ಬ್ರೇಕಿಂಗ್ ನ್ಯೂಸ್
16-09-23 12:17 pm Mangalore Correspondent ಕರಾವಳಿ
ಮಂಗಳೂರು, ಸೆ.16: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಸ್ನಾತಕೋತ್ತರ ತರಗತಿಗಳಿಗೆ ಆಯಾ ಕ್ಷೇತ್ರಗಳ ಸಾಧಕರು, ತಜ್ಞರು ಪಾಠ ಮಾಡಲಿದ್ದಾರೆ. ಹೀಗೊಂದು ಬದಲಾವಣೆಗೆ ವಿ.ವಿ.ಯ ಆಡಳಿತ ಮುನ್ನುಡಿ ಬರೆದಿದೆ. ಉನ್ನತ ಶಿಕ್ಷಣದಲ್ಲಿ ಪುಸ್ತಕದ ಪಾಠ ಒಂದೇ ಆಧಾರವಾಗಬಾರದು; ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಜ್ಞರ ಅನುಭವ ಪಾಠವೂ ವಿದ್ಯಾರ್ಥಿಗಳಿಗೆ ಲಭಿಸಲಿ ಎಂಬ ಉದ್ದೇಶ ಇಟ್ಟುಕೊಂಡು ಹೊಸ ಪರಿಕಲ್ಪನೆ ಜಾರಿಗೆ ತರಲಾಗಿದೆ.
ಮೊದಲಿಗೆ ಸ್ನಾತ ಕೋತ್ತರ ವಿಭಾಗದಲ್ಲಿ ಪರಿಚಯಿಸುತ್ತಿದ್ದು, ಮುಂದೆ ಪದವಿಯಲ್ಲೂ ಜಾರಿಗೊಳಿಸುತ್ತೇವೆ. ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿಯೂ ಅಳವಡಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ “ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಎಂದು ಕರೆಯಲಾಗುತ್ತದೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ.ಜಯರಾಜ ಅಮೀನ್ ತಿಳಿಸಿದ್ದಾರೆ.
ಇಂತಹ ಬೋಧಕ ವಿಷಯ ತಜ್ಞರಿಗೆ ಮಂಗಳೂರು ವಿ.ವಿ. ಅಥವಾ ಇತರ ಮೂಲದಿಂದ ಸಂಭಾವನೆ ನೀಡಲು ಅವಕಾಶವಿದೆ. ಜತೆಗೆ ಕೈಗಾರಿಕೆ ಸಹಿತ ವಿವಿಧ ಕ್ಷೇತ್ರದ ಸಾಧಕರು ವಿದ್ಯಾರ್ಥಿಗಳಿಗೆ ಸ್ವಂತ ಆಸಕ್ತಿಯಿಂದಲೇ ಪ್ರಾಯೋಗಿಕ ಮಾಹಿತಿ ನೀಡಬಹುದು. ಸೀಮಿತ ಅವಧಿಯ ಸೇವೆ ಇದಾಗಿದ್ದು ವಾರದಲ್ಲಿ ಒಂದು ಬಾರಿ ವಿಶೇಷ ತರಗತಿ ತೆಗೆದುಕೊಳ್ಳಲಿದ್ದಾರೆ.
ಎಂಜಿನಿಯರ್, ವಿಜ್ಞಾನಿ, ತಂತ್ರಜ್ಞ, ಉದ್ಯಮಿ, ಆಡಳಿತಾತ್ಮಕ ನಿರ್ವಹಣೆ, ಲೆಕ್ಕ ಪರಿಶೋಧಕರು, ವಾಣಿಜ್ಯ, ಸಮಾಜ ವಿಜ್ಞಾನ, ಪತ್ರಿಕೋದ್ಯಮಿ, ಸಾಹಿತಿ, ಕಲೆ, ನಾಗರಿಕ ಸೇವೆ, ಸೈನಿಕರು, ವಕೀಲರು ಹೀಗೆ ವಿವಿಧ ಕ್ಷೇತ್ರದ ಅನುಭವಿಗಳಿಂದ ಬೋಧನೆಗೆ ಅವಕಾಶವಿದೆ. ಇದರಿಂದ ವಿದ್ಯಾರ್ಥಿಗಳು ಪುಸ್ತಕದಿಂದ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಆ ಕ್ಷೇತ್ರದ ಸಾಧಕರ ಅನುಭವಗಳನ್ನು ಕೇಳಿ ಹೊಸ ತಿಳಿವಳಿಕೆ ಪಡೆಯಲಿದ್ದಾರೆ.
ಕ್ಷೇತ್ರಗಳ ಸಾಧಕರು ವೃತ್ತಿಪರ ಬೋಧಕರಲ್ಲದಿದ್ದರೂ, ಪಿಎಚ್ಡಿ ಇತ್ಯಾದಿ ಪದವಿ ಇಲ್ಲದಿದ್ದರೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನುಭವ ಹೊಂದಿರುತ್ತಾರೆ. ಅಂಥವರನ್ನು ಮಂಗಳೂರು ವಿ.ವಿ.ಯೇ ಆಯ್ಕೆ ಮಾಡಿ ವಿದ್ಯಾರ್ಥಿಗಳಿಗೆ ಅವರ ಅನುಭವ ಕಥನವನ್ನು ತಿಳಿಸುವುದಕ್ಕಾಗಿ “ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಎನ್ನುವ ಹೆಸರಲ್ಲಿ ಹೊಸ ಪರಿಕಲ್ಪನೆ ಜಾರಿಗೆ ತಂದಿದೆ.
Mangalore University now to have Professors of Practice. A Professor of Practice is an expert or a professional from the industry who will teach the students based on his or her expertise.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 04:43 pm
Mangalore Correspondent
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm