ಬ್ರೇಕಿಂಗ್ ನ್ಯೂಸ್
01-07-23 02:02 pm Source: news18 ಕ್ರೀಡೆ
ಟೀಂ ಇಂಡಿಯಾದ ಪ್ರಾಯೋಜಕರಾಗಿರುವ ಬೈಜಸ್ ತನ್ನ ಒಪ್ಪಂದವನ್ನು ರದ್ದುಗೊಳಿಸಿರುವುದು ಗೊತ್ತೇ ಇದೆ. ಬಿಸಿಸಿಐ ಮತ್ತು ಬೈಜಸ್ ನಡುವಿನ ಒಪ್ಪಂದವು ಈ ವರ್ಷದ ಏಪ್ರಿಲ್ನಲ್ಲಿ ಕೊನೆಗೊಂಡಿತು. ತಂಡದ ಪ್ರಾಯೋಜಕರಿಗೆ ಬಿಸಿಸಿಐ ಬಿಡ್ಗಳನ್ನು ಆಹ್ವಾನಿಸಿದೆ ಎಂದು ತಿಳಿದಿದೆ. ಬಿಸಿಸಿಐ ಇತ್ತೀಚೆಗೆ ತಂಡದ ಪ್ರಾಯೋಜಿಕರಿಗಾಗಿ ಹುಡುಕಾಟ ನಡೆಸುತ್ತಿದೆ.
ಈ ಹಿಂದೆ ಐಪಿಎಲ್ನ ಪ್ರಮುಖ ಪ್ರಾಯೋಜಕರಾಗಿದ್ದ ಬೆಟ್ಟಿಂಗ್ ಆಪ್ ಡ್ರೀಮ್ 11 ಟೀಂ ಇಂಡಿಯಾದ ಪ್ರಾಯೋಜಕರಾಗಿ ಕಾರ್ಯನಿರ್ವಹಿಸಲಿದೆ.ಬಿಸಿಸಿಐ ಅಧಿಕೃತವಾಗಿ ಟ್ವಿಟರ್ ಮೂಲಕ ಒಪ್ಪಂದವನ್ನು ಪ್ರಕಟಿಸಿದೆ. ಈ ಬಾರಿ ಡ್ರೀಮ್ 11 ಹಿಂದೆ ಬೈಜಸ್ ಪಾವತಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಪಾವತಿಸುವ ಸಾಧ್ಯತೆಯಿದೆ. ಡ್ರೀಮ್ 11 ಟೀಂ ಇಂಡಿಯಾದ ಮುಂದಿನ ಪ್ರಾಯೋಜಕರಾಗಲಿದೆ ಎಂಬ ಸುದ್ದಿ ಬಂದಾಗ ಅಭಿಮಾನಿಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.


ಟೀಮ್ ಇಂಡಿಯಾದ ಪ್ರಾಯೋಜಕರಾಗಿ ಬೆಟ್ಟಿಂಗ್ ಆ್ಯಪ್ ಅನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಬಗ್ಗೆ ಕಾಮೆಂಟ್ಗಳು ಬರುತ್ತಿವೆ. ಮದ್ಯಪಾನ, ಧೂಮಪಾನ, ಅಶ್ಲೀಲ ಚಿತ್ರಗಳು ಮತ್ತು ಬೆಟ್ಟಿಂಗ್ಗೆ ಸಂಬಂಧಿಸಿದ ಕಂಪನಿಗಳು ಬಿಡ್ನಲ್ಲಿ ಭಾಗವಹಿಸಬಾರದಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ. ಬಿಸಿಸಿಐ Dream 11 ನಂತಹ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆಯಲು ಸಿದ್ಧವಾಗಿದೆ. ಆದರೆ ಬಿಸಿಸಿಐ ದೃಷ್ಟಿಯಲ್ಲಿ, ಡ್ರೀಮ್ 11 ಬೆಟ್ಟಿಂಗ್ ಅಪ್ಲಿಕೇಶನ್ ಅಲ್ಲ, ಇದು ಫ್ಯಾಂಟಸಿ ಸ್ಪೋರ್ಟ್ಸ್ ಲೀಗ್ ಕಂಪನಿಯಾಗಿದೆ.


ಬಿಸಿಸಿಐಗಿಂತ ದೇಶದ ಬಹುತೇಕ ಯುವಕರಿಗೆ ಡ್ರೀಮ್ ಇಲೆವೆನ್ ಬಗ್ಗೆ ಹೆಚ್ಚು ತಿಳಿದಿದೆ. 'ನಿಮಗೆ ಕ್ರಿಕೆಟ್ ಜ್ಞಾನ ಇದೆಯೇ? ಆದರೆ ‘ಮನೆಯಲ್ಲೇ ಕುಳಿತು ಲಕ್ಷ ಗಳಿಸಬಹುದು’ ಎಂಬ ಜಾಹೀರಾತಿಗೆ ಆಕರ್ಷಿತರಾಗಿ ಡ್ರೀಮ್ 11ರಂತಹ ಆ್ಯಪ್ ಗಳಲ್ಲಿ ತಂಡವನ್ನು ಆಯ್ಕೆ ಮಾಡಿಕೊಂಡು ಹಣದ ಬೆಟ್ಟಿಂಗ್ ಮೂಲಕ ಕೈ ಸುಟ್ಟುಕೊಂಡವರು ಹಲವರಿದ್ದಾರೆ. ಆದರೆ, ಹಣದ ಮಾಯಾಜಾಲದಲ್ಲಿ ಮೌಲ್ಯಗಳನ್ನು ಮರೆತಿರುವ ಬಿಸಿಸಿಐ, ಡ್ರೀಮ್ 11ಕ್ಕೆ ಟೀಂ ಇಂಡಿಯಾದ ಪ್ರಾಯೋಜಕತ್ವದ ಹಕ್ಕನ್ನು ಕಟ್ಟಲು ಸಿದ್ಧವಾಗುತ್ತಿರುವುದು ಎಷ್ಟು ಸರಿ. ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ಮಾಡುವುದು ಅಪರಾಧ. ಇಂತಹ ದಂಧೆಯಲ್ಲಿ ತೊಡಗಿರುವ ಕಂಪನಿಗೆ ಪ್ರಾಯೋಜಕತ್ವದ ಹಕ್ಕು ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಬಿಸಿಸಿಐ ಗೆ ಕೇಳುತ್ತಿದ್ದಾರೆ.
Bcci Announces Dream11 as the new team India lead sponsor.
22-01-26 10:27 pm
Bangalore Correspondent
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
22-01-26 10:16 pm
HK News Desk
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೇರಳ, ಕರ್ನಾಟಕ, ತಮ...
21-01-26 11:10 am
22-01-26 02:55 pm
Mangalore Correspondent
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮ...
21-01-26 10:55 pm
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
22-01-26 10:12 pm
Mangalore Correspondent
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm