ಸೋಮೇಶ್ವರ ; ಕೊಳೆತ ಸ್ಥಿತಿಯಲ್ಲಿ ಸಿಕ್ಕ ಶವದ ಗುರುತು ಪತ್ತೆ 

21-08-20 10:28 pm       Mangaluru Correspondant   ಕರಾವಳಿ

ಸೋಮೇಶ್ವರ ಕಡಲಕಿನಾರೆಯಲ್ಲಿ ಇಂದು ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಗುರುತು ಪತ್ತೆಯಾಗಿದೆ. ಮೃತರನ್ನು  ಮಂಗಳೂರಿ‌ನ ಆಡು ಮರೋಳಿ ನಿವಾಸಿ ರಾಜೇಶ್ (43) ಎಂದು ಗುರುತಿಸಲಾಗಿದೆ.

ಮಂಗಳೂರು, ಆ.21: ಸೋಮೇಶ್ವರ ಕಡಲಕಿನಾರೆಯಲ್ಲಿ ಇಂದು ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಗುರುತು ಪತ್ತೆಯಾಗಿದೆ. ಮೃತರನ್ನು  ಮಂಗಳೂರಿ‌ನ ಆಡು ಮರೋಳಿ ನಿವಾಸಿ ರಾಜೇಶ್ (43) ಎಂದು ಗುರುತಿಸಲಾಗಿದೆ.

ಕಂಕನಾಡಿ ಠಾಣೆ ವ್ಯಾಪ್ತಿಯ ಆಡುಮರೋಳಿ ನಿವಾಸಿ ರಾಜೇಶ್, ಆಗಸ್ಟ್ 4 ರ ರಾತ್ರಿ ಪಂಪ್ ವೆಲ್ ತಾರಾಯಿತೋಟ ಎಂಬಲ್ಲಿ ಜಡಿ ಮಳೆಗೆ ಚರಂಡಿಯಲ್ಲಿ ಬಿದ್ದು ನಾಪತ್ತೆಯಾಗಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಬೆಳಗ್ಗೆ ಸೋಮೇಶ್ವರ, ಉಚ್ಚಿಲದ ಕಡಲ ಕಿನಾರೆಯಲ್ಲಿ ಅಪರಿಚಿತ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರ ಸೂಚನೆ ಮೇರೆಗೆ, ಸಂಬಂಧಿಕರನ್ನು ಕರೆಸಿ, ಶವದ ಗುರುತು ಪತ್ತೆ ಮಾಡಿಸಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು  ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ್ದಾರೆ.