ಬ್ರೇಕಿಂಗ್ ನ್ಯೂಸ್
19-08-23 05:36 pm Mangalore Correspondent ಕರಾವಳಿ
ಉಳ್ಳಾಲ, ಆ.19: ತಲಪಾಡಿ ಅಲಂಕಾರಗುಡ್ಡೆಯಲ್ಲಿ ಸುಮಾರು 25 ನಾಯಿಗಳು ಮತ್ತು ಹಸುವೊಂದನ್ನ ವಿಷವಿಕ್ಕಿ ಕೊಂದಿರುವುದಲ್ಲದೆ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆಂದು ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ತಾನು ತಪ್ಪು ಮಾಡಿಲ್ಲ ಎಂದು ಯಾವುದೇ ದೈವಸ್ಥಾನಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಘಟನೆಯ ಆರೋಪಿಯೆಂದು ಹೇಳಲಾಗುತ್ತಿರುವ ಅಬ್ದುಲ್ ಖಾದರ್ ಮಕ್ಯಾರ್ ಹೇಳಿದ್ದಾರೆ.
ಅಲಂಕಾರ ಗುಡ್ಡೆಯಲ್ಲಿ ಆಹಾರದಲ್ಲಿ ನಿರಂತರ ವಿಷಪ್ರಾಷಣ ನಡೆಸಿ ಸುಮಾರು 25 ನಾಯಿಗಳನ್ನ ಕೊಲ್ಲಲಾಗಿತ್ತು. ಮೊನ್ನೆ ಆ.17 ರಂದು ಸ್ಥಳೀಯ ನಿವಾಸಿ ಸತ್ಯೇಂದ್ರ ಎಂಬವರು ಸಾಕುತ್ತಿದ್ದ 8 ತಿಂಗಳ ಹಸುವೊಂದು ವಿಷಾಹಾರ ಸೇವಿಸಿ ಸಾವನ್ನಪ್ಪಿತ್ತು. ಸ್ಥಳೀಯ ನಿವಾಸಿ ಖಾದರ್ ಎಂಬಾತನೇ ಇಂತಹ ಪೈಶಾಚಿಕ ಕೃತ್ಯಗೈದಿದ್ದಾನೆ ಎಂದು ಸತ್ಯೇಂದ್ರ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.





ಇಂದು ಮಾಧ್ಯಮಗಳ ಮುಂದೆ ಬಂದ ಆರೋಪಿ ಖಾದರ್, ನನ್ನ ಮೇಲೆ ಸ್ಥಳೀಯ ಕೆಲವೇ ಮಂದಿ ಸುಳ್ಳು ಆರೋಪ ಹೊರಿಸಿದ್ದಾರೆ. ನಾನು 62 ವರುಷಗಳಿಂದ ಬಾಳಿದ ಪ್ರದೇಶದ ಅಕ್ಕ, ತಂಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಆರೋಪಿಸಿದವರು ಯಾರಿಗೆ ನಾನು ಕಿರುಕುಳ ನೀಡಿದ್ದೇನೆ ಎಂದು ಹೇಳಲಿ. ವಿದೇಶದಲ್ಲಿರುವ ನನ್ನ ಮಗನೂ ಇದರಿಂದ ಸಾಕಷ್ಟು ನೊಂದಿದ್ದು ನನ್ನ ಇಷ್ಟ ಮಿತ್ರರೂ ನನ್ನಲ್ಲಿ ಪ್ರಶ್ನಿಸುತ್ತಿದ್ದಾರೆಂದರು. 25 ನಾಯಿಗಳನ್ನ ಕೊಂದಿದ್ದೇನೆ ಅಂತ ಹೇಳುತ್ತಾರೆ, ಪಂಚಾಯತ್ ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.

ದನ ಮೇಯಿಸುವ ಮಹಿಳೆಯರ ಜೊತೆಗೆ ಖಾದರ್ ತಮ್ಮ ವಾಹನ ನಿಲ್ಲಿಸಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸತ್ತ ಹಸುವಿನ ಮಾಲಕಿ ಆರೋಪಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಖಾದರ್ ಮಹಿಳೆಯರು ಸಿಕ್ಕಾಗ ವಾಹನವನ್ನ ನಾನು ನಿಲ್ಲಿಸೋಲ್ಲ. ಸ್ಲೋ ಮಾಡ್ತೇನಷ್ಟೆ. ಮಹಿಳೆಯರ ಕೈಯಲ್ಲಿ ದನದ ಹಗ್ಗ ಇರುತ್ತೆ. ಹಗ್ಗ ವಾಹನಕ್ಕೆ ಸುತ್ತಿ ಕೆಳಗೆ ಬೀಳಬಾರದೆಂಬ ಕಾಳಜಿಯಿಂದ ಗಾಡಿಯನ್ನ ಸ್ಲೋ ಮಾಡ್ತೇನಷ್ಟೆ ಎಂದಾಗ ಖಾದರ್ ಹಿಂದೆ ನಿಂತಿದ್ದ ಬೆಂಬಲಿಗರು ಮುಸಿ, ಮುಸಿ ನಕ್ಕಿದ್ದು ಮಾತ್ರ ಖಾದರ್ ಅವರನ್ನೇ ಅಣಕ ಮಾಡಿದಂತಿತ್ತು.
Ullal 25 dogs killed of poisoning, Mulsim man says ready to promise in any temples of not killing dogs in Mangalore.
17-05-26 08:55 pm
HK News Staffer
ವಿಜಯಪುರದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯೇ ಸಮಾಧಿ...
15-05-26 10:30 pm
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
ಹಿಜಾಬ್ಗೆ ಗ್ರೀನ್ ಸಿಗ್ನಲ್; ಮತ್ತೆ ಭುಗಿಲೆದ್ದ ವಿವ...
14-05-26 10:19 am
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
18-05-26 02:18 pm
HK News Staffer
ಭೋಜಶಾಲಾ ವಿವಾದಿತ ಮಸೀದಿ ಕಟ್ಟಡವಲ್ಲ, ವಾಗ್ದೇವಿ ಸರಸ...
16-05-26 10:13 pm
ಗುಡುಗು - ಮಿಂಚಿನ ಬಿರುಗಾಳಿಗೆ ಉತ್ತರ ಪ್ರದೇಶದಲ್ಲಿ...
16-05-26 02:01 pm
ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ NEET ಪರೀಕ್ಷೆ...
15-05-26 04:16 pm
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ; ಮಿತವ್ಯ...
15-05-26 08:54 am
16-05-26 09:19 pm
HK News Staffer
ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ದೇಶದಲ್ಲೇ ಮೊದಲ...
16-05-26 09:16 pm
ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿ...
16-05-26 07:22 pm
ಮಂಗಳೂರು ಜೈಲಿನಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ...
16-05-26 01:13 pm
ಉಳ್ಳಾಲದಲ್ಲಿ ಫಿಶ್ ಮೀಲ್ ಕ್ಯಾಂಟರ್ ಆಟಾಟೋಪ ; ರಸ್ತೆ...
14-05-26 10:48 pm
18-05-26 04:19 pm
HK News Staffer
ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಹೆಣವಾದ ಅಣ್ಣ,...
18-05-26 12:37 pm
ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ ; ಗ...
18-05-26 12:21 pm
Jones Asset Fraud, Bangalore: ಲೀಸ್ ಮನೆ ಹೆಸರಿನ...
18-05-26 11:36 am
ಬೇರೊಬ್ಬ ಮಹಿಳೆ ಹೆಸರಲ್ಲಿ ಪಾಸ್ಪೋರ್ಟ್ ಪಡೆದು ಇಸ್ರೇ...
17-05-26 09:10 pm