ಬ್ರೇಕಿಂಗ್ ನ್ಯೂಸ್
19-08-20 11:26 am Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 19: ಕೊರೊನಾ ಅನ್ ಲಾಕ್ ಬಳಿಕ ಮದ್ಯದಂಗಡಿಗಳು ತೆರೆದುಕೊಂಡಿವೆ. ಇದೇ ವೇಳೆ, ಬಾರ್ ಗಳಲ್ಲಿ ಲಿಕ್ಕರ್ ಪಾರ್ಸೆಲ್ ಮಾಡಲು ಅಬಕಾರಿ ಇಲಾಖೆ ಅವಕಾಶ ನೀಡಿದೆ. ಆದರೆ, ಮಂಗಳೂರಿನ ಕೆಲವೆಡೆ ಈ ವಿನಾಯ್ತಿ ನೆಪದಲ್ಲಿಯೇ ಕಾರುಬಾರು ನಡೆಯುತ್ತಿರುವ ಆರೋಪ ಕೇಳಿಬಂದಿದೆ.
ಮಂಗಳೂರು ನಗರ ಪ್ರದೇಶದಲ್ಲಿ ಪೊಲೀಸರಿಗೆ ಮಾಮೂಲು ಕೊಟ್ಟು ಬಾರ್ ಗಳಲ್ಲಿಯೇ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಸಂಜೆಯಾಗುತ್ತಿದ್ದಂತೆ ಎಂದಿನ ರೀತಿಯಲ್ಲಿಯೇ ಮದ್ಯಪ್ರಿಯರು ಬಾರ್ ಗಳಲ್ಲೇ ಕುಳಿತು ಕುಡಿಯಲು ಆರಂಭಿಸಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆ, ಕೆಎಸ್ಸಾರ್ಟಿಸಿ, ಕಾಪಿಕಾಡ್, ಹಂಪನಕಟ್ಟೆ ಬಳಿಯ ಬಾರ್ ಗಳಲ್ಲಿ ರಾತ್ರಿ ವರೆಗೂ ಜನರು ಕುಳಿತು ಕುಡಿಯುತ್ತಿದ್ದಾರೆ. ಬಾರ್ ಗಳಲ್ಲಿ ಲಿಕ್ಕರ್ ಪಾರ್ಸೆಲ್ ಮಾಡಲು 9 ಗಂಟೆ ವರೆಗೆ ಮಾತ್ರ ಅವಕಾಶ ಇದ್ದರೂ, ರಾತ್ರಿ ಹನ್ನೊಂದು ಆದರೂ ಬಾಗಿಲು ಹಾಕದೆ ವ್ಯಾಪಾರ ನಡೆಸುವುದನ್ನು ಗಮನಿಸಿದ ಸಾರ್ವಜನಿಕರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ. ಕೆಲವು ಕಡೆ ಬಾರ್ ಗಳಲ್ಲಿ ಇಸ್ಪೀಟ್ ಆಟಕ್ಕೂ ವೇದಿಕೆ ಕಲ್ಪಿಸಲಾಗಿದೆ. ಬಾರ್ ಒಳಗಿನ ಟೇಬಲ್ ಗಳಲ್ಲಿ ಇಸ್ಪೀಟ್ ಎಲೆಗಳು ಸದ್ದು ಮಾಡುತ್ತಿವೆಯಂತೆ. ಪಬ್, ಇಸ್ಪೀಟ್ ಕ್ಲಬ್ ಬಂದ್ ಇರುವ ಹಿನ್ನೆಲೆಯಲ್ಲಿ ಬಾರ್ ಒಳಗಡೆಯೇ ದಲ್ಲಾಳಿಗಳು ಸೇರಿ ಇಸ್ಪೀಟ್ ಅಡ್ಡೆಗಳಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
ಇದೆಲ್ಲವೂ ಸ್ಥಳೀಯ ಪೊಲೀಸರ ಗಮನಕ್ಕೆ ಬರದ ವಿಷಯವೇನಲ್ಲ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm