CM Siddaramaiah in Mangalore, Udupi video case: ಉಡುಪಿ ವಿಡಿಯೋ ಘಟನೆ ; ಡಿವೈಎಸ್ಪಿ ಅಧಿಕಾರಿ ತನಿಖೆ ಮಾಡಿದ ಬಳಿಕ ಎಸ್ಐಟಿ ಯಾಕ್ರೀ‌..? ಮಂಗಳೂರಿನಲ್ಲಿ ಸಿದ್ದರಾಮಯ್ಯ

01-08-23 12:29 pm       Mangalore Correspondent   ಕರಾವಳಿ

ಉಡುಪಿ ವಿಡಿಯೋ ಘಟನೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಸುಮೊಟೊ ಆಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.‌

ಮಂಗಳೂರು, ಆಗಸ್ಟ್ 1: ಉಡುಪಿ ವಿಡಿಯೋ ಘಟನೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಸುಮೊಟೊ ಆಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.‌ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ. ತನಿಖೆ ಆಗಿ ವರದಿ ಬರಲಿ, ಕ್ರಮ ತಗೋತೀವಿ ಎಂದಿದ್ದಾರೆ.‌

ಮುಖ್ಯಮಂತ್ರಿ ಆದಬಳಿಕ ಮೊದಲ ಬಾರಿಗೆ ಕರಾವಳಿಗೆ ಆಗಮಿಸಿದ ಸಿದ್ದರಾಮಯ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಉಡುಪಿ ಘಟನೆ ಬಗ್ಗೆ ಕೇಂದ್ರ ಮಹಿಳಾ ಆಯೋಗದವರು ಬಂದು ವರದಿ ಪಡೆದಿದ್ದಾರೆ.‌ ಕಾಲೇಜಿನಲ್ಲಿ ಯಾವುದೇ ಹಿಡನ್ ಕ್ಯಾಮರಾ ಇರಲಿಲ್ಲ ಎಂದಿದ್ದಾರೆ. 

ಎಸ್ಐಟಿ ರಚಿಸಿ ತನಿಖೆ ಮಾಡ್ತೀರಾ ಎಂಬ ಪ್ರಶ್ನೆಗೆ, ಡಿವೈಎಸ್ಪಿ ದರ್ಜೆಯ ಅಧಿಕಾರಿ ತನಿಖೆ ಮಾಡ್ತಾರೆಂದ ಮೇಲೆ ಎಸ್ಐಟಿ ಉದ್ಭವ ಆಗಲ್ಲ. ನಮ್ಮ ಪೊಲೀಸರು ಸ್ವತಂತ್ರರಿದ್ದಾರೆ. ತನಿಖೆ ಮಾಡ್ತಾರೆ, ಎಫ್ಎಸ್ಎಲ್ ವರದಿ ಬರಲಿ. ಕ್ರಮ ತಗೋತೀವಿ ಎಂದು ಹೇಳಿದ್ದಾರೆ.  

ಕರಾವಳಿಯಲ್ಲಿ ನೈತಿಕ ಪೊಲೀಸ್ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದ್ರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ. ಅದರಲ್ಲಿ ಮುಲಾಜು ಇಲ್ಲ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ. ಈಗಾಗಲೇ ಪೊಲೀಸರು ಕ್ರಮ ಕೈಗೊಳ್ತಿದ್ದಾರೆ. ಕಠಿಣ ಕ್ರಮಕ್ಕೆ ಸೂಚನೆ ನೀಡ್ತೇನೆ ಎಂದರು.‌

Udupi college Video, why SIT when investigation is under DYSP says CM Siddaramaiah in Mangalore. As BJP were demanding for SIT to investigate the case CM Siddaramaiah slammed at them.