ಬ್ರೇಕಿಂಗ್ ನ್ಯೂಸ್
09-09-23 11:06 pm Mangalore Correspondent ಕರಾವಳಿ
ಮಂಗಳೂರು, ಸೆ.9: ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿಯ ಕಟು ವಿರೋಧಿಯಾಗಿರುವ ದೆಹಲಿ ಮೂಲದ ಪ್ರೊಫೆಸರ್, ಡಾ.ಶಂಸುಲ್ ಇಸ್ಲಾಂ ಮಂಗಳೂರಿನಲ್ಲಿ ಉಪನ್ಯಾಸ ನೀಡುವುದಕ್ಕೆ ಬಿಡಲ್ಲ ಎಂದು ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕಾರ್ಯಕ್ರಮ ಆಯೋಜಿಸಿದ್ದ ಎಡಪಂಥೀಯರು ಕಾಂಗ್ರೆಸ್ ಸರ್ಕಾರದ ನೈತಿಕ ಬೆಂಬಲ ಪಡೆದು ಕಾರ್ಯಕ್ರಮ ಮಾಡಿಯೇ ತೀರುತ್ತೇವೆಂದು ಪಟ್ಟು ಹಿಡಿದು ಹಠಸಾಧನೆ ಮಾಡಿದ್ದಾರೆ.
ಒಂದೆಡೆ ವಿದ್ಯಾರ್ಥಿಗಳ ಧಿಕ್ಕಾರ ಕೂಗು, ಭಾರತ್ ಮಾತೆಗೆ ಜೈಕಾರ.. ಕಾಲೇಜು ಆವರಣಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರ ಜೊತೆಗೆ ಸಂಘರ್ಷ.. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ಆವರಣದಲ್ಲಿ ಶನಿವಾರ ಹೈಡ್ರಾಮಾವೇ ನಡೆದಿತ್ತು. ಮಂಗಳೂರಿನ ಬಿವಿ ಕಕ್ಕಿಲ್ಲಾಯ ಪ್ರತಿಷ್ಠಾನದಿಂದ ಯುನಿವರ್ಸಿಟಿ ಕಾಲೇಜಿನಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ-1957, ಜಂಟಿ ಬಲಿದಾನಗಳು ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ ಜೆನ್ ಯು ವಿವಿಯ ನಿವೃತ್ತ ಪ್ರೊಫೆಸರ್ ಡಾ.ಶಂಸುಲ್ ಇಸ್ಲಾಂ ಎಂಬವರನ್ನು ಉಪನ್ಯಾಸಕ್ಕೆ ಕರೆಸಲಾಗಿತ್ತು. ಆದರೆ, ಶಂಸುಲ್ ಇಸ್ಲಾಂ ಆರೆಸ್ಸೆಸ್ ವಿರೋಧಿ ಮತ್ತು ಮೋದಿ ನಿಂದಕ ಎನ್ನುವ ಕಾರಣಕ್ಕೆ ಎಬಿವಿಪಿ ವಿದ್ಯಾರ್ಥಿಗಳು ಜಟಾಪಟಿ ನಡೆಸಿದ್ದಾರೆ.
ಕಾಲೇಜು ಆವರಣಕ್ಕೆ ನುಗ್ಗಿದ ಎಬಿವಿಪಿಯ ಪ್ರಮುಖ ಕಾರ್ಯಕರ್ತರನ್ನು ಮೊದಲಿಗೆ ಪೊಲೀಸರು ವಶಕ್ಕೆ ಪಡೆದು ಹೊತ್ತೊಯ್ದಿದ್ದರು. ಅಷ್ಟರಲ್ಲಿ ಕಾಲೇಜು ಒಳಗಡೆಯೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಕಾಲೇಜು ಗೇಟ್ ಹೊರಭಾಗದಲ್ಲಿಯೂ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಜಮಾಯಿಸಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರೆ, ಪೊಲೀಸರು ಯಾವುದಕ್ಕೂ ಜಗ್ಗದೆ ತಡೆ ಹಾಕಿದ್ದರು.
ಆರೆಸ್ಸೆಸ್, ಎಬಿವಿಪಿ ದೇಶದ್ರೋಹಿಗಳು
ಇದೇ ವೇಳೆ, ಪೊಲೀಸ್ ಭದ್ರತೆಯಲ್ಲಿ ಡಾ.ಶಂಸುಲ್ ಇಸ್ಲಾಂ ಕಾಲೇಜಿಗೆ ಆಗಮಿಸಿದ್ದು, ಹೊರಗೆ ಪ್ರತಿಭಟನೆ ನಡೆಯುತ್ತಿದ್ದಂತೆಯೇ ಒಳಗೆ ಉಪನ್ಯಾಸ ನೀಡಿದ್ದಾರೆ. ಅಲ್ಲದೆ, ಪ್ರತಿಭಟನೆ ನಡೆಸಿದ ಎಬಿವಿಪಿ ವಿದ್ಯಾರ್ಥಿಗಳು ರಾಷ್ಟ್ರದ್ರೋಹಿಗಳು. ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವ ಕಾರ್ಯಕ್ರಮ ವಿರೋಧಿಸುವವರು ದೇಶದ್ರೋಹಿಗಳು ಎಂದು ಜರೆದಿದ್ದಾರೆ. ಎಬಿವಿಪಿ ಅನ್ನುವುದು ಆರೆಸ್ಸೆಸ್ ಸಂಘಟನೆಯ ಭಾಗ. ಆರೆಸ್ಸೆಸ್ ಯಾವತ್ತೂ ದೇಶದ ಪರವಾಗಿರಲಿಲ್ಲ. ಬ್ರಿಟಿಷರ ಪರವಾಗಿದ್ದರು. ಇಂದಿಗೂ ಅದನ್ನೇ ಮಾಡುತ್ತಿದ್ದಾರೆ. ಮಹಾತ್ಮ ಗಾಂಧೀಜಿ ನಿಜವಾದ ಸನಾತನಿಯಾಗಿದ್ದರು. ಅವರನ್ನು ಇದೇ ಆರೆಸ್ಸೆಸ್ ಮಂದಿ ಕೊಂದಿರುವುದು. ಗಾಂಧಿಯನ್ನು ಕೊಂದಿದ್ದ ಗೋಡ್ಸೆಯನ್ನು ಆರೆಸ್ಸೆಸ್ ಕೃಷ್ಣನಿಗೆ ಹೋಲಿಸಿದ್ದಕ್ಕೆ ತನ್ನಲ್ಲಿ ದಾಖಲೆಯಿದೆ ಎಂದು ಆಪಾದನೆ ಮಾಡಿದ್ದಾರೆ.
ಕಾರ್ಯಕ್ರಮ ಮುಗಿದ ಬಳಿಕ ವಿವಿ ಕಾಲೇಜಿನ ಪ್ರಿನ್ಸಿಪಾಲ್ ಅನಸೂಯ ರೈ ಅವರನ್ನು ವಿದ್ಯಾರ್ಥಿಗಳು ತರಾಟೆಗೆತ್ತಿಕೊಂಡಿದ್ದಾರೆ. ನೀವು ಮತ್ತು ಉಪ ಕುಲಪತಿಗಳು ಯಾಕೆ ಕಾರ್ಯಕ್ರಮಕ್ಕೆ ಹೋಗಿದ್ದು.. ಇಂತಹ ಕಾರ್ಯಕ್ರಮಕ್ಕೆ ಯಾಕೆ ಅವಕಾಶ ನೀಡಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿನ್ಸಿಪಾಲ್ ಮೇಡಂ, ಕಾಲೇಜು ನಡೆಸೋದು ನಾನಲ್ಲ. ವಿವಿಯ ಉಪ ಕುಲಪತಿಗಳೇ ಮುಖ್ಯಸ್ಥರು. ಅವರು ಹೇಳಿದ್ದನ್ನು ನಾವು ಮಾಡೋದು. ನಮ್ಮ ಮುಖ್ಯಸ್ಥರು ಬಂದಿದ್ದರಿಂದ ನಾವು ಕಾರ್ಯಕ್ರಮಕ್ಕೆ ಹೋಗಿದ್ದೇವೆ. ಅಷ್ಟಕ್ಕೇ ಹೋಗಿದ್ದು ಬಿಟ್ಟರೆ ನನಗೇನೂ ಸಂಬಂಧ ಇಲ್ಲ. ನೀವು ಅಸಂಬದ್ಧ ಪ್ರಶ್ನೆ ಕೇಳಿದರೆ, ನನ್ನಲ್ಲಿ ಉತ್ತರ ಇಲ್ಲ ಎಂದು ಖಾರವಾಗಿ ಮಾತನಾಡಿದ್ದಾರೆ.
ಹೊರಗೆ ವಿದ್ಯಾರ್ಥಿಗಳ ಪ್ರತಿಭಟನೆ ಆಗುತ್ತಿದ್ದರೆ, ಒಳಗಡೆ ರವೀಂದ್ರ ಕಲಾಕ್ಷೇತ್ರದಲ್ಲಿ ಪೊಲೀಸ್ ಭದ್ರತೆಯಲ್ಲಿ ನಾಮ್ಕೇವಾಸ್ತೆ ಎನ್ನುವ ರೀತಿ ಶ್ರೀನಿವಾಸ ಕಕ್ಕಿಲ್ಲಾಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಉಪನ್ಯಾಸ ನೀಡಿದ ಶಂಸುಲ್ ಇಸ್ಲಾಂ, ಆರೆಸ್ಸೆಸ್ ವಿರೋಧಿ ಭಾವನೆಯನ್ನು ಹೊರ ಹಾಕಿದ್ದಾರೆ. ಅಷ್ಟಕ್ಕೆ ಕಾರ್ಯಕ್ರಮ ಮುಗಿದಿದ್ದು, ಅತಿಥಿಗಳು ಹೊರಗೆ ತೆರಳುತ್ತಿದ್ದಂತೆ ಪ್ರತಿಭಟನೆಯೂ ಅಂತ್ಯಗೊಂಡಿದೆ. ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಈ ಹಿಂದೆಯೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಂತಹದ್ದೇ ಎಡಪಂಥೀಯರ ಕಾರ್ಯಕ್ರಮ ನಡೆದಿತ್ತು. ಆಗಲೂ ಇದೇ ರೀತಿ ವಿರೋಧ, ಜಟಾಪಟಿ ನಡೆದಿತ್ತು. ಈಗಿನ ವಿವಿಯ ಉಪ ಕುಲಪತಿ ಜಯರಾಜ ಅಮೀನ್ ಎಡಪಂಥೀಯ ಚಿಂತನೆಯುಳ್ಳವರಾಗಿದ್ದು ಮತ್ತೆ ಅಂತಹದ್ದೇ ಕಾರ್ಯಕ್ರಮ ನಡೆಸಿದ್ದು ಚರ್ಚೆಗೆ ಕಾರಣವಾಗಿದೆ.
Dr Shamsul slams AVBP says these are anti nationals amid protest of Abvp at Mangalore Univercity. Akhil Bharatiya Vidyarthi Parishad (ABVP) members staged a protest at the Mangalore University campus opposing the lecture of noted researcher, author and former associate professor of political science at the University of Delhi Dr Shamsul Islam. The ABVP workers raised slogans against the professor and tried to enter the University but were stopped by the police.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm