ಬ್ರೇಕಿಂಗ್ ನ್ಯೂಸ್
27-11-23 10:44 pm Mangalore Correspondent ಕರಾವಳಿ
ಮಂಗಳೂರು, ನ.27: ಕರಾವಳಿಯಲ್ಲಿ ಕಂಬಳ ಅಂದರೆ ಹೆಚ್ಚಾಗಿ ಮೇಲ್ವರ್ಗದವರು ಮಾತ್ರ ಕೋಣಗಳನ್ನು ಕಟ್ಟಿ ಸ್ಪರ್ಧೆಗಿಳಿಯುತ್ತಾರೆ ಎನ್ನುವ ನಂಬಿಕೆಯಿದೆ. ಆದರೆ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಂಬಳ ಈ ನಂಬಿಕೆಯನ್ನು ಹುಸಿಗೊಳಿಸಿದೆ. ಇದೇ ಮೊದಲ ಬಾರಿಗೆ ಪರಿಶಿಷ್ಟ ವರ್ಗದ ಮಲೆಕುಡಿಯ ಜನಾಂಗದ ಕೋಣಗಳು ಮೇಲ್ವರ್ಗದ ಕೋಣಗಳನ್ನು ಬದಿಗೊತ್ತಿ ನೇಗಿಲು ಹಿರಿಯ ವಿಭಾಗದಲ್ಲಿ ಬಹುಮಾನ ಗಳಿಸಿದೆ.
ಬೆಳ್ತಂಗಡಿ ತಾಲೂಕಿನ ಬಂಗಾಡಿಯ ನಾರಾಯಣ ಮಲೆಕುಡಿಯರ ಕೋಣಗಳ ಜೋಡಿಗೆ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಸಿಕ್ಕಿದ್ದು, ಒಂದು ಲಕ್ಷ ನಗದು ಮತ್ತು ಎರಡು ಪವನ್ ಚಿನ್ನದ ಸರ ಬಹುಮಾನವಾಗಿ ಲಭಿಸಿದೆ. ಈ ಬಗ್ಗೆ ನಾರಾಯಣ ಅವರಲ್ಲಿ ಮಾಹಿತಿ ಕೇಳಿದಾಗ, ನಾವು 35 ವರ್ಷಗಳಿಂದಲೂ ಕಂಬಳಕ್ಕೆ ಹೋಗುತ್ತೇವೆ. ನಾವು ಐದು ಮಂದಿ ಸೋದರರಿದ್ದು, ಒಂದೊಂದು ಕಡೆ ಒಬ್ಬೊಬ್ಬರ ಹೆಸರು ಕೊಡುತ್ತೇವೆ ಎಂದಿದ್ದಾರೆ. ಕೃಷಿಯ ಉದ್ದೇಶಕ್ಕೆ ಕೋಣಗಳನ್ನು ಸಾಕುವುದು, ಕೃಷಿ ಮುಗಿದ ಬಳಿಕ ಕಂಬಳಕ್ಕೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಕೋಣಗಳನ್ನು ಹೆಚ್ಚಾಗಿ ಧನಂಜಯ ಸರಪಾಡಿ ಅವರು ಓಡಿಸುತ್ತಾರೆ. ಬೆಂಗಳೂರಿನ ಕಂಬಳದಲ್ಲಿಯೂ ಇವರೇ ಕೋಣ ಓಡಿಸಿದ್ದರು. ಈ ಹಿಂದೆಯೂ ಕ್ವಾರ್ಟರ್ ಫೈನಲ್, ಸೆಮಿ ಹಂತಕ್ಕೆ ಕೋಣ ಬಂದದ್ದಿದೆ. ಮೊನ್ನೆ ಕಕ್ಕೆಪದವು ಕಂಬಳದಲ್ಲಿ ಕ್ವಾರ್ಟರ್ ಬಂದಿದ್ದೆವು. ಇದೇ ಮೊದಲ ಬಾರಿಗೆ ಎದುರಾಳಿ ಕೋಣಗಳನ್ನು ಮಣಿಸಿ ಪ್ರಶಸ್ತಿ ಗೆದ್ದಿರುವುದು. ಸೆಮಿಯಲ್ಲಿ ನಮಗೆ ಬೋಳದ ಗುತ್ತಿನವರ ಕೋಣವೇ ಸೆಣಸಾಟಕ್ಕೆ ಸಿಗುತ್ತದೆ. ಕಂಬಳದಲ್ಲಿ ಕೋಣಗಳನ್ನು ಬದಲಿಸಿ ಕಟ್ಟುವುದು ಸಾಮಾನ್ಯ. ನಾವು ಈ ಬಾರಿ ಬಿಳಿಯೂರಿನ ಕೋಣ ಒಂದನ್ನು ಜತೆಗೆ ಕಟ್ಟಿ ಓಡಿಸಿದ್ದೆವು ಎಂದು ನಾರಾಯಣ ಹೇಳಿದ್ದಾರೆ.
ಇವರಿಗೆ ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಸಾಥ್ ನೀಡಿದ್ದು, ಬೆಂಗಳೂರಿನ ಕಂಬಳಕ್ಕೆ ಒಯ್ಯಲು ಒತ್ತಾಸೆ ತೋರಿದ್ದಾರೆ. ಅಲ್ಲದೆ, ನಾರಾಯಣ ಮಲೆಕುಡಿಯ ಎಂದೇ ಹೆಸರು ನೀಡುವಂತೆ ಸೂಚಿಸಿದ್ದರು. ಬೇರೆ ಕಂಬಳಗಳಲ್ಲಿ ಮಾಲಕರ ಹೆಸರಿನ ಜೊತೆಗೆ ಮಲೆಕುಡಿಯ ಜಾತಿ ಸೂಚಕ ಪದವನ್ನು ನೀಡುತ್ತಿರಲಿಲ್ಲ. ಬೆಂಗಳೂರಿನ ಕಂಬಳದಲ್ಲಿ ದಿನೇಶ್ ಹೆಗ್ಡೆ ಉಳೆಪಾಡಿ ಅವರೇ ಜೊತೆಗಿದ್ದು ಹೆಸರಿನ ಜೊತೆಗೆ ಮಲೆಕುಡಿಯ ಸೇರಿಸಿ ತಂಡಕ್ಕೆ ಬೆಂಬಲ ನೀಡಿದ್ದಾರೆ. 15 ದಿನಗಳಿಂದ ಅವರ ಜೊತೆಗಿದ್ದು ಮಾನಸಿಕವಾಗಿ ಧೈರ್ಯ ತುಂಬಿದ್ದೇನೆ. ನಮ್ಮ ಅದೃಷ್ಟವೋ ಏನೋ, ಈ ಸಲವೇ ಬಹುಮಾನ ಗೆದ್ದಿದೆ. ಬಿಳಿಯೂರಿನ ಫೇವರಿಟ್ ಅಲ್ಲದ ಕೋಣವನ್ನು ಕಟ್ಟಿಕೊಂಡು ಪ್ರಶಸ್ತಿ ಗೆದ್ದಿರುವುದು ಇತರ ಎಲ್ಲರನ್ನೂ ಹುಬ್ಬೇರಿಸಿದೆ. ಕಂಬಳದಲ್ಲಿ ಮೇಲ್ವರ್ಗದವರೇ ಹೆಚ್ಚಿರುವಾಗ ಮಲೆಕುಡಿಯ ಜನಾಂಗದ ಕೋಣ ಪ್ರಶಸ್ತಿ ಗೆದ್ದಿರುವುದು ಒಂದು ರೀತಿಯಲ್ಲಿ ಬದಲಾವಣೆ ತೋರಿಸಿದೆ ಎಂದು ದಿನೇಶ್ ಹೆಗ್ಡೆ ಹೇಳಿದ್ದಾರೆ.
ಭಾರೀ ಹಿಟ್ ಆಗಿದ್ದ ಕಾಂತಾರ ಚಿತ್ರದಲ್ಲಿ ಹಿಂದುಳಿದ ವರ್ಗದ ಶಿವಣ್ಣನ ಕೋಣಗಳು ಕಂಬಳದಲ್ಲಿ ಪ್ರಶಸ್ತಿ ಗೆಲ್ಲುವ ಚಿತ್ರಣ ಇತ್ತು. ಅದೇ ರೀತಿ ಬೆಂಗಳೂರಿನ ಕಂಬಳದಲ್ಲಿ ಮೇಲ್ವರ್ಗದ ಕೋಣಗಳನ್ನು ಬದಿಗೊತ್ತಿ ಕೆಳ ವರ್ಗದ ಮಾಲೀಕನ ಕೋಣಗಳು ಪ್ರಶಸ್ತಿ ಗೆದ್ದಿರುವುದು ಹೊಸ ಇತಿಹಾಸ ಎನ್ನುವಂತಾಗಿದೆ.
Malekudiya Buffalos bag winners tittle at historical Kambala in Bangalore. According to the organisers, the races concluded at around 2 am in the morning. First prize winners in each of the events won Rs one lakh and 16 grams of gold, while those coming second won Rs 50,000 and eight grams of gold.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am