ಬ್ರೇಕಿಂಗ್ ನ್ಯೂಸ್
27-10-23 12:24 pm Mangalore Correspondent ಕರಾವಳಿ
ಉಳ್ಳಾಲ, ಅ.27: ಕಾಂಗ್ರೆಸ್ ಆಡಳಿತದಲ್ಲಿ ಪರಶುರಾಮನ ಪ್ರತಿಮೆ ನಕಲಿ ಎಂದಾಗಿರುತ್ತಿದ್ದರೆ ಕರಾವಳಿಯೇ ಹೊತ್ತಿ ಉರಿಯುತ್ತಿತ್ತು. ಈಗ ಯಾಕೆ ಇವರೆಲ್ಲ ಸುಮ್ಮನಿದ್ದಾರೆ. ಪರಶುರಾಮನ ಶಾಪದಿಂದಲೇ ಕರಾವಳಿ ಬಿಜೆಪಿ ಮುಕ್ತವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಮ್.ಜಿ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಕಳದಲ್ಲಿ ಪರಶುರಾಮನ ಫೈಬರ್ ಪ್ರತಿಮೆ ನಿರ್ಮಿಸಿ ಕಂಚಿನದ್ದೆಂದು ಹೇಳಿ ಹಿಂದೂಗಳನ್ನು ಮೋಸಗೊಳಿಸಲಾಗಿದೆ ಎಂದು ಆರೋಪಿಸಿ ತೊಕ್ಕೊಟ್ಟಿನಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸುಳ್ಳನ್ನೇ ದೇವರೆಂದು ಆರಾಧಿಸುವ ಸೂಲಿಬೆಲೆ, ಶೋಭಕ್ಕ, ಸಿ.ಟಿ.ರವಿಯವರೇ ನೀವೀಗ ಎಲ್ಲಿದ್ದೀರಿ. ನೀವೇಕೆ ಕಾರ್ಕಳಕ್ಕೆ ಹೋಗುತ್ತಿಲ್ಲ? ಇಂಥಹ ಮೋಸ ಕಾಂಗ್ರೆಸ್ ಆಡಳಿತದಲ್ಲಾದರೆ ನೀವು ಸುಮ್ನೆ ಇರುತ್ತಿದ್ರಾ? ದೈವ- ದೇವರ ಹೆಸರಲ್ಲಿ ಜನರನ್ನು ಮೋಸಗೊಳಿಸುವುದು ನಿಮ್ಮ ಹಿಂದುತ್ವ. ಇಂಥಹ ನಾಟಕವಾಡದ ನಮ್ಮದು ಅಸಲೀ ಹಿಂದುತ್ವ. ಚುನಾವಣಾ ಸಂದರ್ಭ ತಾನು ಹಿಂದೂ ಹುಲಿ ಎಂದು ತೋರಿಸಲು ಸುನಿಲ್ ಕುಮಾರ್ ಪರಶುರಾಮನ ನಕಲಿ ಮೂರ್ತಿ ತಂದು ಇಟ್ಟಿದ್ದಾರೆ. ಮೂರ್ತಿ ಇಡುವಾಗ ಸುನಿಲ್ ಕುಮಾರ್ ಭಜನೆ ಮಾಡಿದ್ದು, ಶಂಖ ಊದಿದ್ದು ಸತ್ಯ ಎಂದಾದರೆ ಪರಶುರಾಮನ ಮೂರ್ತಿ ಸತ್ಯ ಯಾಕಾಗಿಲ್ಲ. ಹಿಂದೂಗಳ ಅಸ್ಮಿತೆಯನ್ನೇ ನಕಲಿ ಮಾಡಿದ ಬಿಜೆಪಿ, ಸಂಘ ಪರಿವಾರದ ನಕಲಿ ಹಿಂದುತ್ವದ ಮುಖ ಇದಾಗಿದೆ ಎಂದು ಟೀಕಿಸಿದರು.

ಪರಶುರಾಮನ ನಕಲಿ ಪ್ರತಿಮೆ ನಿರ್ಮಿಸಿದ ಜಮೀನೂ ಅಕ್ರಮ. ಗೋಮಾಳ ಜಾಗದಲ್ಲಿ ಪ್ರತಿಮೆ ನಿರ್ಮಿಸಿದ್ದು ಸುನಿಲ್ ಕುಮಾರ್ ಅವರ ದೊಡ್ಡ ಹುನ್ನಾರ. ಜಿಲ್ಲಾಡಳಿತ, ಕಂದಾಯ ಇಲಾಖೆ ತಿರಸ್ಕರಿಸಿದ ಜಾಗದಲ್ಲಿ ನಿರ್ಮಿತಿ ಕೇಂದ್ರ ಮೂರ್ತಿ ನಿರ್ಮಿಸಿದ್ದು ಬಿಜೆಪಿಯ ಯಾವ ಸೀಮೆಯ ಆಡಳಿತ ಎಂದು ಪ್ರಶ್ನಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್, ಕಾಂಗ್ರೆಸ್ ಜಿಲ್ಲಾ ಸದಸ್ಯರಾದ ಸುರೇಶ್ ಭಟ್ನಗರ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಹಮ್ಮದ್ ಮುಸ್ತಫಾ ಮಲಾರ್, ಸುರೇಖಾ ಚಂದ್ರಹಾಸ್, ಪ್ರಮುಖರಾದ ಮನ್ಸೂರ್ ಮಂಚಿಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
If Parashurama Theme Park in Karkala was fake by Congress Karavali would have been burnt in fire, mg hedge in Ullal.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm