ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬಂಧನ

29-08-20 08:54 pm       Dhruthi Anchan - Correspondant   ಕರಾವಳಿ

ಮಂಗಳೂರು ನಗರಕ್ಕೆ ಹಾಗು ಕೇರಳ ರಾಜ್ಯಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ.

ಮಂಗಳೂರು, ಆಗಸ್ಟ್ 29: ಮಂಗಳೂರು ನಗರಕ್ಕೆ ಹಾಗು ಕೇರಳ ರಾಜ್ಯಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 132kg ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.



ಕೇರಳ ಕಾಸರಗೋಡು ನಿವಾಸಿ ಕಲಂದರ್ ಮೊಹಮ್ಮದ್ ( 35 ) ಹಾಗು ಮೊಯಿದ್ದೀನ್ ಅನ್ಸರ್ ( 27 ) ಬಂಧಿತ ಆರೋಪಿಗಳು. ಬಂಧಿತರಿಂದ 43 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕ್ಕೊಳ್ಳಲಾಗಿದೆ.

ಬೆಂಗಾವಲು ವಾಹನದೊಂದಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಖದೀಮರನ್ನು ಮಂಗಳೂರಿನ ಪಂಪವೆಲ್ಲ್ ಬಳಿಯ ತಾರೆತೋಟ ಎಂಬಲ್ಲಿ ಬಂಧಿಸಿದ್ದಾರೆ.