ಬ್ರೇಕಿಂಗ್ ನ್ಯೂಸ್
21-09-23 10:18 pm Udupi Correspondent ಕರಾವಳಿ
ಉಡುಪಿ, ಸೆ.21: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮಗ ಮೂರು ವರ್ಷಗಳ ಬಳಿಕ ಮನೆಮಂದಿಗೆ ಹೇಳದೇ ಅನಿರೀಕ್ಷಿತವಾಗಿ ಹಿಂತಿರುಗಿದ್ದ. ತಾಯಿ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ದ ಬಗ್ಗೆ ತಿಳಿದು, ಮುಖಕ್ಕೆ ಮಾಸ್ಕ್ ಹಾಕ್ಕೊಂಡು ತಾಯಿ ಬಳಿಯಲ್ಲೇ ಮೀನು ಖರೀದಿಸಿದ ಸ್ವಾರಸ್ಯಕರ ಸಂಗತಿಯ ವಿಡಿಯೋ ವೈರಲ್ ಆಗಿದೆ.
ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರ್ಷಗಳ ಹಿಂದೆ ದುಬೈಗೆ ತೆರಳಿದ್ದು ಎರಡು ದಿನಗಳ ಹಿಂದೆ ಊರಿನ ಗೆಳೆಯರಿಗಾಗಲೀ, ಮನೆಯವರಿಗಾಗಲೀ ತಿಳಿಸದೆ ಸರ್ಪ್ರೈಸ್ ಕೊಡುವುದಕ್ಕಾಗಿ ನೇರವಾಗಿ ಬಂದಿದ್ದ. ಬೆಳಗ್ಗೆ ಮನೆಗೆ ಬಂದು ತಲುಪಿದಾಗ, ತಾಯಿ ಎಂದಿನಂತೆ ಮೀನು ಮಾರಲು ಹೋಗಿರುವುದು ತಿಳಿದುಬಂದಿತ್ತು. ಬ್ಯಾಗ್ ತೆಗೆದಿಟ್ಟು ನೇರವಾಗಿ ಗಂಗೊಳ್ಳಿ ಮೀನು ಮಾರುಕಟ್ಟೆಗೆ ಬಂದಿದ್ದ ರೋಹಿತ್, ತಾಯಿ ಮೀನು ಮಾರಾಟದಲ್ಲಿ ಬಿಝಿಯಾಗಿರುವುದನ್ನು ನೋಡಿದ್ದ. ದೂರದಿಂದಲೇ ಮುಖಕ್ಕೆ ಟವೆಲನ್ನು ಸುತ್ತಿಕೊಂಡು ಮೀನಿನ ದರ ವಿಚಾರಿಸಲು ಮುಂದಾಗಿದ್ದ.
ಯುವಕ ಮುಖ ತೋರಿಸದೆ, ಬಂಗುಡೆ ಮೀನಿನ ದರ ಕೇಳುತ್ತಿರುವುದರ ಬಗ್ಗೆ ತಾಯಿ ಸುಮಿತ್ರಾ ವಿಚಾರಣೆ ಮಾಡಿದ್ದಾರೆ. ಮಾತು ಕೇಳಿದಾಗ ಮಗನ ಧ್ವನಿಯಂತೇ ಕಂಡಿದ್ದರಿಂದ ತಾಯಿಗೆ ಸಂಶಯ ಆಗಿದೆ. ಹೀಗಾಗಿ ಮೀನನ್ನು ಬಿಟ್ಟು ಯುವಕನ ಬಳಿಗೆ ಎದ್ದು ಬಂದಿದ್ದು, ಮಗನ ಮುಖ ನೋಡುತ್ತಲೇ ಅಪ್ಪಿ ಹಿಡಿದು ಕಣ್ಣೀರು ಹಾಕಿದ್ದಾರೆ. ತಾಯಿ- ಮಗ ಅಪ್ಪಿ ಹಿಡಿದು ಆನಂದ ಭಾಷ್ಪ ಸುರಿಸಿದ ವಿಡಿಯೋ ಕುಂದಾಪುರದಲ್ಲಿ ವೈರಲ್ ಆಗಿದೆ.
A youth, who returned to his native after three years of working in the Gulf gave a surprise to his mother, who sells fish in Gangolli market. The video has gone viral on social media. Rohit, a resident of Gangollli in Kundapura taluk, returned to his native after three years of working in Dubai. He did not inform the matter to his family and friends to keep his arrival a surprise.
10-01-26 04:29 pm
Bangalore Correspondent
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ...
09-01-26 02:05 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 07:57 pm
Mangalore Correspondent
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
ಸಿಎಂ, ಡಿಸಿಎಂ ಮಂಗಳೂರಿಗೆ ; ಒಂದೇ ದಿನ ಮಂಗಳೂರಿನಲ್ಲ...
09-01-26 09:18 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm