ಬ್ರೇಕಿಂಗ್ ನ್ಯೂಸ್
12-04-21 06:54 pm Source: MYKHEL ಕ್ರೀಡೆ
ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 11) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 3ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಿದ್ದವು. ರೋಚಕ ಹಂತಕ್ಕೆ ತಲುಪಿದ್ದ ಈ ಪಂದ್ಯದಲ್ಲಿ ಇಯಾನ್ ಮಾರ್ಗನ್ ನಾಯಕತ್ವದ ಕೆಕೆಆರ್ 10 ರನ್ಗಳ ಜಯ ದಾಖಲಿಸಿತ್ತು. ನಿತೀಶ್ ರಾಣಾ ಅವರ ಸ್ಫೋಟಕ ಅರ್ಧ ಶತಕದಿಂದಾಗಿ ಕೆಕೆಆರ್ ಟೂರ್ನಿಯಲ್ಲಿ ಶುಭಾರಂಭ ಕಾಣಲು ಸಾಧ್ಯವಾಗಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕರಾಗಿ ಬಂದಿದ್ದ ಎಡಗೈ ಬ್ಯಾಟ್ಸ್ಮನ್ ನಿತೀಶ್ ರಾಣಾ 56 ಎಸೆತಗಳಲ್ಲಿ 80 ರನ್ ಬಾರಿಸಿದ್ದರು. ಆದರೆ ಇನ್ನಿಂಗ್ಸ್ ಮುಗಿಸಿ ಪೆವಿಲಿಯನ್ನತ್ತ ನಡೆಯುವಾಗ ರಾಣಾ ಮೂರು ಕೈಬೆರಳುಗಳನ್ನು ತೋರಿಸಿ ಏನೋ ಸನ್ನೆ ಮಾಡಿದ್ದರು.
ರಾಣಾ ಕೈಬೆರಳು ತೋರಿಸಿದ್ಯಾಕೆ?
ಬ್ಯಾಟಿಂಗ್ ಮುಗಿಸಿ ನಿರ್ಗಮಿಸುವಾಗ ನಿತೀಶ್ ರಾಣಾ ಅವರು ಕೈ ಬೆರಳು ತೋರಿಸಿ ಸನ್ನೆ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಅನ್ನೋದನ್ನು ರಾಣಾ ಹೇಳಿದ್ದಾರೆ. ತಂಡದ ಸಹ ಆಟಗಾರ ಹರ್ಭಜನ್ ಸಿಂಗ್ ಜೊತೆ ಮಾತನಾಡಿದ ರಾಣಾ, 'ನನ್ನೆಲ್ಲಾ ಸ್ನೇಹಿತರಿಗೆ ಪಂಜಾಬ್ ಭಾಷೆಯ 'ಬ್ರೌನ್ ಮುಂಡೆ' ಸಾಂಗ್ ಇಷ್ಟ. ಅದಕ್ಕಾಗಿ ನಾನು ಈ ಸನ್ನೆ ಮಾಡಿದೆ. ನಾನು ಯಾವಾಗೆಲ್ಲ ಈ ಸನ್ನೆ ಮಾಡುತ್ತೇನೋ ಅದರರ್ಥ ನಾವೆಲ್ಲ 'ಬ್ರೌನ್ ಮುಂಡೆ' ಎಂದು,' ಎಂದಿದ್ದಾರೆ.
ಯಾರ ಸಾಂಗ್ ಇದು?
ಪಂಜಾಬಿ ಗೀತೆರಚನೆಕಾರ, ಗೀತೆ ನಿರ್ಮಾಪಕ ಎಪಿ ಧಿಲ್ಲನ್ ಎಂದು ಕರೆಯಲ್ಪಡುವ ಅಮೃತ್ಪಾಲ್ ಸಿಂಗ್ ಧಿಲ್ಲನ್ ಅವರ 'ಬ್ರೌನ್ ಮುಂಡೆ' ಸಾಂಗ್ ಹೆಚ್ಚು ಜನಪ್ರಿಯತೆ ಗಿಟ್ಟಿಸಿತ್ತು. 2020ರ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿದ್ದ ಈ ಗೀತೆ ಯೂಟ್ಯೂಬ್ನಲ್ಲಿ 164,520,508 ಸಾರಿ ವೀಕ್ಷಿಸಲ್ಪಟ್ಟಿದೆ. ಈ ಗೀತೆಯ ವಿಡಿಯೋದಲ್ಲಿ ನಟರು ಕುಣಿಯುವಾಗ ಮೂರು ಬೆರಳು ತೋರಿಸಿ ಕೈ ಸನ್ನೆ ಮಾಡುತ್ತಾರೆ. ಇದೇ ರೀತಿ ರಾಣಾ ಕೂಡ ಕೈಸನ್ನೆ ಮಾಡಿದ್ದರು.

ಕೆಕೆಆರ್ vs ಎಸ್ಆರ್ಎಚ್ ಪಂದ್ಯದ ಸ್ಕೋರ್
* ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್, ರಾಣಾ 80 (56), ರಾಹುಲ್ ತ್ರಿಪಾಠಿ 53 (29) ರನ್ನೊಂದಿಗೆ 20 ಓವರ್ಗಳಲ್ಲಿ 6 ವಿಕೆಟ್ ಕಳೆದು 187 ರನ್ ಬಾರಿಸಿತ್ತು.
* ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಮನೀಶ್ ಪಾಂಡೆ ಅಜೇಯ 61 (44), ಜಾನಿ ಬೇರ್ಸ್ಟೋವ್ 55 (40) ರನ್ನೊಂದಿಗೆ 20 ಓವರ್ಗೆ 5 ವಿಕೆಟ್ ನಷ್ಟದಲ್ಲಿ 177 ರನ್ ಬಾರಿಸಿ ಶರಣಾಯ್ತು.
* ಹೈದರಾಬಾದ್ನ ಮೊಹಮ್ಮದ್ ನಬಿ, ರಶೀದ್ ಖಾನ್, ಕೋಲ್ಕತ್ತಾದ ಪ್ರಸಿದ್ಧ್ ಕೃಷ್ಣ 2 ವಿಕೆಟ್ನೊಂದಿಗೆ ಗಮನ ಸೆಳೆದರು. ನಿತೀಶ್ ರಾಣಾ ಪಂದ್ಯಶ್ರೇಷ್ಠರೆನಿಸಿದರು.
This News Article Is A Copy Of MYKHEL
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 08:17 pm
HK News Desk
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
ಎಐಎಡಿಎಂಕೆ ತಾಳಕ್ಕೆ ಕುಣಿಯುತ್ತಿರುವ ಬಿಜೆಪಿ ; ಫೈರ್...
04-02-26 03:42 pm
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
06-02-26 03:09 pm
Mangalore Correspondent
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
ನಂತೂರಿನಿಂದ ಬೈಕಂಪಾಡಿಗೆ ಫ್ಲೈ ಓವರ್ ಪ್ರಸ್ತಾಪ ; ಮಾ...
05-02-26 11:03 pm
ಅತಿದೊಡ್ಡ ಸೈಬರ್ ನೆಟ್ವರ್ಕ್ ಪತ್ತೆಹಚ್ಚಿದ ಮಂಗಳೂರು...
05-02-26 10:01 pm
ಆಯುಷ್ ಇಲಾಖೆಯಲ್ಲಿ ಅವ್ಯವಹಾರ ; ಜಿಲ್ಲಾ ಆಯುಷ್ ಅಧಿಕ...
05-02-26 09:29 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm