ಬೊಮ್ಮಾಯಿ ಮುಂದುವರಿಕೆ ; ಅದನ್ನು ಈಗಲೇ ಹೇಳುವಂತಿಲ್ಲ, ಸಂಸದೀಯ ಕಮಿಟಿ ನಿರ್ಧರಿಸುತ್ತದೆ ಎಂದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ 

24-03-23 03:08 pm       Mangalore Correspondent   ಕರಾವಳಿ

ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ನೇತೃತ್ವದಲ್ಲಿಯೇ ಚುನಾವಣೆ ಹೋಗುತ್ತೇವೆ. ಮುಂದೆ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನೋದನ್ನು ಈಗಲೇ ಹೇಳಲಾಗದು‌.

ಮಂಗಳೂರು, ಮಾ.24 : ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ನೇತೃತ್ವದಲ್ಲಿಯೇ ಚುನಾವಣೆ ಹೋಗುತ್ತೇವೆ. ಮುಂದೆ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನೋದನ್ನು ಈಗಲೇ ಹೇಳಲಾಗದು‌. ಅದನ್ನು ಸಂಸದೀಯ ಕಮಿಟಿ ನಿರ್ಧರಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದ್ದಾರೆ. ‌

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರಲ್ಲಿ, ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ಇರೋದಿಲ್ಲ, ಬ್ರಾಹ್ಮಣ ಮುಖ್ಯಮಂತ್ರಿ ಮಾಡ್ತಾರೆ ಎಂದು ವಿಪಕ್ಷ ನಾಯಕರು ಅರೋಪ ಮಾಡಿದ್ದಾರೆ ಎಂಬ ಪ್ರಶ್ನೆ ಮುಂದಿಡಲಾಯ್ತು. ಬೊಮ್ಮಾಯಿ ಅವರನ್ನೇ ಮುಂದುವರಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ, ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿ ಆಗಬೇಕೆಂದು ಸಂಸದೀಯ ಸಮಿತಿಯಲ್ಲಿ ಚರ್ಚೆ ಆಗುತ್ತದೆ ಎಂದರು. 

No nod for Cabinet expansion, says Karnataka CM Bommai after meeting with  Amit Shah | Cities News,The Indian Express

ಕೆ.ಎಸ್ ಈಶ್ವರಪ್ಪ ಕೋಮು ಭಾವನೆ ಕೆರಳಿಸುವ ಭಾಷಣ ಮಾಡ್ತಾರೆ, ನಳಿನ್ ಕುಮಾರ್ ಲವ್ ಜಿಹಾದ್ ಬಗ್ಗೆ ಮಾತನಾಡಲು ಕರೆ ಕೊಡುತ್ತಾರೆ.. ಇದನ್ನು ನೀವು ಒಪ್ಪಿಕೊಳ್ತೀರಾ.. ಎಂಬ ಪ್ರಶ್ನೆಗೆ, ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶ ಸೌದಿ ಅರೇಬಿಯಾದಲ್ಲಿ ಲೌಡ್ ಸ್ಪೀಕರ್ ಹಾಕಲು ಅವಕಾಶ ಇಲ್ಲ. ಆದರೆ ಭಾರತದಲ್ಲಿ ಧ್ವನಿ ವರ್ಧಕ ಬಳಕೆಗೆ ಅವಕಾಶ ಇದೆ. ಹಾಗಂತ, ಸ್ವೇಚ್ಚಾಚಾರ ಮಾಡುವುದಕ್ಕೆ ಅವಕಾಶ ಇಲ್ಲ. ಹಿಂದೆ 1995ರಿಂದಲೇ ಸಿಮಿ ಎನ್ನುವ ಸಂಘಟನೆ ಕೇರಳದಲ್ಲಿ ಹಿಂದು, ಕ್ರಿಸ್ತಿಯನ್ನರನ್ನು ಟಾರ್ಗೆಟ್ ಮಾಡಿತ್ತು. ಅಲ್ಲಿನ ಆಡಳಿತ ತಡವಾಗಿಯಾದರೂ ಸಿಮಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೇಳಿತ್ತು. ಪಿಣರಾಯಿ ವಿಜಯನ್ ಮಾತ್ರ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿರಲಿಲ್ಲ ಎಂದರು.‌ 

ರಾಜ್ಯದಲ್ಲಿ ಬಿಜೆಪಿ ಎಂಎಲ್ಸಿಗಳು, ಮುಖಂಡರೇ ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂಬ ಪ್ರಶ್ನೆಗೆ, ಚುನಾವಣೆ ವೇಳೆಗೆ ಪಕ್ಷಾಂತರ ಆಗೋದು ಕಾಮನ್. ಇವರೆಲ್ಲ ದೊಡ್ಡ ಲೀಡರ್ ಗಳಲ್ಲ, ಪಂಜಾಬ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಅಮರಿಂದರ್ ಸಿಂಗ್ ನಂತವರೇ ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ ಎಂದರು. 

ನಲ್ವತ್ತು ಪರ್ಸೆಂಟ್ ಕಮಿಷನ್ ಆರೋಪದ ಪ್ರಶ್ನೆಗೆ, ಯಾವುದೇ ವ್ಯಕ್ತಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದರೂ, ಅದನ್ನು ಮುಚ್ಚಿಟ್ಡರೂ ಅಪರಾಧವೇ. ಈ ಬಗ್ಗೆ ನೈಜ ಆರೋಪ ಇದ್ದರೆ, ಯಾಕೆ ದೂರು ನೀಡಿಲ್ಲ. ಸಾಂವಿಧಾನಿಕ ಸಂಸ್ಥೆಗೆ ಕ್ರಮ ತಗೊಳ್ಳಲು ಯಾಕೆ ಆಗ್ರಹ ಮಾಡಿಲ್ಲ. ಹಿಂದೆ ಕಾಂಗ್ರೆಸ್ ಕಾಲದಲ್ಲಿ 85 ಪರ್ಸೆಂಟ್ ಕಮಿಷನ್ ಪದ್ಧತಿ ಇತ್ತು. ಅಂಥ ಸ್ಥಿತಿ ಈಗ ಇಲ್ಲ ಎಂದರು. 

BJP moves to get Rahul Gandhi suspended from Lok Sabha over UK remarks |  Deccan Herald

ರಾಹುಲ್ ಗಾಂಧಿ ಜೈಲು ಶಿಕ್ಷೆ ವಿಚಾರದ ಬಗ್ಗೆ ಕೇಳಿದ್ದಕ್ಕೆ, ರಾಹುಲ್ ಬಗ್ಗೆ ಕೋರ್ಟ್ ತೀರ್ಪು ನೀಡಿರುವುದು. ಅದರ ಬಗ್ಗೆ ಕಮೆಂಟ್ ಮಾಡಲ್ಲ. ಆದರೆ ಕೋರ್ಟ್ ತೀರ್ಪಿನ ಬಗ್ಗೆ ಸತ್ಯಕ್ಕೆ ಜಯ ಎಂದು ಕಾಂಗ್ರೆಸ್ ಮುಖಂಡ ಪವನ್ ಖೇರಾ ಹೇಳಿದ್ದಾರೆ. ನೀವು ಕೋರ್ಟ್ ತೀರ್ಪನ್ನು ಗೌರವಿಸುತ್ತೀರಾ.. ಭಯೋತ್ಪಾದನೆಗೆ ಧರ್ಮವಿಲ್ಲ ಎಂದಿದ್ದರು. ಭ್ರಷ್ಟಾಚಾರಕ್ಕೂ ಅಷ್ಟೇ. ಕ್ಷುಲ್ಲಕವಾಗಿ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.‌

Will focus on strengthening saffron party in south: Yediyurappa

ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದ್ದೀರಾ ಎಂಬ ಪ್ರಶ್ನೆಗೆ, ಯಡಿಯೂರಪ್ಪ ಅವರನ್ನು ಪ್ರಧಾನಿ ಅವರೇ ಗೌರವಿಸಿದ್ದಾರೆ.‌ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ವೀಕ್ಷಕರಾಗಿ ಕರೆಸಿಕೊಂಡಿದ್ದರು. ಅವರೇ ನಮ್ಮ ನಾಯಕರು, ಅದರಲ್ಲಿ ಎರಡು ಮಾತಿಲ್ಲ ಎಂದರು.

Chief Minister Basavaraj Bommai has done a good job in the state. We will go to the polls under his leadership. It is too early to say who will be the next chief minister. It will be decided by the parliamentary committee," BJP national spokesperson and Rajya Sabha member Sudhanshu Trivedi said.