ಬ್ರೇಕಿಂಗ್ ನ್ಯೂಸ್
13-11-23 06:53 pm Mangalore Correspondent ಕರಾವಳಿ
ಉಡುಪಿ, ನ.13: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಒಮ್ಮಿಂದೊಮ್ಮೆಲೇ ಬೆಂಕಿ ಹತ್ತಿಕೊಂಡಿದ್ದು, ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳು ಬೆಂಕಿಗಾಹುತಿಯಾಗಿವೆ. ಧಗ ಧಗನೆ ಉರಿದ ಬೆಂಕಿಯ ಕೆನ್ನಾಲಿಗೆಗೆ ಬಾನಲ್ಲಿ ದಟ್ಟ ಹೊಗೆ, ಉರಿ ಜ್ವಾಲೆಯನ್ನು ಸೃಷ್ಟಿಸಿತ್ತು.
ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇಂದು ಬೆಳಗ್ಗೆ ಬೆಂಕಿಯದ್ದೇ ಸದ್ದು. ಒಂದೆರಡಲ್ಲ ಹತ್ತಕ್ಕೂ ಹೆಚ್ಚು ಬೋಟುಗಳಿಗೆ ಹಠಾತ್ ಬೆಂಕಿ ಹತ್ತಿಕೊಂಡಿದ್ದು, ಸಮುದ್ರ ಬದಿಯಲ್ಲಿ ಗಾಳಿಯೊಂದಿಗೆ ಬೆಂಕಿ ಸರಸವಾಡಿದಂತಿತ್ತು. ಇಷ್ಟಕ್ಕೂ ಬೆಂಕಿ ಬೀಳೋದಕ್ಕೆ ಅಲ್ಲಿಯೇ ದೀಪಾವಳಿ ಪಟಾಕಿ ಸಿಡಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಕಾರಣವಂತೆ. ಕಾರ್ಮಿಕರು ಹಾರಿಸಿದ್ದ ಪಟಾಕಿಯ ಕಿಡಿ ನೇರವಾಗಿ ಬೋಟು ಮೇಲಕ್ಕೆ ಬಿದ್ದಿದೆ. ಬೋಟನ್ನು ತೀರಕ್ಕೆ ತಂದು ಮೇಲ್ಗಡೆ ತೆಂಗಿನ ಗರಿಯನ್ನು ಮುಚ್ಚಲಾಗಿತ್ತು. ತೆಂಗಿನ ಗರಿಗಳು ಬಿಸಿಲಿಗೆ ಒಣಗಿದ್ದರಿಂದ ಪಟಾಕಿಯ ಬಾಣದ ಬಿರುಸಿಗೆ ಬೆಂಕಿಯ ಜ್ವಾಲೆ ಏಳುವಂತೆ ಮಾಡಿತ್ತು. ಗಾಳಿಯಿಂದಾಗಿ ಬೆಂಕಿ ಅಕ್ಕಪಕ್ಕದಲ್ಲಿ ಹರಡಿದ್ದು ಅಲ್ಲಿ ನಿಲ್ಲಿಸಿದ್ದ ಹನ್ನೊಂದು ಬೋಟುಗಳಿಗೂ ಹರಡಿದೆ. ಧಗ ಧಗನೆ ಹೊತ್ತಿಕೊಂಡಿದ್ದು, ಅಲ್ಲಿಯೇ ನಿಲ್ಲಿಸಿದ್ದ ಎರಡು ಬೈಕ್ ಕೂಡ ಹೊತ್ತಿ ಉರಿದು ಹೋಗಿದೆ.
ದೀಪಾವಳಿ ನಿಮಿತ್ತ ಕಾರ್ಮಿಕರು ರಜೆಯಲ್ಲಿದ್ದರೆ, ಮೀನುಗಾರರು ಬೋಟನ್ನು ನಿಲ್ಲಿಸಿ ತಮ್ಮ ಮನೆಗೆ ತೆರಳಿದ್ದರು. ಬೆಂಕಿ ಬಿದ್ದ ಕೂಡಲೇ ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಅನಾಹುತದಿಂದ ಸುಮಾರು 5 ಕೋಟಿಗೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.
Kundapur Eight boats go up in flames after fire breaks out in harbour. Eight boats that were anchored on the river bank, were gutted in a fire mishap on Monday November 13 at Manganese Road of Gangolli. The loss is estimated to run into crore of rupees.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am