ಬ್ರೇಕಿಂಗ್ ನ್ಯೂಸ್
25-07-23 10:08 pm Mangalore Correspondent ಕರಾವಳಿ
ಮಂಗಳೂರು, ಜುಲೈ 25: ಮಂಗಳೂರಿನ ಹೆಸರಾಂತ ಉದ್ಯಮಿ ಅರ್ಜುನ್ ಮೊರಾಸ್ ಮತ್ತೊಂದು ಲಕ್ಸುರಿ ಕಾರನ್ನು ಖರೀದಿಸಿದ್ದಾರೆ. ಸ್ಪೋರ್ಟ್ಸ್ ಕಾರು, ಲಕ್ಸುರಿ ಕಾರುಗಳನ್ನು ಖರೀದಿಸುವ ಕ್ರೇಜ್ ಬೆಳೆಸಿಕೊಂಡಿರುವ ಅರ್ಜುನ್ ಮೊರಾಸ್ ಈ ಬಾರಿ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಮಾಡೆಲ್ ಕಾರನ್ನು ಖರೀದಿಸಿ ಮಂಗಳೂರಿಗೆ ಹೆಸರು ತಂದಿದ್ದಾರೆ.
ಅಂದಹಾಗೆ, ಈ ದುಬಾರಿ ಕಾರಿನ ಬೆಲೆ 7.6 ಕೋಟಿ ರೂ. ಆಗಿದ್ದು, ಭಾರತದಲ್ಲಿ ಖರೀದಿಯಾದ ಈ ಮಾಡೆಲಿನ ಎರಡನೇ ಕಾರು ಇದಾಗಿದೆ. ಮೊದಲ ಕಾರನ್ನು ಭೀಮಾ ಜುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ, ಮುಂಬೈ ಮೂಲದ ಗೋವಿಂದನ್ ಖರೀದಿಸಿದ್ದಾರೆ ಎಂದು ಗೂಗಲ್ ಮಾಹಿತಿ ನೀಡುತ್ತದೆ. ಅರ್ಜುನ್ ಮೊರಾಸ್ ಈ ಹಿಂದೆಯೂ ಅತಿ ದುಬಾರಿ ಲಕ್ಸುರಿ ಕಾರುಗಳನ್ನು ಖರೀದಿಸಿ ಗಮನ ಸೆಳೆದಿದ್ದರು. ಆಡಿ, ಬಿಎಂಡಬ್ಲ್ಯು, ಆಸ್ಟಿನ್ ಮಾದರಿಯ ಕಾರುಗಳನ್ನು ಮೊದಲ ಬಾರಿಗೆ ಮಂಗಳೂರಿಗೆ ತಂದಿದ್ದ ಹೆಗ್ಗಳಿಕೆ ಅರ್ಜುನ್ ಮೊರಾಸ್ ಅವರಿಗೆ ಸಲ್ಲುತ್ತದೆ.
2018ರಲ್ಲಿ ಆಸ್ಟನ್ ಮಾರ್ಟಿನ್ ವ್ಯಾಂಕ್ವಿಶ್ ಎನ್ನುವ ಹೆಸರಿನ ದುಬಾರಿ ಕಾರನ್ನು ಮೊರಾಸ್ ಖರೀದಿಸಿದ್ದರು. ಅದರ ಬೆಲೆ 7.18 ಕೋಟಿ ಆಗಿತ್ತು. ಆಸ್ಟನ್ ಮಾರ್ಟಿನ್ ಸರಣಿಗಳು ಇಂಗ್ಲೆಂಡ್ ನಲ್ಲಿ ತಯಾರಾಗುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದೆನಿಸಿದೆ. ದುಬಾರಿ ಮತ್ತು ಆಕರ್ಷಕ ಕಾರುಗಳನ್ನು ಕೊಳ್ಳುವ ಕ್ರೇಜ್ ಬೆಳೆಸಿಕೊಂಡಿರುವ ಅರ್ಜುನ್ ಮೊರಾಸ್, ಜಗತ್ತಿನ ಮುಂಚೂಣಿ ಕಾರುಗಳನ್ನು ತನ್ನದಾಗಿಸಿಕೊಳ್ಳುತ್ತಿರುವುದು ಮಂಗಳೂರಿನ ಹೆಸರನ್ನು ಜಗತ್ತಿನಲ್ಲಿ ದೊಡ್ಡ ಸ್ಥಾನಕ್ಕೇರಿಸಿದೆ. ಅಲ್ಲದೆ, ಆ ಕಾರುಗಳಿಗೆ ಮಂಗಳೂರಿನಲ್ಲೇ ರಿಜಿಸ್ಟರ್ ಮಾಡಿಸಿ ನಂಬರ್ ಹಾಕಿಸಿಕೊಳ್ಳುವುದು ಮೊರಾಸ್ ಹೆಗ್ಗಳಿಕೆ. ಇದೇ ಕಾರಣಕ್ಕೆ ದುಬಾರಿ ಕಾರುಗಳ ಕ್ರೇಜ್ ಮುಂಬೈ ಬಿಟ್ಟರೆ, ಸಣ್ಣ ಸಿಟಿಯಾದರೂ ಮಂಗಳೂರನ್ನು ಜಗತ್ತಿನೆತ್ತರಕ್ಕೆ ತಂದು ನಿಲ್ಲಿಸಿದೆ. ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಅತ್ಯಂತ ದುಬಾರಿ ಮತ್ತು ಕಾರಿನ ಕ್ರೇಜ್ ಇರುವ ಸಿಟಿಗಳಲ್ಲಿ ಮಂಗಳೂರಿಗೆ ಮೊದಲ ಸ್ಥಾನವನ್ನು ಸಮೀಕ್ಷೆಯೊಂದು ನೀಡಿತ್ತು.
Mangalore Entrepreneur Arjun Moraes is now the proud owner of an Aston Martin 707 DBX, the first in South India and the second in India. Arjun Moraes is the proud owner of the car, which was manufactured in the UK. In 2018, he was the proud owner of the Aston Martin Vanquish, which costs a cool Rs 7.18 crore. Arjun Moraes has a lot of interest in luxury cars, and he already owns several cars manufactured in different countries. He happens to be the first person from the city to buy Audi, BMW, and Aston cars. He makes it a point to register his cars in the city itself.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 10:13 pm
Mangalore Correspondent
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm