ಬ್ರೇಕಿಂಗ್ ನ್ಯೂಸ್
12-04-21 05:37 pm Source: MYKHEL ಕ್ರೀಡೆ
ಐಪಿಎಲ್ನಲ್ಲಿ ಪಂಜಾಬ್ ಫ್ರಾಂಚೈಸಿ ಪಾಲಾದ ಬಳಿಕ ಕೆಎಲ್ ರಾಹುಲ್ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಪಂಜಾಬ್ ಪರವಾಗಿ ಆಡಿದ ಪ್ರತಿ ಆವೃತ್ತಿಯಲ್ಲೂ ರಾಹುಲ್ 500+ರನ್ಗಳಿಸಿದ ಸಾಧನೆ ಮಾಡಿದ್ದಾರೆ. ಸತತವಾಗಿ ಅತಿ ಹೆಚ್ಚು ರನ್ಗಳಿಸಿದ ಆಟಗಾರರಲ್ಲಿ ಟಾಪ್ 3 ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರಾಹುಲ್. 2018ರ ಆವೃತ್ತಿಯಲ್ಲಿ ರಾಹುಲ್ 3ನೇ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಿದ್ದರು.ಆ ಆವೃತ್ತಿಯಲ್ಲಿ ರಾಹುಲ್ 54.91ರ ಸರಾಸರಿಯಲ್ಲಿ 659 ರನ್ಗಳಿಸಿದ್ದರು. 158.41ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಆ ಆವೃತ್ತಿಯಲ್ಲಿ ರಾಹುಲ್ 6 ಅರ್ಧಶತಕ ಬಾರಿಸಿದ್ದಾರೆ.
2019ರ ಆವೃತ್ತಿಯಲ್ಲಿ ರಾಹುಲ್ 593 ರನ್ಗಳಿಸಿ ಎರಡನೇ ಟಾಪ್ ಸ್ಕೋರರ್ ಎನಿಸಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿದ್ದ ರಾಹುಲ್ 14 ಪಂದ್ಯಗಳಲ್ಲಿ 670 ರನ್ಬಾರಿಸಿದ್ದರು. ಇದು ಆವೃತ್ತಿಯೊಂದರಲ್ಲಿ ಪಂಜಾಬ್ ಕಿಂಗ್ಸ್ ಆಟಗಾರನೋರ್ವ ದಾಖಲಿಸಿದ ಅತಿ ಹೆಚ್ಚಿನ ಸ್ಕೋರ್ ಕೂಡ ಆಗಿದೆ. ಈ ಮೂಲಕ ಕಳೆದ ಐಪಿಎಲ್ನಲ್ಲಿ ರಾಹುಲ್ ಆರೆಂಜ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ದರು.
ಈ ಬಾರಿಯ ಐಪಿಎಲ್ನಲ್ಲಿ ರಾಹುಲ್ ತಲುಪುವ ಸಾಧ್ಯತೆಯಿರುವ ಮೈಲಿಗಲ್ಲುಗಳು:
ಪಂಜಾಬ್ ಕಿಂಗ್ಸ್ ತಂಡದ ಪರವಾಗಿ 2000 ರನ್ ಪೂರೈಸಲು ರಾಹುಲ್ಗೆ 78 ರನ್ಗಳ ಅವಶ್ಯಕತೆಯಿದೆ. ಶಾನ್ ಮಾರ್ಶ್ ಬಳಿಕ ಈ ಸಾಧನೆ ಮಾಡುವ ಎರಡನೇ ಆಟಗಾರನಾಗಲಿದ್ದಾರೆ ರಾಹುಲ್. 158 ರನ್ಗಳಿಸಿದರೆ ರಾಹುಲ್ 5000 ಟಿ20 ರನ್ಗಳನ್ನು ಪೂರೈಸಿದಂತಾಗುತ್ತದೆ. ಟಿ20ಯಲ್ಲಿ 200 ಸಿಕ್ಸರ್ ಗಳಿಸಲು ರಾಹುಲ್ಗೆ 8 ಸಿಕ್ಸರ್ಗಳ ಅವಶ್ಯಕತೆಯಿದೆ. 3 ಅರ್ಧ ಶತಕ ಬಾರಿಸಿದರೆ ಪಂಜಾಬ್ ಪರ ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ಆಟಗಾರ ಎನಿಸಲಿದ್ದಾರೆ ರಾಹುಲ್. ರಾಹುಲ್ 19 ಅರ್ಧ ಶತಕ ಗಳಿಸಿದ್ದು ಶಾನ್ ಮಾರ್ಶ್ 21 ಅರ್ಧ ಶತಕ ಗಳಿಸಿ ಮುಂದಿದ್ದಾರೆ. ಈ ಆವೃತ್ತಿಯಲ್ಲಿ ರಾಹುಲ್ 20 ಸಿಕ್ಸರ್ ಬಾರಿಸಿದರೆ ಪಂಜಾಬ್ ಪರವಾಗಿ ಸಿಕ್ಸರ್ಗಳ ಶತಕ ಬಾರಿಸಿದಂತಾಗುತ್ತದೆ. ರಾಹುಲ್ ಪಂಜಾಬ್ ತಂಡದ ಪರವಾಗಿ 80 ಸಿಕ್ಸರ್ ಬಾರಿಸಿದ್ದಾರೆ. ಈ ಐಪಿಎಲ್ನಲ್ಲಿ ರಾಹುಲ್ 353 ರನ್ಗಳಿಸಿದರೆ 2000 ಐಪಿಎಲ್ ರನ್ಗಳನ್ನು ಗಳಿಸಿದಂತಾಗುತ್ತದೆ
This News Article Is A Copy Of MYKHEL
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
14-07-26 01:37 pm
HK News Staffer
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
14-07-26 02:43 pm
HK News Staffer
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm