ಬ್ರೇಕಿಂಗ್ ನ್ಯೂಸ್
07-08-21 05:46 pm Headline Karnataka News Network ಕ್ರೀಡೆ
ನವದೆಹಲಿ, ಆಗಸ್ಟ್ 7: ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಇಂದು ಮರೆಯಲಾರದ ದಿನ. ಇದೇ ಮೊದಲ ಬಾರಿಗೆ ಭಾರತೀಯನೊಬ್ಬ ಒಲಿಂಪಿಕ್ ಅತ್ಲೀಟ್ ವಿಭಾಗದಲ್ಲಿ ಚಿನ್ನದ ಬೇಟೆಯಾಡಿ ಇತಿಹಾಸ ಸೃಷ್ಟಿಸಿದ್ದಾನೆ. ಜಾವ್ಲಿನ್ ಥ್ರೋ ವಿಭಾಗದಲ್ಲಿ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. 87.58 ಮೀಟರ್ ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ಹೊಸ ಚರಿತ್ರೆ ಸೃಷ್ಟಿಸಿದ್ದು, ವಿಶ್ವದ ಗಮನ ಗೆದ್ದಿದ್ದಾರೆ.
ಭಾರತದ ಯಾವುದೇ ಅತ್ಲೀಟ್ ಒಲಿಂಪಿಕ್ ನಲ್ಲಿ ಈವರೆಗೆ ಪದಕ ಪಡೆದಿದ್ದೇ ಇಲ್ಲ. ಆಫ್ರಿಕನ್ ಮೂಲದವರು ಅಥವಾ ಜರ್ಮನಿ, ಚೀನಾ ಮೂಲದವರು ಮಾತ್ರ ಅತ್ಲೀಟ್ ನಲ್ಲಿ ಪ್ರಾಬಲ್ಯ ಪಡೆದಿದ್ದರು. ಅಂಥದ್ದರಲ್ಲಿ ಭಾರತದ ನೀರಜ್ ಚೋಪ್ರಾ ಜಾವ್ಲಿನ್ ಥ್ರೋ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.



ಚೋಪ್ರಾ ಮೊದಲ ಅರ್ಹತಾ ಸುತ್ತಿನಲ್ಲೇ 86.59 ಮೀಟರ್ ದೂರಕ್ಕೆ ಜಾವ್ಲಿನ್ ಎಸೆದು ಗಮನ ಸೆಳೆದಿದ್ದರು. ಅರ್ಹತಾ ಸುತ್ತಿನಲ್ಲಿ ಅತ್ಯಂತ ಹೆಚ್ಚು ದೂರಕ್ಕೆ ಎಸೆದಿದ್ದು ಈ ಬಾರಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಎರಡನೇ ಸುತ್ತಿನಲ್ಲಿ 87.58 ಮೀಟರ್ ದೂರಕ್ಕೆ ಎಸೆದು ಪದಕ ಗೆಲ್ಲುವತ್ತ ಮತ್ತಷ್ಟು ಹತ್ತಿರವಾಗಿದ್ದರು. ಕೊನೆಗೆ, ಇದೇ 87.58 ಮೀಟರ್ ಉದ್ದಕ್ಕೆ ಎಸೆದ ಸಾಧನೆಯನ್ನು ಅತಿ ಗರಿಷ್ಠವೆಂದು ಪರಿಗಣಿಸಿ ಚಿನ್ನದ ಪದಕದ ಘೋಷಣೆ ಮಾಡಲಾಗಿದೆ.
ಜೆಕ್ ರಿಪಬ್ಲಿಕ್ ದೇಶದ ವೆಡ್ಲೆಜ್ ಜೇಕಬ್ 86.67 ಮೀಟರ್ ಸಾಧನೆಯ ಮೂಲಕ ಎರಡನೇ ಸ್ಥಾನಿಯಾದರು. ಅದೇ ದೇಶದ ವೆಸ್ಲೀ ಎಂಬಾತ 85.44 ಮೀಟರ್ ದೂರದ ಸಾಧನೆಯ ಮೂಲಕ ತೃತೀಯ ಸ್ಥಾನಿಯಾಗಿದ್ದಾರೆ. ಭಾರತದ ಪಾಲಿಗೆ ಎರಡನೇ ವೈಯಕ್ತಿಕ ಸ್ವರ್ಣದ ಸಾಧನೆಯಿದು. ಈ ಹಿಂದೆ ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಸಾಧನೆ ಮಾಡಿದ್ದರು.
History has been scripted at Tokyo! What @Neeraj_chopra1 has achieved today will be remembered forever. The young Neeraj has done exceptionally well. He played with remarkable passion and showed unparalleled grit. Congratulations to him for winning the Gold. #Tokyo2020 https://t.co/2NcGgJvfMS
— Narendra Modi (@narendramodi) August 7, 2021
Javelin thrower Neeraj Chopra won a historic athletics gold medal to become India's second ever individual Olympic gold medallist after shooter Abhinav Bindra. Wrestler Bajrang Punia
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm