ಬ್ರೇಕಿಂಗ್ ನ್ಯೂಸ್
23-03-23 05:08 pm Mangalore Correspondent ಕರಾವಳಿ
ಬೆಳ್ತಂಗಡಿ, ಮಾ.23: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಣಕಾಸಿನಲ್ಲಿ ತುಂಬ ಬೆಳೆದಿದ್ದಾರೆ. ಹಾಗೆಂದು ಗಡಾಯಿಕಲ್ಲಿಗೆ ತಲೆ ತಾಗಿಸಲು ಹೋಗಬೇಡಿ. ತಲೆ ಗಟ್ಟಿ ಇದೆಯೆಂದು ಗಡಾಯಿಕಲ್ಲಿಗೆ ತಾಗಿಸಿದರೆ ತಲೆಯೇ ಒಡೆದು ಹೋದೀತು ಎಂದು ಮಾಜಿ ಶಾಸಕ ವಸಂತ ಬಂಗೇರ ಕುಟುಕಿದ್ದಾರೆ.
ಬೆಳ್ತಂಗಡಿಯಲ್ಲಿ ಸುದ್ದಿ ಉದಯ ಎಂಬ ಪತ್ರಿಕೆಯ ಉದ್ಘಾಟನೆ ಸಂದರ್ಭದಲ್ಲಿ ವಸಂತ ಬಂಗೇರ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹರೀಶ್ ಪೂಂಜ ನೇತೃತ್ವದಲ್ಲಿ ಆರಂಭಿಸುತ್ತಿರುವ ಸುದ್ದಿ ಉದಯ ಪತ್ರಿಕೆಗೆ ಶುಭ ಹಾರೈಸುತ್ತೇನೆ. ಹಾಗೆಂದು ತಲೆ ತಾಗಿಸಲು ಹೋಗಬೇಡಿ. ಹಾಗೆಯೇ ಪತ್ರಿಕೆಯನ್ನು ಒಂದು ರಾಜಕೀಯದ ಪರವಾಗಿ ಬೆಳೆಸಬೇಡಿ. ರಾಜಕೀಯ ಪರವಾಗಿ ಹೋದ ಪತ್ರಿಕೆ ಅಂತ್ಯ ಕಂಡಿದ್ದನ್ನು ನೋಡಿದ್ದೇವೆ.

ನಿಷ್ಪಕ್ಷಪಾತವಾಗಿ ಒಳ್ಳೆಯ ಸುದ್ದಿಯನ್ನು ಈ ಪತ್ರಿಕೆ ನೀಡಲೆಂದು ಹಾರೈಸುತ್ತೇನೆ. ಬೆಳಗ್ಗೆ ಹತ್ತು ಗಂಟೆಗೆ ಬಂದಿದ್ದೇನೆ, ಈಗ 11.30 ಗಂಟೆ ಆಗಿದೆ. ಈವರೆಗೂ ಶಾಸಕ ಪೂಂಜ ಬಂದಿಲ್ಲ. ಸರಿಯಾದ ಸಮಯಕ್ಕೆ ಶಾಸಕರು ಬರುತ್ತಾರೆಂದು ನಾನು ಟೈಮಿಗೇ ಬಂದಿದ್ದೆ. ಅವರು ದೊಡ್ಡವರು, ಹಣಕಾಸಿನಲ್ಲಿ ದೊಡ್ಡದಾಗಿ ಬೆಳೆದಿದ್ದಾರೆ. ಅವರ ನೇತೃತ್ವದಲ್ಲಿ ಪತ್ರಿಕೆಯೂ ಒಳ್ಳೆಯದಾಗಿ ಬೆಳೆಯಲಿ ಎಂದು ಹೇಳಿದರು.
#Former #Belthangady #MLA #VasanthBangera taunts MLA #HarishPoonja in private function pic.twitter.com/RdFtGxajLT
— Headline Karnataka (@hknewsonline) March 23, 2023
Former Belthangady MLA Vasanth Bangera taunts MLA Harish Poonja in private function. Says just because your head is strong doesn’t mean you can crash your head to the the rock. The video of this has gone viral on social media.
06-01-26 08:23 pm
Bangalore Correspondent
ಸಿನಿಮಾ ಥಿಯೇಟರ್ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ರೆ...
06-01-26 12:57 pm
ಅರಣ್ಯ ಸಚಿವ ಈಶ್ವರ ಖಂಡ್ರೆ ಎದುರಲ್ಲೇ ಕೈ ಕೈ ಮಿಲಾಯಿ...
05-01-26 10:06 pm
Devaraj Aras, CM Siddaramaiah: ದೀರ್ಘ ಮುಖ್ಯಮಂತ...
05-01-26 10:00 pm
ಶಾರ್ಟ್ ಸರ್ಕಿಟ್ ; ಹೊಗೆಯಿಂದ ಉಸಿರುಗಟ್ಟಿ ಮಂಗಳೂರು...
05-01-26 08:39 pm
06-01-26 12:40 pm
HK News Desk
ಹರಿದ್ವಾರ - ಹೃಷಿಕೇಶ ಪರಿಸರದಲ್ಲಿ ಹಿಂದುಯೇತರ ವ್ಯಕ್...
05-01-26 02:13 pm
Venezuelan President Maduro: ವೆನಿಜುವೆಲಾ ಅಧ್ಯಕ...
04-01-26 06:38 pm
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
06-01-26 08:25 pm
Mangalore Correspondent
ನವೋದಯ ಟ್ರಸ್ಟ್ ನಿಂದ ಮಹಿಳಾ ಸಬಲೀಕರಣಕ್ಕೆ ಕೊಡುಗೆ ;...
06-01-26 07:51 pm
ಕೋಳಿ ಅಂಕದ ಮೇಲೆ ತೋರುವ ಕಾಳಜಿ, ಸೂರಿಲ್ಲದೆ ಬೀದಿಗೆ...
06-01-26 04:09 pm
ಜ.9ರಿಂದ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ, ಟ್ರಯತ್ಲಾ...
06-01-26 04:01 pm
ಪ್ರೇಮ ವೈಫಲ್ಯ ; ಗುರುಪುರ ನದಿಗೆ ಹಾರಿ ಯುವತಿ ಆತ್ಮಹ...
05-01-26 05:11 pm
06-01-26 07:04 pm
Bangalore Correspondent
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm