ಬ್ರೇಕಿಂಗ್ ನ್ಯೂಸ್
06-12-23 10:32 pm Mangalore Correspondent ಕರಾವಳಿ
ಮಂಗಳೂರು, ಡಿ.6: ತುಳುನಾಡಿನ ಜನರು ಭಯ-ಭಕ್ತಿಯಿಂದ ನಂಬುವ ದೈವಾರಾಧನೆಯನ್ನೇ ಅಣಕಿಸುವ ರೀತಿಯಲ್ಲಿ ದೈವದ ಕೋಲ ನಡೆಸುವುದು, ದೈವದ ಪಾತ್ರಧಾರಿಯ ಮುಂಭಾಗದಲ್ಲಿ ಯುವತಿಯೊಬ್ಬಳು ಅಶ್ಲೀಲವಾಗಿ ಕುಣಿಯುವ ವಿಡಿಯೋ ವೈರಲ್ ಆಗಿದ್ದು, ಜಾಲತಾಣದಲ್ಲಿ ದೈವ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೈವದ ಕಾರಣಿಕ ತೋರಿಸುವ ಕಾಂತಾರ ಸಿನಿಮಾ ಹಿಟ್ ಆದ ಬಳಿಕ ತುಳುನಾಡಿನ ದೈವಾರಾಧನೆ ಬಗ್ಗೆ ಹೊರಗಿನ ಜನರಿಗೂ ಆಸಕ್ತಿ ಹುಟ್ಟಿತ್ತು. ಮೈಸೂರಿನಲ್ಲಿ ಕೊರಗಜ್ಜನ ಕಟ್ಟೆ ಸ್ಥಾಪನೆ ಮಾಡಿ ಕೋಲ ನಡೆಸಿದ್ದು, ಬೆಂಗಳೂರು ಭಾಗದಲ್ಲಿ ಕರಾವಳಿಯ ದೈವ ನರ್ತಕರನ್ನು ಕರೆದು ಕೋಲ ನೆರವೇರಿಸಿದ್ದು ಒಂದು ವರ್ಷದ ಹಿಂದೆಯೇ ನಡೆದಿತ್ತು. ಆದರೆ ಈ ರೀತಿ ಬೆಂಗಳೂರು, ಮೈಸೂರು, ಮಂಡ್ಯಕ್ಕೆ ಹೋಗಿ ಕೋಲ ನಡೆಸುವ ಕ್ರಮಕ್ಕೆ ಕರಾವಳಿಯಲ್ಲಿ ವಿರೋಧವೂ ಕೇಳಿಬಂದಿತ್ತು. ಇದೀಗ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊರಗಜ್ಜನ ಕೋಲದ ಸಂದರ್ಭದಲ್ಲಿ ಯುವಕರು ವಿಚಿತ್ರವಾಗಿ ಆವೇಶ ಬಂದವರ ರೀತಿ ವರ್ತಿಸುವುದು, ಯುವತಿಯೊಬ್ಬಳು ತನ್ನ ಎದೆಯ ಮೈಮಾಟವನ್ನು ತೋರಿಸಿ ಕುಣಿಯುವುದು, ಮತ್ತೊಬ್ಬ ಯುವತಿ ಹುಲಿ ವೇಷದ ಕುಣಿತದ ರೀತಿ ಹಾರಾಟ ನಡೆಸುವುದು ವಿಡಿಯೋದಲ್ಲಿದೆ.
ಕೊರಗಜ್ಜನ ಕೋಲದ ಪಾತ್ರಧಾರಿ ನೀರನ್ನು ಚಿಮುಕಿಸುತ್ತ ಹೋಗುತ್ತಿದ್ದರೆ, ಉದ್ದಕ್ಕೆ ನಿಂತ ಯುವಕರು ಒಬ್ಬರ ನಂತರ ಇನ್ನೊಬ್ಬರಂತೆ ಆವೇಶ ಬಂದು ವಿಚಿತ್ರವಾಗಿ ವರ್ತಿಸುತ್ತಾರೆ. ಬೆಂಗಳೂರು ಅಥವಾ ಮಂಡ್ಯ ಭಾಗದಲ್ಲಿ ನಡೆದಿರುವ ಕೋಲದ ಚಿತ್ರಣ ಇದಾಗಿದ್ದು, ವಿಡಿಯೋ ನೋಡಿದರೆ ಕರಾವಳಿಯ ದೈವ ನರ್ತಕರೇ ಇದನ್ನು ಮಾಡಿರುವಂತಿದೆ. ದೊಡ್ಡ ಮೊತ್ತಕ್ಕೆ ಕಂಟ್ರಾಕ್ಟು ಪಡೆದು ಈ ರೀತಿಯ ಕೋಲಗಳನ್ನು ತುಳುನಾಡಿನ ದೈವ ನರ್ತಕರೇ ಬೆಂಗಳೂರು ಭಾಗದಲ್ಲಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳಿದ್ದವು. ಈಗ ಹೊರಬಂದಿರುವ ವಿಡಿಯೋ ಅದಕ್ಕೆ ಸಾಕ್ಷಿಯಾಗಿ ಕಂಡುಬರುತ್ತಿದ್ದು, ದೈವಗಳಿಗೆ ಇಂತಹ ಸ್ಥಿತಿಯಾದರೆ ಹೇಗೆ ಎನ್ನುವ ಪ್ರಶ್ನೆಗಳನ್ನು ಜನರು ಮುಂದಿಡುತ್ತಿದ್ದಾರೆ.
ಕಾಂತಾರದ ಪಂಜುರ್ಲಿ ಮಾದರಿಯ ಚಿತ್ರಣದ ಮುಂದೆ ಯುವತಿಯೊಬ್ಬಳು ವಿಕೃತ ಮತ್ತು ಅಶ್ಲೀಲವಾಗಿ ಕುಣಿದಿದ್ದು, ಅದನ್ನು ಒಬ್ಬಾತ ಹತ್ತಿರದಿಂದಲೇ ಶೂಟ್ ಮಾಡಿದ್ದಾನೆ. ಕಾಲೇಜಿನ ವೇದಿಕೆಯಲ್ಲಿ ನಡೆದಿರುವ ಚಿತ್ರಣವೋ ಗೊತ್ತಿಲ್ಲ. ದೈವಗಳನ್ನು ಅಣಕಿಸುವ ರೀತಿ ಆಕೆಯ ವರ್ತನೆ ಇದೆ. ಈ ಬಗ್ಗೆ ತುಳುನಾಡಿನ ದೈವ ನರ್ತಕರು ದೂರು ಕೊಡಲು ಮುಂದಾಗಿದ್ದಾರೆ. ದೈವದ ಕೋಲ ನೆಪದಲ್ಲಿ ವಿಕೃತವಾಗಿ ವರ್ತಿಸುವುದು, ಅಶ್ಲೀಲವಾಗಿ ಕುಣಿಯುವುದು ದೈವಾರಾಧನೆ ಮತ್ತು ಭಕ್ತರ ನಂಬಿಕೆಗೆ ಮಾಡಿದ ಅವಮಾನವಾಗಿದ್ದು, ದೂರು ದಾಖಲಾದರೆ ಪೊಲೀಸರು ಕ್ರಮ ಕೈಗೊಳ್ಳಬಹುದಾಗಿದೆ.
Insult to Mangalore daiva kola video goes viral on social media. Viral videos have been critised by people over social media
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm