ಖಾಸಗಿ ಬಸ್ ಧಾವಂತಕ್ಕೆ ಮತ್ತೊಂದು ಬಲಿ ; ಬಸ್ಸಿಳಿದು ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಹರಿದ ಬಸ್ ! 

30-03-23 02:02 pm       Mangalore Correspondent   ಕರಾವಳಿ

ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಧಾವಂತದ ಚಾಲನೆಗೆ ಮಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಹನ್ನೊಂದು ವರ್ಷದ ಮಗುವನ್ನು ಬಲಿ ಪಡೆದಿದ್ದ ಬೆಂದೂರುವೆಲ್ ಸರ್ಕಲ್ ನಲ್ಲಿಯೇ ಮಹಿಳೆಯೊಬ್ಬರು ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾರೆ. 

ಮಂಗಳೂರು, ಮಾ.30 : ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಧಾವಂತದ ಚಾಲನೆಗೆ ಮಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಹನ್ನೊಂದು ವರ್ಷದ ಮಗುವನ್ನು ಬಲಿ ಪಡೆದಿದ್ದ ಬೆಂದೂರುವೆಲ್ ಸರ್ಕಲ್ ನಲ್ಲಿಯೇ ಮಹಿಳೆಯೊಬ್ಬರು ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾರೆ. 

ಸರಿಪಲ್ಲದಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ವರೆಗೆ ತೆರಳುವ 4ಬಿ ಆಸ್ಲೆನ್ ಟ್ರಾವೆಲ್ಸ್ ಎಂಬ ಹೆಸರಿನ ಬಸ್ ಬೆಂದೂರುವೆಲ್ ವೃತ್ತದಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಹೋಗುವ ಯತ್ನದಲ್ಲಿ ಅದೇ ಬಸ್ಸಿನಿಂದ ಇಳಿದು ಹೋಗಿದ್ದ ಮಹಿಳೆಯ ಮೇಲೆ ಹರಿದು ಹೋಗಿದೆ. 

ಐರಿನ್ ಡಿಸೋಜ(65) ಎಂಬ ಮಹಿಳೆ ಬಸ್ಸಿನಿಂದ ಇಳಿದು ರಸ್ತೆ ದಾಟಲೆಂದು ಬಸ್ಸಿನ ಮುಂಭಾಗದಿಂದ ತೆರಳುತ್ತಿದ್ದಾಗ ಬಸ್ ಚಾಲಕ ನೇರವಾಗಿ ಬಸ್ ಚಲಾಯಿಸಿದ್ದಾನೆ. ಮಹಿಳೆಯ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಬಸ್ ಚಾಲಕನನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂದೂರುವೆಲ್ ವೃತ್ತದಲ್ಲಿ ನಾಲ್ಕು ದಿನಗಳ ಹಿಂದೆ ಸ್ಕೂಟಿಯಲ್ಲಿ ಹೋಗುತ್ತಿದ್ದ ತಾಯಿ ಮತ್ತು ಮಗನ ಮೇಲೆ ಬಸ್ ಡಿಕ್ಕಿಯಾಗಿತ್ತು. ಹನ್ನೊಂದು ವರ್ಷದ ಮಗು ಸ್ಥಳದಲ್ಲೇ ದುರಂತ ಸಾವನ್ನಪ್ಪಿದ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ದುರ್ಘಟನೆ ನಡೆದಿದೆ.

Bendoor Accident: ಖಾಸಗಿ ಬಸ್ ಧಾವಂತಕ್ಕೆ 5ನೇ ಕ್ಲಾಸ್ ವಿದ್ಯಾರ್ಥಿ ಬಲಿ ; ತಾಯಿ ಜೊತೆಗೆ ತೆರಳುತ್ತಿದ್ದಾಗ ಬಸ್ ಡಿಕ್ಕಿ, ನಿಯಂತ್ರಣ ತಪ್ಪಿದ ಬಸ್ಸುಗಳ ನಾಗಾಲೋಟ !

Mangalore Bendoorwell accident, 65 year old woman killed on spot while crossing road. The deceased has been identified as Irine Dsouza. Recently 11 year old boy was killed in bus accident.