ಕೊಡು ಎಂದು ಬೇಡುವುದಿಲ್ಲ. ಅವರಿಗೆ ಒಳ್ಳೆಯ ಬುದ್ಧಿ ಕೊಡು ಎಂದು ಹೇಳುತ್ತೇವೆ. ಅಲ್ಲದೆ, ತನ್ನ ಶಕ್ತಿಯ ಮೂಲಕ ಪರಿಣಾಮ ತೋರಿಸಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.


ಅಲ್ಲದೆ, ನಾವು ಕಾಂಗ್ರೆಸ್ ಕಾರ್ಯಕರ್ತರೆಂದು ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ದೈವದ ಬಗ್ಗೆ ಭಕ್ತಿಯಿಟ್ಟು ಬಂದಿದ್ದೇವೆ. ತೀರ್ಥಹಳ್ಳಿಯ ಜನರ ಪರವಾಗಿ ಬಂದಿದ್ದೇವೆ. ನಾವು ಶಿವದೂತೆ ಗುಳಿಗೆ ನಾಟಕವನ್ನು ಮಾಡಿಸಿದ್ದೆವು. ಮೊನ್ನೆ 16 ಸಾವಿರ ಜನ ಸೇರಿದ್ದರು. ನಾಟಕವನ್ನು ನೋಡಿ ಆನಂದಿಸಿದ್ದಾರೆ, ದೈವದ ಕಾರಣಿಕ ನೋಡಿದ್ದಾರೆ. ಮುಂದೆ ಗುಳಿಗ ದೈವ ಅನುಗ್ರಹಿಸಿದರೆ ಇದಕ್ಕಿಂತ ದೊಡ್ಡ ರೀತಿಯಲ್ಲಿ ಅದೇ ನಾಟಕ ಆಯೋಜಿಸುತ್ತೇವೆ. 32 ಸಾವಿರ ಜನರನ್ನು ಸೇರಿಸುತ್ತೇವೆ. ಆದರೆ ಗುಳಿಗ ದೈವಕ್ಕೆ ಅಪಮಾನ ಮಾಡಿದ, ಗುಳಿಗನಿಗೆ ಜಾಪಾಳ ಗುಳಿಗೆ ಎಂದು ಅಣಕಿಸಿದ ಆರಗ ಜ್ಞಾನೇಂದ್ರ ತುಳುನಾಡಿನ ಯಾವುದಾದ್ರೂ ಗುಳಿಗನ ಕ್ಷೇತ್ರಕ್ಕೆ ಬಂದು ತಪ್ಪು ಯಾಚನೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದ ಜೊತೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೂಡ ಈ ಸಂದರ್ಭದಲ್ಲಿ ಜೊತೆಗಿದ್ದರು.
Insult to #Daiva, #Congress leaders pray to Daiva in Mangalore to punish #homeminister #AragaJnanendra by holding a rally from #Thirthahalli to #Mangalore. Jnanendra recently insulted ‘Guliga daiva’ during a programme organised at #Thirthahalli. pic.twitter.com/uHa5RQK6i5
— Headline Karnataka (@hknewsonline) March 18, 2023
Insult to Daiva, Congress leaders pray to Daiva in Mangalore to punish home minister Araga Jnanendra by holding a rally from Thirthahalli to Mangalore. Jnanendra recently insulted ‘Guliga daiva’ during a programme organised at Thirthahalli.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm