ಬ್ರೇಕಿಂಗ್ ನ್ಯೂಸ್
01-08-23 02:45 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಎರಡನೇ ಬಾರಿಗೆ ಸಿಎಂ ಆದಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಲು ಮಹಿಳಾ ನಾಯಕಿಯರು ಪೈಪೋಟಿ ನಡೆಸಿದ್ದು ಇಬ್ಬರು ಕಿತ್ತಾಡಿಕೊಂಡ ಘಟನೆ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ತನ್ನ ಬೆಂಬಲಿಗರ ಜೊತೆ ಜೈಕಾರ ಹಾಕುತ್ತಾ ಹೂಗುಚ್ಛ ನೀಡಲು ಮುಂದೆ ಬಂದಿದ್ದಾರೆ. ಈ ವೇಳೆ, ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಅಡ್ಡ ಬಂದಿದ್ದು ಶಾಲೆಟ್ ಹತ್ತಿರ ಹೋಗದಂತೆ ತಡೆದಿದ್ದಾರೆ. ಶಾಲೆಟ್ ಪಿಂಟೋ ಹೂವಿನ ಮಾಲೆ ಹಾಕಲು ಬಂದಾಗ ಕವಿತಾ ಸನಿಲ್ ದೂಡಿದ್ದು ಇಬ್ಬರ ಕಿತ್ತಾಟಕ್ಕೆ ಸಾಕ್ಷಿಯಾಯಿತು.
ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮಹಿಳಾ ನಾಯಕಿಯರು ಹೂಮಾಲೆ ಹಾಕಲು ಮುಂದೆ ಬಂದಿದ್ದರು. ಈ ವೇಳೆ, ಸಿದ್ದರಾಮಯ್ಯ ಕಾರಿಗೆ ಕವಿತಾ ಸನಿಲ್ ಅಡ್ಡ ಬಂದಿರುವುದು, ಕಾರು ಹೋದ ಬಳಿಕ ಕವಿತಾ ಮತ್ತು ಶಾಲೆಟ್ ಪಿಂಟೋ ಕಿತ್ತಾಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇಬ್ಬರು ನಾಯಕಿಯರ ಜಡೆ ಕಿತ್ತಾಟ ನೋಡಿದ ಕಾಂಗ್ರೆಸ್ ನಾಯಕರು ಮುಸಿ ಮುಸಿ ನಕ್ಕಿದ್ದಾರೆ.
ಸಿದ್ದರಾಮಯ್ಯ ವಿಮಾನ ನಿಲ್ದಾಣದ ಒಳಗಿರುವಾಗಲೇ ಶಾಲೆಟ್ ಪಿಂಟೋಗೆ ಒಳಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಹೊರಗಡೆ ಇದ್ದೇ ಆಚೀಚೆ ಅಡ್ಡಾಡುತ್ತಿದ್ದರು. ಆನಂತರ, ಸಿದ್ದರಾಮಯ್ಯ ಹೊರಬಂದು ಮಾಧ್ಯಮಕ್ಕೆ ಮಾತನಾಡಿದ ಸಂದರ್ಭದಲ್ಲಿಯೂ ಕವಿತಾ ಸನಿಲ್ ಇತರೇ ಕಾಂಗ್ರೆಸ್ ನಾಯಕರನ್ನು ಬದಿಗೊತ್ತಿ ಸಿದ್ದರಾಮಯ್ಯ ಹತ್ತಿರ ನಿಂತುಕೊಳ್ಳಲು ಯಶಸ್ವಿಯಾಗಿದ್ದರು. ಕೊನೆಗೆ, ಜೈಕಾರ ಕೂಗಿ ಹೂಮಾಲೆ ಹಾಕುವ ಸಂದರ್ಭದಲ್ಲಿಯೂ ಸಿದ್ದರಾಮಯ್ಯಗೆ ಕವಿತಾ ಸನಿಲ್ ತಡೆ ಹಾಕಿದ್ದು ಇತರೇ ನಾಯಕಿಯರನ್ನು ಸಿಟ್ಟಾಗಿಸಿತ್ತು.
CM siddaramaiah in Mangalore, Congress members Kavitha Sanil andnl Sharlet Pinto fight to give garlands and bouquet.
13-05-24 09:17 pm
Bangalore Correspondent
parishad elections, JDS, BJP: ಪರಿಷತ್ ಚುನಾವಣೆ...
13-05-24 05:57 pm
Prajwal Revanna, Ticket Cancelled: ಪ್ರಜ್ವಲ್ ರ...
13-05-24 04:34 pm
Bangalore accident, Minor, Boy killed: ರಸ್ತೆಯ...
13-05-24 03:02 pm
Shivamogga Accident: ಶಿವಮೊಗ್ಗ ; ಆಟೋಗೆ ಡಿಕ್ಕಿ...
13-05-24 01:04 pm
13-05-24 07:56 pm
HK News Desk
ಬುರ್ಖಾ ಹಾಕೊಂಡು ಬಂದಿದ್ದ ಮುಸ್ಲಿಂ ಮತದಾರರಿಗೆ ನಿಮ...
13-05-24 03:53 pm
ಮದುವೆ ಆದ್ರು ಡಾಕ್ಟರ್ ಲೇಡಿಗೆ ತೀರದ ದಾಹ ; ಇಬ್ಬರು...
11-05-24 09:43 pm
Kareena Kapoor, Bible Book, court: “ಪ್ರೆಗ್ನೆನ...
11-05-24 03:13 pm
Ram Mandir, Nana Patole, Nrendra modi: ಮೋದಿಯಿ...
10-05-24 10:05 pm
13-05-24 10:15 pm
Mangalore Correspondent
Udupi former MLA Raghupati bhat quits BJP: ಬಂ...
13-05-24 07:27 pm
Ashok Rai, Puttur: ಚುನಾವಣೆ ನೀತಿ ಸಂಹಿತೆ ಉಲ್ಲಂಘ...
13-05-24 02:27 pm
Tv Serial Helmet Fine Police: ಟಿವಿ ಸೀರಿಯಲ್ನಲ್...
12-05-24 06:30 pm
ಕುಂದಾಪುರದ ಫೈನಾನ್ಶಿಯರ್ ಹತ್ಯೆ ಆರೋಪಿಗೆ ಹಿರಿಯಡ್ಕ...
12-05-24 05:41 pm
13-05-24 07:15 pm
Giridhar, Mangaluru Correspondent
Part time job, crime, online fraud: ಆನ್ಲೈನ್...
13-05-24 04:10 pm
Fake Currency Notes, Mangalore, Crime: ಕಾಸರಗೋ...
12-05-24 01:53 pm
Mangalore Crime, Sexual Assult: ಅನ್ಯಕೋಮಿನ ಬಾಲ...
11-05-24 10:18 pm
Bangalore Crime, Cyber, Roopa Iyer: ಸೆಲೆಬ್ರಿಟ...
10-05-24 05:04 pm