5 ತಿಂಗಳ ಬಳಿಕ ಸಮುದ್ರಕ್ಕಿಳಿದ ಕಡಲ ಮಕ್ಕಳು!!

01-09-20 01:29 pm       Dhruthi Anchan - Correspondent   ಕರಾವಳಿ

ಕೊರೊನಾ ವೈರಸ್ ಭೀತಿಯಿಂದ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಇಂದು ಜಿಲ್ಲಾಡಳಿತದ ಆದೇಶದಂತೆ ಆರಂಭವಾಗಿದೆ

ಮಂಗಳೂರು, ಸೆಪ್ಟೆಂಬರ್.1: ಕೊರೋನಾ  ಕಾರಣದಿಂದ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಇಂದಿನಿಂದ ಆರಂಭವಾಗಲಿದೆ. ಪ್ರತಿ ವರ್ಷ  ಮೇ ತಿಂಗಳಲ್ಲಿ ಮೀನುಗಾರಿಕಾ  ಋತು ಅಂತ್ಯಗೊಳ್ಳುತಿದ್ದರೆ, ಈ ವರ್ಷ ಕೊರೋನಾ ಭೀತಿಯಿಂದಾಗಿ ಎರಡು ತಿಂಗಳು ಮುಂಚೆಯೇ ಸ್ಥಗಿತವಾಗಿತ್ತು. ಅಲ್ಲದೇ ಪ್ರತಿ ವರ್ಷ  ಆಗಸ್ಟ್ 1 ರಂದು ಮೀನುಗಾರಿಕೆ ಆರಂಭವಾಗದೇ ಸೆ. 1 ರಿಂದ ಆರಂಭವಾಗಿದೆ.

ಸದ್ಯ ಇಂದು ಶೇ. 20 ರಷ್ಟು ಬೋಟುಗಳು ಮಾತ್ರ ಕಡಲಿಗಿಳಿದಿದ್ದು  ಮುಂದಿನ ದಿನಗಳಲ್ಲಿ ಉಳಿದ ಬೋಟುಗಳು ಕಡಲಿಗಿಳಿಯಲಿವೆ. ಕೇರಳ, ತಮಿಳುನಾಡು, ಬಿಹಾರ್, ಒಡಿಶಾ ಹಾಗೂ ಆಂಧ್ರಪ್ರದೇಶದ ಕಾರ್ಮಿಕರು ಮಂಗಳೂರಿನ ಮೀನುಗಾರಿಕಾ ಬೋಟ್​ನಲ್ಲಿ ದುಡಿಯುತ್ತಿದ್ದು ಸಾರಿಗೆ ವ್ಯವಸ್ಥೆ ಸಮಸ್ಯೆಯಿಂದ ಬೋಟ್ ಮಾಲೀಕರೆ ಕರೆದುಕೊಂಡು ಬಂದಿದ್ದಾರೆ.