ಬ್ರೇಕಿಂಗ್ ನ್ಯೂಸ್
03-07-23 10:31 pm Mangalore Correspondent ಕರಾವಳಿ
ಮಂಗಳೂರು, ಜುಲೈ 3: ನೂರಾರು ಬೀದಿ ನಾಯಿಗಳಿಗೆ ಊಟ ಹಾಕುವ ಮಂಗಳೂರಿನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಅವರ ಮೇಲೆ ನೆರೆಮನೆಯ ನಿವಾಸಿ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ.
ಮಂಜುಳಾ ಶೆಟ್ಟಿ ಎಂಬ ಮಹಿಳೆ ರಜನಿ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ. ಹಲ್ಲೆಗೀಡಾದ ರಜನಿ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ. ರಜನಿ ಅವರು ತನ್ನ ಬಾಡಿಗೆ ಮನೆಯಲ್ಲಿದ್ದುಕೊಂಡೇ ದಿನವೂ ನೂರಾರು ಬೀದಿ ನಾಯಿಗಳಿಗೆ ಅನ್ನ ಬೇಯಿಸಿ ಹಾಕುತ್ತ ಬಂದಿದ್ದಾರೆ.


ಬೀದಿ ನಾಯಿಗಳು ಮನೆಯ ಸುತ್ತ ಸೇರುತ್ತಿದ್ದ ವಿಚಾರದಲ್ಲಿ ರಜನಿ ಮತ್ತು ಮಂಜುಳಾ ನಡುವೆ ಜಗಳ ಆಗುತ್ತಿತ್ತು. ಇಂದು ಬೆಳಗ್ಗೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಎನ್ನಲಾಗುತ್ತಿದೆ. ರಜನಿ ಶೆಟ್ಟಿಯವರ ಕೈಗೆ ಗಾಯವಾಗಿದೆ. ಎರಡು ವರ್ಷಗಳಿಂದ ನನ್ನ ಜೊತೆ ಜಗಳ ಮಾಡುತ್ತಿದ್ದಾಳೆ. ನೀರಿನ ಬಳಕೆ ವಿಚಾರದಲ್ಲೂ ಬೈಯುತ್ತಿದ್ದಳು. ಪ್ರತಿ ಬಾರಿ ಎಲ್ಲ ನಾಯಿಗಳಿಗೆ ಮತ್ತು ತನಗೆ ವಿಷ ಹಾಕಿ ಕೊಂದು ಹಾಕುವುದಾಗಿ ಬೆದರಿಸುತ್ತಿದ್ದಳು. ಇವತ್ತು ನನ್ನ ಮೇಲೆ ಕಲ್ಲು ತೂರಿದ್ದಾಳೆ. ನಾನು ನಾಯಿಗಳನ್ನು ಪೋಷಣೆ ಮಾಡುವುದನ್ನು ಬಿಡಬೇಕು ಮತ್ತು ಆ ಸ್ಥಳದಿಂದ ಎದ್ದು ಹೋಗಬೇಕು ಎಂಬುದು ಆಕೆಯ ಬಯಕೆ. ನಾನು 22 ವರ್ಷಗಳಿಂದ ನಾಯಿಗಳ ಜೊತೆಗಿದ್ದು ನನಗೆ ಯಾವುದೇ ಆರೋಗ್ಯ ತೊಂದರೆ ಆಗಿಲ್ಲ ಎಂದು ರಜನಿ ಶೆಟ್ಟಿ ತಿಳಿಸಿದ್ದಾರೆ.
ಹಲ್ಲೆ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರಜನಿ ತನ್ನ ಮನೆಯಲ್ಲಿ ತೊಂದರೆಗೊಳಗಾದ ಬೀದಿ ನಾಯಿಗಳು, ಬೆಕ್ಕು, ಪಕ್ಷಿಗಳನ್ನು ಆರೈಕೆ ಮಾಡಿ ಸಾಕುತ್ತಿದ್ದಾರೆ.
Mangalore stray animal caretaker Rajani Shetty assaulted by neighbour over looking after dogs.Rajani was hit with a stone by her neighbour Manjula Shetty injuring her in the process. Rajani will file a complaint against Manjula
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 10:47 pm
Mangalore Correspondent
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm