Bantwal Man with fever dies, BJP: ಬಂಟ್ವಾಳ ; ಜ್ವರವೆಂದು ಆಸ್ಪತ್ರೆಗೆ ಬಂದಿದ್ದ ಯುವಕ ಕುಸಿದು ಬಿದ್ದು ಸಾವು ; ಸಾವಿನ ಕಾರಣದ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆ 

18-09-23 06:20 pm       Mangalore Correspondent   ಕರಾವಳಿ

ಜ್ವರವೆಂದು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ವೈದ್ಯರು ಪರೀಕ್ಷೆ ನಡೆಸುವ ಮೊದಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. 

ಬಂಟ್ವಾಳ, ಸೆ.18: ಜ್ವರವೆಂದು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ವೈದ್ಯರು ಪರೀಕ್ಷೆ ನಡೆಸುವ ಮೊದಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. 

ಬಿಜೆಪಿ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು (43) ಮೃತಪಟ್ಟ ವ್ಯಕ್ತಿ. ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಜ್ವರ ಕಡಿಮೆಯಾಗದ ಕಾರಣ ಸೋಮವಾರ ಬೆಳಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು. 

ವೈದ್ಯರು ಪರೀಕ್ಷೆ ಮಾಡುವ ಮೊದಲೇ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೆಲವರು ಅವರಿಗೆ ನ್ಯುಮೋನಿಯಾ ಇತ್ತೆಂದು ಹೇಳುತ್ತಿದ್ದಾರೆ. ನ್ಯುಮೋನಿಯಾದಿಂದ ಹಠಾತ್ ಸಾವು ಸಂಭವಿಸುವುದು ತೀರಾ ಕಡಿಮೆ. ಡೆಂಗ್ಯು ಜ್ವರ ಈಗ ಎಲ್ಲ ಕಡೆ ಇರುವುದರಿಂದ ಅದೇ ಕಾರಣವೇ ಎಂಬ ಬಗ್ಗೆ ಮಾಹಿತಿ ಇಲ್ಲ. ಡೆಂಗ್ಯು ಜ್ವರದಲ್ಲಿ ಪ್ಲೇಟ್ ಲೆಟ್ಸ್ ದಿಢೀರ್ ಕಡಿಮೆಯಾಗುವುದರಿಂದ ಚಿಕಿತ್ಸೆ ಸಿಗದೇ ಇದ್ದಲ್ಲಿ ಸಾವು ಸಂಭವಿಸುತ್ತದೆ. ಹಾಗಾಗಿ ಈಗಿನ ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ. ‌ಯಾವುದೇ ಅಕಾಲಿಕ ಸಾವು ಆದರೂ ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಬೇಕು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಖಚಿತವಾಗಿ ಪರೀಕ್ಷೆ ನಡೆಸುವುದಕ್ಕೆ ಹೋಗಲ್ಲ.

A man who had gone to the hospital to bring medicines for his fever, collapsed and died even before the doctor tested him.The deceased is identified as Prakash Bellur (43). He was active youth member of the BJP. He was the chief secretary of Amtadi Mahashakti Kendra and was suffering from fever