ಬ್ರೇಕಿಂಗ್ ನ್ಯೂಸ್
07-08-21 05:46 pm Headline Karnataka News Network ಕ್ರೀಡೆ
ನವದೆಹಲಿ, ಆಗಸ್ಟ್ 7: ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಇಂದು ಮರೆಯಲಾರದ ದಿನ. ಇದೇ ಮೊದಲ ಬಾರಿಗೆ ಭಾರತೀಯನೊಬ್ಬ ಒಲಿಂಪಿಕ್ ಅತ್ಲೀಟ್ ವಿಭಾಗದಲ್ಲಿ ಚಿನ್ನದ ಬೇಟೆಯಾಡಿ ಇತಿಹಾಸ ಸೃಷ್ಟಿಸಿದ್ದಾನೆ. ಜಾವ್ಲಿನ್ ಥ್ರೋ ವಿಭಾಗದಲ್ಲಿ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. 87.58 ಮೀಟರ್ ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ಹೊಸ ಚರಿತ್ರೆ ಸೃಷ್ಟಿಸಿದ್ದು, ವಿಶ್ವದ ಗಮನ ಗೆದ್ದಿದ್ದಾರೆ.
ಭಾರತದ ಯಾವುದೇ ಅತ್ಲೀಟ್ ಒಲಿಂಪಿಕ್ ನಲ್ಲಿ ಈವರೆಗೆ ಪದಕ ಪಡೆದಿದ್ದೇ ಇಲ್ಲ. ಆಫ್ರಿಕನ್ ಮೂಲದವರು ಅಥವಾ ಜರ್ಮನಿ, ಚೀನಾ ಮೂಲದವರು ಮಾತ್ರ ಅತ್ಲೀಟ್ ನಲ್ಲಿ ಪ್ರಾಬಲ್ಯ ಪಡೆದಿದ್ದರು. ಅಂಥದ್ದರಲ್ಲಿ ಭಾರತದ ನೀರಜ್ ಚೋಪ್ರಾ ಜಾವ್ಲಿನ್ ಥ್ರೋ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.



ಚೋಪ್ರಾ ಮೊದಲ ಅರ್ಹತಾ ಸುತ್ತಿನಲ್ಲೇ 86.59 ಮೀಟರ್ ದೂರಕ್ಕೆ ಜಾವ್ಲಿನ್ ಎಸೆದು ಗಮನ ಸೆಳೆದಿದ್ದರು. ಅರ್ಹತಾ ಸುತ್ತಿನಲ್ಲಿ ಅತ್ಯಂತ ಹೆಚ್ಚು ದೂರಕ್ಕೆ ಎಸೆದಿದ್ದು ಈ ಬಾರಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಎರಡನೇ ಸುತ್ತಿನಲ್ಲಿ 87.58 ಮೀಟರ್ ದೂರಕ್ಕೆ ಎಸೆದು ಪದಕ ಗೆಲ್ಲುವತ್ತ ಮತ್ತಷ್ಟು ಹತ್ತಿರವಾಗಿದ್ದರು. ಕೊನೆಗೆ, ಇದೇ 87.58 ಮೀಟರ್ ಉದ್ದಕ್ಕೆ ಎಸೆದ ಸಾಧನೆಯನ್ನು ಅತಿ ಗರಿಷ್ಠವೆಂದು ಪರಿಗಣಿಸಿ ಚಿನ್ನದ ಪದಕದ ಘೋಷಣೆ ಮಾಡಲಾಗಿದೆ.
ಜೆಕ್ ರಿಪಬ್ಲಿಕ್ ದೇಶದ ವೆಡ್ಲೆಜ್ ಜೇಕಬ್ 86.67 ಮೀಟರ್ ಸಾಧನೆಯ ಮೂಲಕ ಎರಡನೇ ಸ್ಥಾನಿಯಾದರು. ಅದೇ ದೇಶದ ವೆಸ್ಲೀ ಎಂಬಾತ 85.44 ಮೀಟರ್ ದೂರದ ಸಾಧನೆಯ ಮೂಲಕ ತೃತೀಯ ಸ್ಥಾನಿಯಾಗಿದ್ದಾರೆ. ಭಾರತದ ಪಾಲಿಗೆ ಎರಡನೇ ವೈಯಕ್ತಿಕ ಸ್ವರ್ಣದ ಸಾಧನೆಯಿದು. ಈ ಹಿಂದೆ ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಸಾಧನೆ ಮಾಡಿದ್ದರು.
History has been scripted at Tokyo! What @Neeraj_chopra1 has achieved today will be remembered forever. The young Neeraj has done exceptionally well. He played with remarkable passion and showed unparalleled grit. Congratulations to him for winning the Gold. #Tokyo2020 https://t.co/2NcGgJvfMS
— Narendra Modi (@narendramodi) August 7, 2021
Javelin thrower Neeraj Chopra won a historic athletics gold medal to become India's second ever individual Olympic gold medallist after shooter Abhinav Bindra. Wrestler Bajrang Punia
15-12-25 02:23 pm
Bangalore Correspondent
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
15-12-25 08:12 pm
HK News Desk
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
15-12-25 05:40 pm
Mangalore Correspondent
Mangalore Reels, Arrest, Police: ತಲವಾರು ಹಿಡಿದ...
14-12-25 05:48 pm
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
15-12-25 10:26 pm
Mangalore Correspondent
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm