ಬ್ರೇಕಿಂಗ್ ನ್ಯೂಸ್
16-09-20 12:22 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟೆಂಬರ್ 16: ಚೀನಾ - ಭಾರತ ನಡುವೆ 'ಗಡಿಬಿಡಿ' ಆಗಿರೋದಕ್ಕೂ ಕರಾವಳಿಯ ಮೀನು ಉದ್ಯಮಕ್ಕೂ ಏನು ಸಂಬಂಧ ಹೇಳಿ.. ಗಡಿ ಸಂಕಷ್ಟಕ್ಕೂ ನಮ್ಮ ಕಡಲ ಮಕ್ಕಳಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಅಂತ ನೀವು ಕೇಳಬಹುದು. ಆದರೆ, ಅಲ್ಲಿ ಸಂಕಷ್ಟ ಆಗಿರೋದಕ್ಕೂ ಇಲ್ಲಿನ ಮೀನುಗಾರಿಕೆಗೂ ಸಂಬಂಧ ಇದೆ ಕಣ್ರೀ.. ಹೌದು.. ಅದೇ ಈಗ ನಮ್ಮ ಕಡಲ ಮಕ್ಕಳ ಉದ್ಯಮಕ್ಕೆ ಹೊಸ ಸಂಕಷ್ಟ ತಂದಿಟ್ಟಿದೆ.

ಈಗಾಗ್ಲೇ ಕೊರೊನಾ ಭೀತಿ, ಲಾಕ್ಡೌನ್ ಬಿಕ್ಕಟ್ಟು, ಕಾರ್ಮಿಕರ ಕೊರತೆಯಿಂದ ಶೋಚನೀಯ ಸ್ಥಿತಿಗೆ ಮುಟ್ಟಿರುವ ಮೀನುಗಾರಿಕೆ ಉದ್ಯಮಕ್ಕೆ ಹೊಸ ತಲೆನೋವು ಶುರುವಾಗಿದೆ. ಅದೇ ಚೀನಾ ಜೊತೆಗಿನ ಭಾರತದ ಶೀತಲ ಸಮರ. ಉಭಯ ರಾಷ್ಟ್ರಗಳು ವಾಣಿಜ್ಯ ನಿರ್ಬಂಧ ಹೆಸರಲ್ಲಿ ತಂಟೆ ಶುರು ಮಾಡ್ಕೊಂಡ್ರೆ ಮೀನು ವಹಿವಾಟನ್ನೇ ನಂಬ್ಕೊಂಡಿರೋ ಅದೆಷ್ಟೋ ಮಂದಿಗೆ ಈ ಬಾರಿಯೂ ಅಧೋಗತಿಯೇ ಸರಿ. ಇಷ್ಟಕ್ಕೂ ಕರಾವಳಿಯಿಂದ ಚೀನಾಕ್ಕೆ ಎಷ್ಟರಮಟ್ಟಿಗೆ ಮೀನು ಸಪ್ಲೈ ಆಗ್ತಿತ್ತು ಅಂತೀರಾ..
ಕರ್ನಾಟಕ ರಾಜ್ಯದಿಂದ ವರ್ಷಕ್ಕೆ ಸುಮಾರು 1 ಸಾವಿರ ಕಂಟೈನರ್ ಮೀನು ಚೀನಾಕ್ಕೆ ರಫ್ತು ಆಗ್ತಾ ಇತ್ತು. ಕಂಟೈನರ್ ಒಂದರಲ್ಲಿ ಥರಾವರಿ ಮೀನುಗಳಿದ್ದ 25 ಟನ್ ಮೀನು ಇರುತ್ತಿತ್ತು. ಆದರೆ, ಕೊರೋನಾ ವಕ್ಕರಿಸಿದ ಬಳಿಕ ಮೀನು ರಫ್ತೇ ಆಗಿಲ್ಲ. ಚೀನಾ ಬಿಡಿ, ಯಾವ ದೇಶಕ್ಕೂ ಹೋಗೇ ಇಲ್ಲ. ಹೀಗಾಗಿ ವಿದೇಶಕ್ಕೆ ರಫ್ತು ಆಗುತ್ತಿದ್ದ ಮೀನು ವಹಿವಾಟಿಗೆ ಭಾರೀ ಹೊಡೆತ ಬಿದ್ದಿದೆ.

ಇನ್ನು ಮೀನು ವಹಿವಾಟಿನದ್ದು ಕರಾವಳಿಗಿಂತಲೂ ವಿದೇಶದ್ದೇ ದೊಡ್ಡ ಮೊತ್ತ.. ಚೀನಾ ಸೇರಿ ಹಲವು ದೇಶಗಳಿಗೆ, ವರ್ಷಕ್ಕೆ ಏನಿಲ್ಲ ಅಂದ್ರೂ 1600 - 2 ಸಾವಿರ ಕೋಟಿ ಮೊತ್ತದ ಮೀನು ರಫ್ತಾಗತ್ತೆ. ಆದರೆ ಕಳೆದ ಆರು ತಿಂಗಳಲ್ಲಿ ಕೊರೋನಾ ಕಾಟ ಮೀನು ರಫ್ತಿನ ವಹಿವಾಟನ್ನೇ ಕಸಿದುಕೊಂಡಿದೆ. ಶೇಖರಿಸಿಟ್ಟ ಮೀನನ್ನು ರಫ್ತು ಮಾಡಲಾಗದೆ ಕರಾವಳಿಯ ಎಲ್ಲ ಸ್ಟೋರೇಜ್ ಮಾಲಕರು ಈ ಬಾರಿ ಮಳೆಗಾಲದಲ್ಲಿ ಮೀನು ಖಾಲಿ ಮಾಡೋದು ಹೇಗೆ ಅಂತಲೇ ತಲೆಕೆಡಿಸಿಕೊಂಡಿದ್ದರು. ಇತ್ತ ಮೀನುಗಾರಿಕೆಯೂ ಇಲ್ಲದ್ದರಿಂದ ಅಷ್ಟೂ ಸ್ಟೋರೇಜ್ ಫ್ಯಾಕ್ಟರಿಗಳಲ್ಲಿ ಶೇಖರಿಸಿಟ್ಟಿದ್ದ ಮೀನನ್ನು ಅಷ್ಟಿಷ್ಟಾಗಿಯೇ ಮಾರುಕಟ್ಟೆಗೆ ಬಿಟ್ಟು ಖಾಲಿ ಮಾಡಿದ್ರು. ಉಡುಪಿ ಹೊರತುಪಡಿಸಿ, ಬರೀ ಮಂಗಳೂರಿನಲ್ಲೇ ಮೀನು ರಫ್ತಿಗೆ ಅಂತಲೇ ಮಾಡಿರುವ 12 ರಷ್ಟು ಕೋಲ್ಡ್ ಸ್ಟೋರೇಜ್ ಫ್ಯಾಕ್ಟರಿಗಳಿವೆ. ಉಡುಪಿಯಲ್ಲೂ 10 ರಷ್ಟು ಇಂಥ ಸ್ಟೋರೇಜ್ ಘಟಕಗಳಿವೆ. ಆದರೆ ಇವೆಲ್ಲಕ್ಕೂ ಚೀನಾವೇ ದೊಡ್ಡ ಮಾರುಕಟ್ಟೆ.. ಕೊರೊನಾ ಬಿಕ್ಕಟ್ಟು ಕಳೆದು ಕೊನೆಗೂ ಮೀನುಗಾರಿಕೆ ಆಯ್ತು ಅಂದ್ಕೊಂಡ್ರೂ ಚೀನಾ ಗಡಿ ತಂಟೆ ಶುರು ಮಾಡಿರೋದು ಕೋಲ್ಡ್ ಸ್ಟೋರೇಜ್ ಮತ್ತು ಬೋಟ್ ಇರೋ ಉದ್ಯಮಿಗಳಲ್ಲಿ ಹೊಸ ತಲೆನೋವು ಶುರು ಹಚ್ಚಿದೆ. ಆರು ತಿಂಗಳ ನಷ್ಟವನ್ನು ಸರಿದೂಗಿಸೋ ಕನಸು ಕಂಡಿದ್ದ ಮಾಲಕರ ಕನಸು ಮತ್ತೆ ನುಚ್ಚುನೂರಾಗೋ ಸಾಧ್ಯತೆ ಕಂಡಿದೆ. ಈಗಾಗ್ಲೇ ಚೀನಾದ ಇಲೆಕ್ಟ್ರಾನಿಕ್ ವಹಿವಾಟಿಗೆ ಬ್ರೇಕ್ ಹಾಕಲು ಭಾರತ ಮುಂದಡಿ ಇಟ್ಟಿದೆ. ಹಾಗೆಯೇ ಭಾರತದಿಂದ ಆಹಾರ ವಸ್ತುಗಳ ಪೂರೈಕೆಗೆ ಚೀನಾ ಬ್ರೇಕ್ ಹಾಕಿದ್ರೆ ಅದ್ರ ನೇರ ಎಫೆಕ್ಟ್ ನಮ್ಮ ಮೀನು ವಹಿವಾಟಿಗೂ ತಟ್ಟಲಿದೆ.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am