ಬ್ರೇಕಿಂಗ್ ನ್ಯೂಸ್
30-10-23 04:44 pm Mangalore Correspondent ಕರಾವಳಿ
ಉಳ್ಳಾಲ, ಅ.30: ಆತ್ಮಹತ್ಯೆ ತಡೆಗೆಂದು ನೇತ್ರಾವತಿ ನದಿಯ ಸೇತುವೆಯ ಇಬ್ಬದಿಗೆ ಹಾಕಿದ್ದ ತಡೆ ಬೇಲಿಯನ್ನೇ ಹಾರಿ ಯುವಕನೋರ್ವ ನದಿಗೆ ಜಿಗಿದಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ತೊಕ್ಕೊಟ್ಟಿನಿಂದ ಮಂಗಳೂರಿನತ್ತ ಹುಂಡೈ ಐ10 ಕಾರಲ್ಲಿ ತೆರಳುತ್ತಿದ್ದ ಯುವಕನೋರ್ವ ಕಾರನ್ನ ಸೇತುವೆ ಬಳಿಯಲ್ಲೇ ನಿಲ್ಲಿಸಿದ್ದಾನೆ. ವಾಹನ ಸವಾರರು ನೋಡ ನೋಡುತ್ತಲೇ ಸೇತುವೆಯ ತುದಿಯ ಆವರಣ ಗೋಡೆ ಹಾರಿದ ಯುವಕ ಆವರಣ ಗೋಡೆಗೆ ಅಳವಡಿಸಲಾಗಿದ್ದ ಪೈಪ್ ಲೈನ್ ಗಳ ಮೇಲೆ ನಡೆಯುತ್ತಲೇ ಸೇತುವೆ ಮಧ್ಯ ಭಾಗ ತಲುಪಿ ನದಿಗೆ ಜಿಗಿದು ನೀರು ಪಾಲಾಗಿದ್ದಾನೆ. ಯುವಕ ನೀರು ಪಾಲಾಗುತ್ತಿರುವ ದೃಶ್ಯವನ್ನ ಕೆಲವರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ.


ಚಿಕ್ಕಮಂಗಳೂರು ಮೂಲದ ಪ್ರಸನ್ನ ಕುಮಾರ್ ಎಂಬವರ ಹೆಸರಲ್ಲಿ ಕಾರು ನೋಂದಣಿಗೊಂಡಿದೆ. ಅಲ್ಲದೆ, ಕಾರಲ್ಲಿ ಪ್ರಸನ್ನ ಅವರ ಡ್ರೈವಿಂಗ್ ಲೈಸೆನ್ಸ್ ದೊರಕಿದೆ. ಸ್ಥಳೀಯ ನಾಡದೋಣಿಗಳಿಂದ ಪೊಲೀಸರು ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಪ್ರಸನ್ನ ಅವರ ಫ್ಯಾಮಿಲಿಯನ್ನು ಪೊಲೀಸರು ಸಂಪರ್ಕಿಸಿದ್ದು ಪ್ರಸನ್ನ ಮತ್ತು ಸುಮನ್ ಎಂಬವರು ತರಕಾರಿ ಮಾರಾಟಕ್ಕೆಂದು ಮಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಈಗ ನೀರಿಗೆ ಹಾರಿದ ವ್ಯಕ್ತಿ ಪ್ರಸನ್ನ ಹೌದಾ ಅಥವಾ ಬೇರೆ ವ್ಯಕ್ತಿಯೇ ಎಂದು ಗೊತ್ತಾಗಿಲ್ಲ.
ನೇತ್ರಾವತಿ ಸೇತುವೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಆತ್ಮಹತ್ಯೆಗಳಿಗೆ ಕಡಿವಾಣ ಹಾಕಲು ಮಂಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಎರಡು ವರ್ಷಗಳ ಹಿಂದೆ ಸುಮಾರು 50 ಲಕ್ಷ ವೆಚ್ಚದಲ್ಲಿ ಸೇತುವೆಗೆ ಕಬ್ಬಿಣದ ತಡೆ ಬೇಲಿ ಅಳವಡಿಸಿತ್ತು. ಬೇಲಿ ಅಳವಡಿಸಿದ ನಂತರ ಸೇತುವೆಯಲ್ಲಿ ಹಾರಿ ಸಾಯುವುದು ಕಡಿಮೆಯಾಗಿತ್ತು. ಇದೀಗ ಬೇಲಿಯನ್ನೇ ಲೆಕ್ಕಿಸದೆ ಯುವಕ ನದಿಗೆ ಜಿಗಿದಿದ್ದು ಸಾವಿನ ದಾರಿ ಹಿಡಿದವನಿಗೆ ಬೇಲಿ ಅಡ್ಡಿಯಾಗಲ್ಲ ಎನ್ನುವ ಸಂದೇಶ ನೀಡಿದ್ದಾನೆ.
Chikmagaluru man jumps into Netravati river at Ullal bridge in Mangalore by parking his car aside.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm