ಬ್ರೇಕಿಂಗ್ ನ್ಯೂಸ್
19-08-23 05:36 pm Mangalore Correspondent ಕರಾವಳಿ
ಉಳ್ಳಾಲ, ಆ.19: ತಲಪಾಡಿ ಅಲಂಕಾರಗುಡ್ಡೆಯಲ್ಲಿ ಸುಮಾರು 25 ನಾಯಿಗಳು ಮತ್ತು ಹಸುವೊಂದನ್ನ ವಿಷವಿಕ್ಕಿ ಕೊಂದಿರುವುದಲ್ಲದೆ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆಂದು ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ತಾನು ತಪ್ಪು ಮಾಡಿಲ್ಲ ಎಂದು ಯಾವುದೇ ದೈವಸ್ಥಾನಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಘಟನೆಯ ಆರೋಪಿಯೆಂದು ಹೇಳಲಾಗುತ್ತಿರುವ ಅಬ್ದುಲ್ ಖಾದರ್ ಮಕ್ಯಾರ್ ಹೇಳಿದ್ದಾರೆ.
ಅಲಂಕಾರ ಗುಡ್ಡೆಯಲ್ಲಿ ಆಹಾರದಲ್ಲಿ ನಿರಂತರ ವಿಷಪ್ರಾಷಣ ನಡೆಸಿ ಸುಮಾರು 25 ನಾಯಿಗಳನ್ನ ಕೊಲ್ಲಲಾಗಿತ್ತು. ಮೊನ್ನೆ ಆ.17 ರಂದು ಸ್ಥಳೀಯ ನಿವಾಸಿ ಸತ್ಯೇಂದ್ರ ಎಂಬವರು ಸಾಕುತ್ತಿದ್ದ 8 ತಿಂಗಳ ಹಸುವೊಂದು ವಿಷಾಹಾರ ಸೇವಿಸಿ ಸಾವನ್ನಪ್ಪಿತ್ತು. ಸ್ಥಳೀಯ ನಿವಾಸಿ ಖಾದರ್ ಎಂಬಾತನೇ ಇಂತಹ ಪೈಶಾಚಿಕ ಕೃತ್ಯಗೈದಿದ್ದಾನೆ ಎಂದು ಸತ್ಯೇಂದ್ರ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.





ಇಂದು ಮಾಧ್ಯಮಗಳ ಮುಂದೆ ಬಂದ ಆರೋಪಿ ಖಾದರ್, ನನ್ನ ಮೇಲೆ ಸ್ಥಳೀಯ ಕೆಲವೇ ಮಂದಿ ಸುಳ್ಳು ಆರೋಪ ಹೊರಿಸಿದ್ದಾರೆ. ನಾನು 62 ವರುಷಗಳಿಂದ ಬಾಳಿದ ಪ್ರದೇಶದ ಅಕ್ಕ, ತಂಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಆರೋಪಿಸಿದವರು ಯಾರಿಗೆ ನಾನು ಕಿರುಕುಳ ನೀಡಿದ್ದೇನೆ ಎಂದು ಹೇಳಲಿ. ವಿದೇಶದಲ್ಲಿರುವ ನನ್ನ ಮಗನೂ ಇದರಿಂದ ಸಾಕಷ್ಟು ನೊಂದಿದ್ದು ನನ್ನ ಇಷ್ಟ ಮಿತ್ರರೂ ನನ್ನಲ್ಲಿ ಪ್ರಶ್ನಿಸುತ್ತಿದ್ದಾರೆಂದರು. 25 ನಾಯಿಗಳನ್ನ ಕೊಂದಿದ್ದೇನೆ ಅಂತ ಹೇಳುತ್ತಾರೆ, ಪಂಚಾಯತ್ ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.

ದನ ಮೇಯಿಸುವ ಮಹಿಳೆಯರ ಜೊತೆಗೆ ಖಾದರ್ ತಮ್ಮ ವಾಹನ ನಿಲ್ಲಿಸಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸತ್ತ ಹಸುವಿನ ಮಾಲಕಿ ಆರೋಪಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಖಾದರ್ ಮಹಿಳೆಯರು ಸಿಕ್ಕಾಗ ವಾಹನವನ್ನ ನಾನು ನಿಲ್ಲಿಸೋಲ್ಲ. ಸ್ಲೋ ಮಾಡ್ತೇನಷ್ಟೆ. ಮಹಿಳೆಯರ ಕೈಯಲ್ಲಿ ದನದ ಹಗ್ಗ ಇರುತ್ತೆ. ಹಗ್ಗ ವಾಹನಕ್ಕೆ ಸುತ್ತಿ ಕೆಳಗೆ ಬೀಳಬಾರದೆಂಬ ಕಾಳಜಿಯಿಂದ ಗಾಡಿಯನ್ನ ಸ್ಲೋ ಮಾಡ್ತೇನಷ್ಟೆ ಎಂದಾಗ ಖಾದರ್ ಹಿಂದೆ ನಿಂತಿದ್ದ ಬೆಂಬಲಿಗರು ಮುಸಿ, ಮುಸಿ ನಕ್ಕಿದ್ದು ಮಾತ್ರ ಖಾದರ್ ಅವರನ್ನೇ ಅಣಕ ಮಾಡಿದಂತಿತ್ತು.
Ullal 25 dogs killed of poisoning, Mulsim man says ready to promise in any temples of not killing dogs in Mangalore.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm