ಬ್ರೇಕಿಂಗ್ ನ್ಯೂಸ್
28-09-20 05:20 pm Mangalore Correspondent ಕ್ರೈಂ
ಮಂಗಳೂರು, ಸೆಪ್ಟಂಬರ್ 28: ಲೇಡಿಸ್ ಹಾಸ್ಟೆಲ್ ನುಗ್ಗಿ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಗೈದು ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಿಂದ ಏಳು ವರ್ಷಗಳ ಶಿಕ್ಷೆ ನೀಡಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸೈದುನ್ನೀಸಾ ಈ ತೀರ್ಪು ನೀಡಿದ್ದಾರೆ. ಅಪರಾಧಿ ಎಂದು ಪರಿಗಣಿಸಲ್ಪಟ್ಟ ನಾಗೇಶ್ (30) ಗೆ ಏಳು ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಲಾಗಿದೆ.
2007 ರಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಠೆಯ ಹಾಸ್ಟೇಲ್ ಒಂದರಲ್ಲಿ ಘಟನೆ ನಡೆದಿತ್ತು. ಕೇರಳ ಮೂಲದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸಂತ್ರಸ್ತೆಯಾಗಿದ್ದಳು.
ಮುಂಜಾನೆ 4.30 ರ ಸುಮಾರಿಗೆ ಹಾಸ್ಟೆಲ್ ಹಿಂಭಾಗದ ಪೈಪ್ ಮೂಲಕ ಕೊಠಡಿಗೆ ನುಗ್ಗಿದ್ದ ಆರೋಪಿ, ವಿದ್ಯಾರ್ಥಿನಿಯ ಅತ್ಯಾಚಾರಗೈದು ಕೊಲೆ ಬೆದರಿಕೆಯೊಡ್ಡಿ 5 ಲಕ್ಷ ನಗದು ನೀಡುವಂತೆ ಒತ್ತಾಯಿಸಿದ್ದ. ಬಳಿಕ ವಿದ್ಯಾರ್ಥಿನಿಯ ಪರ್ಸ್ ನಿಂದ ಮೂರು ಸಾವಿರ ನಗದು, ಎಟಿಎಂ ಕಾರ್ಡ್ ಸಹಿತ ಪಿನ್ ನಂಬರ್ ಪಡೆದು ಮತ್ತೊಂದು ಕೊಠಡಿಗೆ ನುಗ್ಗಿ ಇನ್ನೊಬ್ಬಳು ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿ ಪರಾರಿಯಾಗಿದ್ದ.
ಕೃತ್ಯದ ಬಳಿಕ ಆರೋಪಿ, ನಗರದ ಕಂಕನಾಡಿ ಎಟಿಎಂ ನಲ್ಲಿ ವಿದ್ಯಾರ್ಥಿನಿಯ ಕಾರ್ಡ್ ನಿಂದ ಹಣ ವಿತ್ ಡ್ರಾ ಮಾಡಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು. ಬೆರಳಚ್ಚು ಮತ್ತು ಎಟಿಎಂ ಸಿಸಿ ಟಿವಿ ಆಧರಿಸಿ ಅಪರಾಧಿಯ ಪತ್ತೆ ಮಾಡಿದ ಪೊಲೀಸರು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯ ಕೃತ್ಯ ಸಾಬೀತಾಗಿದ್ದರಿಂದ ಶಿಕ್ಷೆ ಘೋಷಣೆ ಮಾಡಿದೆ.
05-02-23 02:56 pm
HK News Desk
ಪ್ರಣಾಳಿಕೆ ಸಮಿತಿಗೆ ರಾಜಿನಾಮೆ ನೀಡಿಲ್ಲ, ನಮ್ಮಲ್ಲಿ...
04-02-23 10:17 pm
ಅಮಿತ್ ಷಾ ಸಿಡಿ ಎಕ್ಸ್ಪರ್ಟ್ ಇದ್ದಾರೆ, ಗುಜರಾತ್ ಉ...
04-02-23 05:51 pm
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಖ್ಯಾತ ಗಾಯಕಿ ವಾಣಿ...
04-02-23 05:16 pm
ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್...
04-02-23 02:23 pm
06-02-23 04:04 pm
HK News Desk
ಬಾಂಗ್ಲಾದೇಶದಲ್ಲಿ 14 ಹಿಂದು ದೇವಾಲಯಗಳ ಧ್ವಂಸ; ರಾತ್...
06-02-23 10:53 am
ನಸುಕಿನಲ್ಲಿ ಭೀಕರ ಭೂಕಂಪ ; ತತ್ತರಿಸಿದ ಟರ್ಕಿ, ಸಿರಿ...
06-02-23 10:44 am
ಮರಣದಂಡನೆಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್...
05-02-23 02:16 pm
ಫೆ.6ರಂದು ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಹೆಲಿಕಾಪ...
04-02-23 02:15 pm
06-02-23 05:39 pm
Mangalore Correspondent
ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ನಷ್ಟವೇ ಹೊರತು ಲ...
05-02-23 09:39 pm
ಜನಾರ್ದನ ಪೂಜಾರಿ ಮೂಲಕ ಟಿಕೆಟಿಗಾಗಿ ಒತ್ತಡ ತಂತ್ರ ;...
05-02-23 05:33 pm
ಟಯರ್ ಬ್ಲಾಸ್ಟ್ ; ನಿಯಂತ್ರಣ ತಪ್ಪಿದ ಮೀನಿನ ಟೆಂಪೋ ಕ...
05-02-23 12:37 pm
ಕರಾಟೆ ಕ್ಲಾಸಿಗೆ ಬಂದಿದ್ದ ಬಾಲಕಿಗೆ ಕಿರುಕುಳ ; ಆರೋಪ...
04-02-23 10:24 pm
06-02-23 03:20 pm
Mangalore Correspondent
ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯ ಬರ್ಬರ ಹತ್...
05-02-23 09:05 pm
ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ದೋಖಾ ; ಭಾರೀ ಲಾಭ ತೋರ...
05-02-23 05:26 pm
ಧೂಳೆಬ್ಬಿಸಿ ಹೋಗಬೇಡ ಎಂದು ಹೇಳಿದ್ದಕ್ಕೆ ಟಿಪ್ಪರ್ ಹಾ...
03-02-23 11:38 pm
ಪದ್ಮಾ ರಾಯಲ್ ಚಾಲೆಂಜ್ ಸ್ಕೀಮ್ ಹೆಸರಲ್ಲಿ ನೂರಾರು ಮಂ...
03-02-23 08:42 pm