ಬ್ರೇಕಿಂಗ್ ನ್ಯೂಸ್
07-10-23 07:20 pm Mangalore Correspondent ಕರಾವಳಿ
ಪುತ್ತೂರು, ಅ.7: ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರು ಕೂಡ ಹಿಂದೂಗಳೇ. ಅವರಿಗೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರಿಗಾದ ರೀತಿಯದ್ದೇ ಮತಾಂಧ ದಾಳಿಗಳ ಅನುಭವ ಆಗಲಿದೆ. ಹಾಗಾಗಿ ಮತಾಂಧರ ಓಲೈಕೆ ರಾಜಕಾರಣ ಹಿಂದುಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಓಲೈಕೆ ಮಾಡುವ ನಿಮಗೂ ಮತಾಂಧರ ದಾಳಿಯ ಗಂಡಾಂತರ ತಪ್ಪಿದ್ದಲ್ಲ ಎಂದು ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಶಿವಮೊಗ್ಗದಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ಪ್ರತಿ ಮನೆಗೂ ಹೋಗಿ ದಾಳಿಗೊಳಗಾದ ಹಿಂದೂಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದೇನೆ. ಅಲ್ಲಿನ ಮಕ್ಕಳು, ಮಹಿಳೆಯರು ಪಡುತ್ತಿರುವ ವೇದನೆ ಕಣ್ಣೀರು ತರಿಸುತ್ತದೆ. ಶಿಕ್ಷಣ ನೀಡಿದ ಶಿಕ್ಷಕಿಯನ್ನೂ ಬಿಡದೇ ಮತಾಂಧರು ದಾಳಿ ಮಾಡಿದ್ದಾರೆ. ಆ ಪ್ರದೇಶದಲ್ಲಿ ಬದುಕು ನಡೆಸಲು ಹಿಂದೂಗಳು ಭಯಕ್ಕೀಡಾಗಿದ್ದಾರೆ. ಇದೇ ರೀತಿ ಓಲೈಕೆ ನಡೆಸಿದರೆ ಇಂತಹ ಘಟನೆಗಳು ಶಿವಮೊಗ್ಗ ಬಿಟ್ಟು ಬೇರೆ ಕಡೆಯೂ ಪಸರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಟಿಪ್ಪು, ಔರಂಗಜೇಬನ ಪ್ರತಿಕೃತಿ ಪ್ರದರ್ಶನ ನಡೆಸಿ ತಲವಾರು ಝಳಪಿಸಿದ ರಾಗಿಗುಡ್ಡದಲ್ಲಿ ದಾಂಧಲೆ ಮಾಡಿದ ಮತಾಂಧರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮುಸ್ಲಿಂ ಓಲೈಕೆಯ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಕೇಸ್ ದಾಖಲಿಸಿದೆ. ಈ ಕೇಸ್ ಗೆ ಹೆದರಿ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ಕರ್ನಾಟಕದ ಎಲ್ಲೇ ಮಂತಾಧರ ದಾಳಿ ಆದರೂ ನಾನು ಅಲ್ಲಿನ ಹಿಂದೂಗಳ ಜೊತೆಗಿದ್ದೇನೆ. ಭಯೋತ್ಪಾದಕರ ರೀತಿಯಲ್ಲಿ ಬದುಕಬೇಕೆಂದು ಮತಾಂಧರು ಯೋಚನೆ ನಡೆಸಿದರೆ ಹಿಂದೂಗಳು ತಲವಾರು ಹಿಡಿಯಬೇಕಾಗುವುದು ಅನಿವಾರ್ಯವಾಗ್ತದೆ. ನಿನ್ನೆ ನಾನು ಶಿವಮೊಗ್ಗದಲ್ಲಿ ಕೊಟ್ಟ ಹೇಳಿಕೆಯನ್ನು ಮತ್ತೆ ಸಮರ್ಥಿಸುತಿದ್ದೇನೆ ಎಂದು ಅರುಣ್ ಪುತ್ತಿಲ ಸ್ಪಷ್ಟಪಡಿಸಿದರು.
Hindus must take up the sword if muslims live like terrorists says Arun Puthila in Puttur. Siddaramaiah and Parameshwar will also face the attack of Muslims.
24-07-25 10:52 pm
HK News Desk
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
Lokayukta Raid, IAS Vasanthi: ಐಎಎಸ್ ಅಧಿಕಾರಿ ಮ...
24-07-25 07:29 pm
ಜಿಎಸ್ಟಿ ಬಾಕಿ ಪಾವತಿ ನೋಟಿಸ್ ವಾಪಸ್ ; ಆತಂಕಗೊಂಡಿದ...
24-07-25 05:01 pm
ಕೆಂಪುಕಲ್ಲು ಗಣಿಗಾರಿಕೆಗೆ ಅಧಿಕೃತ ಪರವಾನಿಗೆ ನೀಡಲು...
23-07-25 08:03 pm
24-07-25 09:06 pm
HK News Desk
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
24-07-25 10:26 pm
Mangalore Correspondent
Dharmasthala Case, Investigation, Advocate,...
24-07-25 05:27 pm
Mangalore Indiana Hospital: ಮಂಗಳೂರಿನಲ್ಲಿ ಪ್ರಥ...
24-07-25 11:30 am
ಕರಾವಳಿ ಜಿಲ್ಲೆಗಳಿಗೆ ಜುಲೈ 26ರ ವರೆಗೆ ಭಾರೀ ಮಳೆಯ ರ...
23-07-25 10:49 pm
Mangalore Extortion Jail, Sudheer Kumar Reddy...
23-07-25 10:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am