ಬ್ರೇಕಿಂಗ್ ನ್ಯೂಸ್
17-10-23 11:07 pm Mangalore Correspondent ಕರಾವಳಿ
ಮಂಗಳೂರು, ಅ.17: ನಗರದ ಫಳ್ನೀರ್ ನಲ್ಲಿ ಎಂಎಫ್ ಸಿ ಆಹಾರ ಮಳಿಗೆಯ ಮೇಲೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದು, 24 ಗಂಟೆಯಲ್ಲಿ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆಗಳನ್ನು ಹಾಜರುಪಡಿಸದೇ ಇದ್ದರೆ ಕೇಂದ್ರಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂಎಫ್ ಸಿ ಮಳಿಗೆಯಿರುವ ಕಟ್ಟಡದ ಮಾಲಕರ ದೂರಿನಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಒಳಗೆ ಬರುತ್ತಿದ್ದಂತೆ ಮಳಿಗೆಯ ಮಾಲಕರು ತಡೆದು ತೀವ್ರ ಜಟಾಪಟಿ ನಡೆಸಿದ್ದಾರೆ. ನಾವು ತಪಾಸಣೆ ನಡೆಸುವುದಕ್ಕೆ ಆಗಮಿಸಿದ್ದು ಎಂದು ಅಧಿಕಾರಿಗಳು ಹೇಳಿದರೆ, ಹೊಟೇಲ್ ಮಾಲಕರು ಒಳಗೆ ಬಂದು ತಪಾಸಣೆ ನಡೆಸುವುದಕ್ಕೆ ಬಿಡಲ್ಲ ಎಂದು ತಡೆದಿದ್ದಾರೆ. ನಾವು ಎಲ್ಲ ಲೈಸನ್ಸ್ ಇದ್ದುಕೊಂಡೇ ವ್ಯವಹಾರ ನಡೆಸುತ್ತಿದ್ದೇವೆ. ಹೊಟೇಲ್ ಒಳಗಡೆ ಉತ್ತಮ ಸೌಲಭ್ಯವನ್ನೂ ಹೊಂದಿದ್ದೇವೆ ಎಂದು ಮಾಲಕ ಸಿದ್ದಿಕ್ ಹೇಳಿದ್ದು ಅಧಿಕಾರಿ ಸಿಬಂದಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.
ನಮ್ಮ ಆಹಾರ ಮಳಿಗೆ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಾವು ಟ್ರೇಡ್ ಲೈಸನ್ಸ್ ಗಾಗಿ ಸಲ್ಲಿಸಿರುವ ಅರ್ಜಿಯನ್ನು ಇಲಾಖೆಯಿಂದ ನಿರಾಕರಿಸಿಯೂ ಇಲ್ಲ. 2017ರಿಂದ ಇದೇ ಜಾಗದಲ್ಲಿ ನಾವು ಬಿಸಿನೆಸ್ ಹೊಂದಿದ್ದೇವೆ. ಈಗ ಅಧಿಕಾರಿಗಳು ಕೆಲವು ಬಾಡಿಗೆ ಗೂಂಡಾಗಳನ್ನು ಜೊತೆಗೆ ಕರೆದುಕೊಂಡು ಬಂದಿದ್ದಾರೆ. ಯಾರಿಂದಲೋ ಲಂಚ ಪಡೆದು ದಾಳಿಗೆ ಬಂದಿದ್ದಾರೆ ಎಂದು ಎನ್.ಎಂ.ಎ ಸಿದ್ದಿಕ್ ಆರೋಪ ಮಾಡಿದ್ದಾರೆ. ಕೊನೆಗೆ, 24 ಗಂಟೆಯ ಗಡುವು ಕೊಡುತ್ತೇವೆ, ಸೂಕ್ತ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆ ಪತ್ರಗಳನ್ನು ಇಲಾಖೆಗೆ ಹಾಜರುಪಡಿಸಬೇಕು ಎಂದು ಹೇಳಿ ಅಧಿಕಾರಿಗಳು ಹೊರ ನಡೆದಿದ್ದಾರೆ.
Food department sleuths have raided a food outlet called MFC FOOD MART running business at Falnir without a trade license. The owners of the outlet have expressed anguish at the attitude of the officials who had to return after inspecting the hygiene maintained at the outlet.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 04:38 pm
Mangalore Correspondent
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
DIG Anucheth Mangalore, SIT Dharmasthala: ಎಸ್...
25-07-25 06:05 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am