ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ನಟ ವಿಜಯ ರಾಘವೇಂದ್ರ ; ಬಾಮೈದ ರಕ್ಷಿತ್ ಗೆಲುವಿಗೆ ನಿಲ್ತೇನೆ ಎಂದ ನಟ 

15-04-23 12:44 pm       Mangalore Correspondent   ಕರಾವಳಿ

ಬೆಳ್ತಂಗಡಿ ಚುನಾವಣಾ ಅಖಾಡಕ್ಕೆ ನಟ ವಿಜಯ ರಾಘವೇಂದ್ರ ಎಂಟ್ರಿಯಾಗಿದ್ದಾರೆ. ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ನಟ ವಿಜಯ ರಾಘವೇಂದ್ರ ಬೆಂಬಲ ಸೂಚಿಸಿದ್ದು ಪ್ರಚಾರ ಆರಂಭಿಸಿದ್ದಾರೆ. 

ಬೆಳ್ತಂಗಡಿ, ಎ.15 : ಬೆಳ್ತಂಗಡಿ ಚುನಾವಣಾ ಅಖಾಡಕ್ಕೆ ನಟ ವಿಜಯ ರಾಘವೇಂದ್ರ ಎಂಟ್ರಿಯಾಗಿದ್ದಾರೆ. ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ನಟ ವಿಜಯ ರಾಘವೇಂದ್ರ ಬೆಂಬಲ ಸೂಚಿಸಿದ್ದು ಪ್ರಚಾರ ಆರಂಭಿಸಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಟ ವಿಜಯ ರಾಘವೇಂದ್ರ ಪತ್ನಿಯ ಸೋದರನಾಗಿದ್ದು ಸಂಬಂಧದಲ್ಲಿ ಬಾಮೈದ. ಹೀಗಾಗಿ ಕುಟುಂಬ ಸಮೇತರಾಗಿ ರಕ್ಷಿತ್ ಶಿವರಾಂ ಪರ ಬೆಂಬಲ ಸೂಚಿಸಲು ವಿಜಯ ರಾಘವೇಂದ್ರ ಬೆಳ್ತಂಗಡಿಗೆ ಆಗಮಿಸಿದ್ದಾರೆ. ಏಪ್ರಿಲ್ 17 ರಂದು ರಕ್ಷಿತ್ ನಾಮಪತ್ರ ಸಲ್ಲಿಸಲಿದ್ದು ಈ ವೇಳೆ ರಕ್ಷಿತ್ ಶಿವರಾಂ ಜೊತೆ ವಿಜಯ ರಾಘವೇಂದ್ರ ಸಾಥ್ ಕೊಡಲಿದ್ದಾರೆ. 

ರಾಜಕೀಯ ಎಂಟ್ರಿ ಬಗ್ಗೆ ವಿಜಯ ರಾಘವೇಂದ್ರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ರಕ್ಷಿತ್ ಶಿವರಾಂ ನನ್ನ ಬಾಮೈದ. ಅವರ ಪರ ನಿಲ್ಲುವುದು ನನ್ನ ಕರ್ತವ್ಯವಾಗಿದ್ದು ನಾನು ರಕ್ಷಿತ್ ಶಿವರಾಂ ಪರವಾಗಿ ಬಂದಿದ್ದೇನೆ. ರಕ್ಷಿತ್ ಶಿವರಾಂ ನಮ್ಮ ಮನೆಯವರು. ನಾನು ರಕ್ಷಿತ್ ಅವರ ಪ್ರತಿ ಕೆಲಸದಲ್ಲಿ ಅವರ ಜೊತೆ ನಿಂತಿದ್ದೇನೆ. ಅವರು ನನ್ನ ಜೊತೆ ಬಲವಾಗಿ ನಿಂತಿದ್ದರು. ಅ ಪಕ್ಷ ಈ ಪಕ್ಷ ಅಂತ ಅಲ್ಲ ನಮಗೆ ರಕ್ಷಿತ್ ಮುಖ್ಯ ಎಂದು ನಟ ವಿಜಯ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.

Acror Vijay Raghavendra to campaign for Rakshith Shivaram in Belthangady.