ಬ್ರೇಕಿಂಗ್ ನ್ಯೂಸ್
21-09-23 10:18 pm Udupi Correspondent ಕರಾವಳಿ
ಉಡುಪಿ, ಸೆ.21: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮಗ ಮೂರು ವರ್ಷಗಳ ಬಳಿಕ ಮನೆಮಂದಿಗೆ ಹೇಳದೇ ಅನಿರೀಕ್ಷಿತವಾಗಿ ಹಿಂತಿರುಗಿದ್ದ. ತಾಯಿ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ದ ಬಗ್ಗೆ ತಿಳಿದು, ಮುಖಕ್ಕೆ ಮಾಸ್ಕ್ ಹಾಕ್ಕೊಂಡು ತಾಯಿ ಬಳಿಯಲ್ಲೇ ಮೀನು ಖರೀದಿಸಿದ ಸ್ವಾರಸ್ಯಕರ ಸಂಗತಿಯ ವಿಡಿಯೋ ವೈರಲ್ ಆಗಿದೆ.
ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರ್ಷಗಳ ಹಿಂದೆ ದುಬೈಗೆ ತೆರಳಿದ್ದು ಎರಡು ದಿನಗಳ ಹಿಂದೆ ಊರಿನ ಗೆಳೆಯರಿಗಾಗಲೀ, ಮನೆಯವರಿಗಾಗಲೀ ತಿಳಿಸದೆ ಸರ್ಪ್ರೈಸ್ ಕೊಡುವುದಕ್ಕಾಗಿ ನೇರವಾಗಿ ಬಂದಿದ್ದ. ಬೆಳಗ್ಗೆ ಮನೆಗೆ ಬಂದು ತಲುಪಿದಾಗ, ತಾಯಿ ಎಂದಿನಂತೆ ಮೀನು ಮಾರಲು ಹೋಗಿರುವುದು ತಿಳಿದುಬಂದಿತ್ತು. ಬ್ಯಾಗ್ ತೆಗೆದಿಟ್ಟು ನೇರವಾಗಿ ಗಂಗೊಳ್ಳಿ ಮೀನು ಮಾರುಕಟ್ಟೆಗೆ ಬಂದಿದ್ದ ರೋಹಿತ್, ತಾಯಿ ಮೀನು ಮಾರಾಟದಲ್ಲಿ ಬಿಝಿಯಾಗಿರುವುದನ್ನು ನೋಡಿದ್ದ. ದೂರದಿಂದಲೇ ಮುಖಕ್ಕೆ ಟವೆಲನ್ನು ಸುತ್ತಿಕೊಂಡು ಮೀನಿನ ದರ ವಿಚಾರಿಸಲು ಮುಂದಾಗಿದ್ದ.
ಯುವಕ ಮುಖ ತೋರಿಸದೆ, ಬಂಗುಡೆ ಮೀನಿನ ದರ ಕೇಳುತ್ತಿರುವುದರ ಬಗ್ಗೆ ತಾಯಿ ಸುಮಿತ್ರಾ ವಿಚಾರಣೆ ಮಾಡಿದ್ದಾರೆ. ಮಾತು ಕೇಳಿದಾಗ ಮಗನ ಧ್ವನಿಯಂತೇ ಕಂಡಿದ್ದರಿಂದ ತಾಯಿಗೆ ಸಂಶಯ ಆಗಿದೆ. ಹೀಗಾಗಿ ಮೀನನ್ನು ಬಿಟ್ಟು ಯುವಕನ ಬಳಿಗೆ ಎದ್ದು ಬಂದಿದ್ದು, ಮಗನ ಮುಖ ನೋಡುತ್ತಲೇ ಅಪ್ಪಿ ಹಿಡಿದು ಕಣ್ಣೀರು ಹಾಕಿದ್ದಾರೆ. ತಾಯಿ- ಮಗ ಅಪ್ಪಿ ಹಿಡಿದು ಆನಂದ ಭಾಷ್ಪ ಸುರಿಸಿದ ವಿಡಿಯೋ ಕುಂದಾಪುರದಲ್ಲಿ ವೈರಲ್ ಆಗಿದೆ.
A youth, who returned to his native after three years of working in the Gulf gave a surprise to his mother, who sells fish in Gangolli market. The video has gone viral on social media. Rohit, a resident of Gangollli in Kundapura taluk, returned to his native after three years of working in Dubai. He did not inform the matter to his family and friends to keep his arrival a surprise.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm