ಬ್ರೇಕಿಂಗ್ ನ್ಯೂಸ್
13-11-23 06:53 pm Mangalore Correspondent ಕರಾವಳಿ
ಉಡುಪಿ, ನ.13: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಒಮ್ಮಿಂದೊಮ್ಮೆಲೇ ಬೆಂಕಿ ಹತ್ತಿಕೊಂಡಿದ್ದು, ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳು ಬೆಂಕಿಗಾಹುತಿಯಾಗಿವೆ. ಧಗ ಧಗನೆ ಉರಿದ ಬೆಂಕಿಯ ಕೆನ್ನಾಲಿಗೆಗೆ ಬಾನಲ್ಲಿ ದಟ್ಟ ಹೊಗೆ, ಉರಿ ಜ್ವಾಲೆಯನ್ನು ಸೃಷ್ಟಿಸಿತ್ತು.
ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇಂದು ಬೆಳಗ್ಗೆ ಬೆಂಕಿಯದ್ದೇ ಸದ್ದು. ಒಂದೆರಡಲ್ಲ ಹತ್ತಕ್ಕೂ ಹೆಚ್ಚು ಬೋಟುಗಳಿಗೆ ಹಠಾತ್ ಬೆಂಕಿ ಹತ್ತಿಕೊಂಡಿದ್ದು, ಸಮುದ್ರ ಬದಿಯಲ್ಲಿ ಗಾಳಿಯೊಂದಿಗೆ ಬೆಂಕಿ ಸರಸವಾಡಿದಂತಿತ್ತು. ಇಷ್ಟಕ್ಕೂ ಬೆಂಕಿ ಬೀಳೋದಕ್ಕೆ ಅಲ್ಲಿಯೇ ದೀಪಾವಳಿ ಪಟಾಕಿ ಸಿಡಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಕಾರಣವಂತೆ. ಕಾರ್ಮಿಕರು ಹಾರಿಸಿದ್ದ ಪಟಾಕಿಯ ಕಿಡಿ ನೇರವಾಗಿ ಬೋಟು ಮೇಲಕ್ಕೆ ಬಿದ್ದಿದೆ. ಬೋಟನ್ನು ತೀರಕ್ಕೆ ತಂದು ಮೇಲ್ಗಡೆ ತೆಂಗಿನ ಗರಿಯನ್ನು ಮುಚ್ಚಲಾಗಿತ್ತು. ತೆಂಗಿನ ಗರಿಗಳು ಬಿಸಿಲಿಗೆ ಒಣಗಿದ್ದರಿಂದ ಪಟಾಕಿಯ ಬಾಣದ ಬಿರುಸಿಗೆ ಬೆಂಕಿಯ ಜ್ವಾಲೆ ಏಳುವಂತೆ ಮಾಡಿತ್ತು. ಗಾಳಿಯಿಂದಾಗಿ ಬೆಂಕಿ ಅಕ್ಕಪಕ್ಕದಲ್ಲಿ ಹರಡಿದ್ದು ಅಲ್ಲಿ ನಿಲ್ಲಿಸಿದ್ದ ಹನ್ನೊಂದು ಬೋಟುಗಳಿಗೂ ಹರಡಿದೆ. ಧಗ ಧಗನೆ ಹೊತ್ತಿಕೊಂಡಿದ್ದು, ಅಲ್ಲಿಯೇ ನಿಲ್ಲಿಸಿದ್ದ ಎರಡು ಬೈಕ್ ಕೂಡ ಹೊತ್ತಿ ಉರಿದು ಹೋಗಿದೆ.



ದೀಪಾವಳಿ ನಿಮಿತ್ತ ಕಾರ್ಮಿಕರು ರಜೆಯಲ್ಲಿದ್ದರೆ, ಮೀನುಗಾರರು ಬೋಟನ್ನು ನಿಲ್ಲಿಸಿ ತಮ್ಮ ಮನೆಗೆ ತೆರಳಿದ್ದರು. ಬೆಂಕಿ ಬಿದ್ದ ಕೂಡಲೇ ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಅನಾಹುತದಿಂದ ಸುಮಾರು 5 ಕೋಟಿಗೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.
Kundapur Eight boats go up in flames after fire breaks out in harbour. Eight boats that were anchored on the river bank, were gutted in a fire mishap on Monday November 13 at Manganese Road of Gangolli. The loss is estimated to run into crore of rupees.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm