ಬ್ರೇಕಿಂಗ್ ನ್ಯೂಸ್
06-06-23 11:00 pm Mangalore Correspondent ಕರಾವಳಿ
ಮಂಗಳೂರು, ಜೂನ್ 6: ರಾಜ್ಯದ ಜನ ಬಿಜೆಪಿ ಮೇಲಿನ ಆಕ್ರೋಶದಿಂದ ನಮಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಅದರ ನಾಯಕತ್ವ ನಂಬಿ ನಮಗೆ 135 ಸೀಟ್ ಕೊಟ್ಟಿದ್ದಾರೆ. ನಾವು ಐದು ಗ್ಯಾರಂಟಿ ತಯಾರು ಮಾಡಿ ಕೊಟ್ಟಿದ್ದೆವು. ನಾವೇನು ಗ್ಯಾರಂಟಿ ಘೋಷಣೆಯನ್ನು ಬೇಕಾಬಿಟ್ಟಿ ತೀರ್ಮಾನಿಸಿರಲಿಲ್ಲ. ಹಣಕಾಸು ಖರ್ಚಿನ ಲೆಕ್ಕಾಚಾರ ಮಾಡಿ ಸಾದ್ಯತೆ ಬಳಿಕ ಪ್ರಕಟ ಮಾಡಿದ್ದೆವು ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿದ್ದ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ, ಕಾರ್ಯಕರ್ತರನ್ನುದ್ದೇಶಿ ಪರಮೇಶ್ವರ್ ಭಾಷಣ ಮಾಡಿದರು. ನಾವು ಯಾವುದೇ ಬೇಜವಾಬ್ದಾರಿಯಿಂದ ಗ್ಯಾರಂಟಿ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಗ್ಯಾರಂಟಿ ಕೊಟ್ಟು ದಿವಾಳಿ ಮಾಡುತ್ತೆ ಅಂತ ಬಿಜೆಪಿ ಮತ್ತು ಮೋದಿ ಹೇಳ್ತಾ ಇದಾರೆ. ಆದರೆ ನಾವು ಗ್ಯಾರಂಟಿ ಘೋಷಣೆಯನ್ನು ಯಾವುದೇ ಬೇಜವಾಬ್ದಾರಿಯಿಂದ ಮಾಡಿರಲಿಲ್ಲ ಎಂದರು.
ಗೃಹ ಇಲಾಖೆ ನನಗೆ ಈ ಬಾರಿ ಹ್ಯಾಟ್ರಿಕ್ ಸಿಕ್ಕಿದೆ, ಈ ಖಾತೆ ಕೊಟ್ಟಾಗ ನಾನು ಸಿದ್ದರಾಮಯ್ಯರಿಗೆ ಹೇಳಿದೆ. ನಿಮಗೆ ಯಾಕೆ ಇಷ್ಟು ಪ್ರೀತಿ? ಜನರಿಗೆ ಸೇವೆ ಮಾಡಲು ಬೇರೆ ಖಾತೆ ಕೊಡಿ ಅಂದೆ. ಸೆಲ್ಯೂಟ್ , ಸೆಲ್ಯೂಟ್ ಒಂದೇ ಆಯ್ತು ನನಗೆ ಅಂದಿದ್ದೆ. ಆದರೆ ಅವರು ದ.ಕ ಜಿಲ್ಲೆಯರಿಗೆ ನೀವೇ ಹೋಂ ಮಿನಿಸ್ಟರ್ ಆಗಬೇಕು ಅಂದ್ರು.
ಸದ್ಯ ಪೊಲೀಸರ ಸಭೆ ನಡೆಸಿ ಕಠಿಣ ಕ್ರಮಗಳ ಬಗ್ಗೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿ ಸಹಿಸಲ್ಲ ಅಂದಿದ್ದೇನೆ. ಪ್ರಣಾಳಿಕೆ ರಚನೆ ವೇಳೆ ಚೇಂಬರ್ ಆಫ್ ಕಾಮರ್ಸ್ ನವರು ಹೇಳಿದ್ದರು. ಕೋಮು ವಿಚಾರದ ಕಾರಣಕ್ಕೆ ಇಲ್ಲಿ ಇನ್ವೆಸ್ಟ್ ಮೆಂಟ್ ಬರಲ್ಲ ಅಂದ್ರು. ಅದಕ್ಕಾಗಿ ಇಲ್ಲಿನ ವಾತಾವರಣ ಬದಲಾಗಬೇಕು. ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಖಡಕ್ ಸೂಚನೆ ಕೊಟ್ಟಿದ್ದೇನೆ.
ಮೊದಲು ಹೇಗೆ ಇದ್ರೋ ಗೊತ್ತಿಲ್ಲ, ಏನೇನ್ ಆಟ ಆಡಿದ್ರೋ ಗೊತ್ತಿಲ್ಲ. ಕೇಸರಿಕರಣ ಮಾಡಿದ್ರೋ ಮತ್ತೊಂದು ಈಗ ನನಗೆ ಅಗತ್ಯ ಇಲ್ಲ. ಆದರೆ ಇನ್ನು ಮುಂದೆ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು. ಮಾಡದೇ ಇದ್ರೆ ನಮ್ಮ ಔಷಧಾಲಯದಲ್ಲಿ ಬೇರೆ ಔಷಧಿ ಇದೆ ಎಂದು ಖಡಕ್ಕಾಗಿ ಹೇಳಿದರು. ಮತ್ತೆ ಗೃಹ ಸಚಿವ ಸ್ಥಾನದ ಪೋಸ್ಟ್ ನನಗೇ ಸಿಕ್ಕಿದೆ, ನಾನು ಈ ಜಿಲ್ಲೆಯನ್ನ ಸರಿ ಮಾಡ್ತೇನೆ. ಇಲ್ಲಿ ಕಾಂಗ್ರೆಸ್ ಸೋತಿದೆ ಅನ್ನೋ ಭಾವನೆ ಬೇಡ. ಇವತ್ತು ಅಧಿಕಾರ ಸಿಕ್ಕಿದೆ, ಸರ್ಕಾರ ನಿಮ್ಮ ಸರ್ಕಾರ, ನಿಮ್ಮ ಜೊತೇಲಿ ಇರಲಿದೆ ಎಂದರು.
If Police Department doesn't work duly we have a medicine for them says Home Minister G. Parameshwara in Mangalore.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm