Subramanya, illegal cattle Cow trafficking, Mangalore: ಸುಬ್ರಹ್ಮಣ್ಯ ಬಳಿ ಅಕ್ರಮ ಜಾನುವಾರು ಸಾಗಣೆ ಪತ್ತೆ ; ಪೊಲೀಸರನ್ನು ನೋಡಿ ಪರಾರಿಯಾದ ಗೋಕಳ್ಳರು 

26-09-23 10:52 am       Mangalore Correspondent   ಕರಾವಳಿ

ಸೋಮವಾರ ನಸುಕಿನಲ್ಲಿ ಸುಬ್ರಹ್ಮಣ್ಯ ಪೊಲೀಸರು ಗಸ್ತಿನಲ್ಲಿದ್ದಾಗ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಕೃತ್ಯವನ್ನು ಪತ್ತೆಹಚ್ಚಿದ್ದಾರೆ.

ಸುಳ್ಯ, ಸೆ.26: ಸೋಮವಾರ ನಸುಕಿನಲ್ಲಿ ಸುಬ್ರಹ್ಮಣ್ಯ ಪೊಲೀಸರು ಗಸ್ತಿನಲ್ಲಿದ್ದಾಗ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಕೃತ್ಯವನ್ನು ಪತ್ತೆಹಚ್ಚಿದ್ದಾರೆ. 

ಐವತ್ತೊಕ್ಲು ಗ್ರಾಮದ ನಾಯರಕೆರೆ - ಪಾಂಡಿಗದ್ದೆ ರಸ್ತೆಯ ಕುಳ್ಳಕೋಡಿ ಎಂಬಲ್ಲಿ ಪೊಲೀಸರು ಗಸ್ತು ನಿರತರಾಗಿದ್ದರು. ಸುಬ್ರಹ್ಮಣ್ಯ ಠಾಣೆ ಎಸ್ಐ ಕಾರ್ತಿಕ್ ಮತ್ತು ಇತರ ಪೊಲೀಸ್ ಸಿಬಂದಿ ಕರ್ತವ್ಯದಲ್ಲಿದ್ದಾಗ ಪಿಕಪ್ ವಾಹನ ಬಂದಿದ್ದು ಪೊಲೀಸ್ ಜೀಪು ನೋಡಿ ಅದರಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಪಿಕಪ್ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದ ಹಿಂಬದಿ ಟರ್ಪಲ್ ಇಳಿಸಲಾಗಿತ್ತು. ಒಳಗೆ ನೋಡಿದಾಗ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಕಟ್ಟಿ ಹಾಕಿರುವುದು ಕಂಡುಬಂದಿದೆ. 

ಎರಡು ದನ, ಎರಡು ಕರು, ಒಂದು ಹೋರಿಯನ್ನು ಕಟ್ಟಿ ಹಾಕಲಾಗಿತ್ತು. ಐದು ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಗೋವುಗಳನ್ನು ಕದ್ದು ಅಥವಾ ಅಕ್ರಮವಾಗಿ ಸಾಗಿಸುತ್ತಿದ್ದ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವಾಹನವನ್ನು ಜಪ್ತಿ ಮಾಡಿದ್ದು ಆರೋಪಿಗಳ ಪತ್ತೆಗಾಗಿ ಪ್ರಕರಣ ದಾಖಲಿಸಿದ್ದಾರೆ. ‌

Subramanya, cattle traffickers flee as they see police, Five cows rescued in Mangalore.