ಕೋವಿಡ್ ಸೋಂಕಿನಿಂದ ಮಂಗಳೂರಿನ ವಕೀಲ ಮೃತ್ಯು

22-04-21 03:58 pm       Mangalore Correspondent   ಕರಾವಳಿ

ಕೊರೊನಾ ಸೋಂಕಿಗೆ ಒಳಗಾಗಿದ್ದ ಮಂಗಳೂರಿನ ವಕೀಲರೊಬ್ಬರು ಮೃತ ಪಟ್ಟ ಘಟನೆ ನಡೆದಿದೆ.

ಮಂಗಳೂರು, ಎ.22: ಕೊರೊನಾ ಸೋಂಕಿಗೆ ಒಳಗಾಗಿದ್ದ ಮಂಗಳೂರಿನ ವಕೀಲರೊಬ್ಬರು ಕೊನೆಗೆ ಉಸಿರಾಟ ತೊಂದರೆಗೀಡಾಗಿ ಸಾವು ಕಂಡ ಘಟನೆ ನಡೆದಿದೆ.

ಮಂಗಳೂರಿನ ರಥಬೀದಿ ಬಳಿ ಕಚೇರಿ ಹೊಂದಿದ್ದ ವಿನೋದ್ ಪಾಲ್ (49) ಮೃತ ವಕೀಲ. ವಾರದ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದ ವಿನೋದ್ ಪಾಲ್ ಮನೆಯಲ್ಲೇ ಹೋಮ್ ಐಸೋಲೇಶನ್ ಇದ್ದರು. ಅಲ್ಲದೆ, ಔಷಧಿಯನ್ನೂ ಪಡೆದಿದ್ದರು ಎನ್ನಲಾಗುತ್ತಿದೆ. ಆದರೆ, ನಿನ್ನೆ ಸಂಜೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಸ್ನೇಹಿತರಲ್ಲಿ ಫೋನ್ ಮಾಡಿ ತಿಳಿಸಿದ್ದರಂತೆ.

ಉಸಿರಾಡಲು ಕಷ್ಟಪಡುತ್ತಿದ್ದ ವಿನೋದ್ ಪಾಲ್ ಅವರನ್ನು ಇಂದು ಬೆಳಗ್ಗೆ ಯೇನಪೋಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ವಕೀಲ ಸ್ನೇಹಿತರು ತಿಳಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಕೊರೊನಾ ಸೋಂಕು ಮಾರಣಾಂತಿಕ ಅಲ್ಲ. ಸೂಕ್ತ ಸಮಯದಲ್ಲಿ ಔಷಧಿ ಪಡೆದರೆ ತೊಂದರೆಯಿಲ್ಲ. ಆದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ತೆರಳದೆ ನಿರ್ಲಕ್ಷ್ಯ ವಹಿಸಿದರೆ ಮಾರಣಾಂತಿಕ ಎನ್ನುತ್ತಾರೆ.

ವಿನೋದ್ ಪಾಲ್ ಅವಿವಾಹಿತರಾಗಿದ್ದು, ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಜ್ವರದ ಕಾರಣ ಎರಡು ವಾರಗಳಿಂದ ಕೋರ್ಟಿಗೆ ಬಾರದೆ, ದೂರ ಉಳಿದಿದ್ದರು

Mangalore Popular Lawyer Vinod Pal (49) dies of Covid. It is said he was in home isolation and suffered breathing issues and breathed his last. Vinod Pal is a resident of Dongarakere in the city.