ಅರಸಿನಮಕ್ಕಿ ; ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಗುಂಡು ಹಾರಿಸಿ ಕೊಂದ ಕಿರಾತಕರು !

07-09-21 04:35 pm       Mangaluru Correspondent   ಕ್ರೈಂ

ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡು ಹಾರಿಸಿ ಹತ್ಯೆಗೈದ ಘಟನೆ ಅರಸಿನಮಕ್ಕಿ ಬಳಿಯ ಹೊಸ್ತೋಟ ಎಂಬಲ್ಲಿ ನಡೆದಿದೆ.

Photo credits : Representational

ಬೆಳ್ತಂಗಡಿ, ಸೆ.7 : ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡು ಹಾರಿಸಿ ಹತ್ಯೆಗೈದ ಘಟನೆ ಅರಸಿನಮಕ್ಕಿ ಬಳಿಯ ಹೊಸ್ತೋಟ ಎಂಬಲ್ಲಿ ನಡೆದಿದೆ.

ಅರೇಕಲ್ ಮಹದೇವ ಭಟ್ ಎಂಬವರ ಹಾಲು ಕರೆಯುವ ಎಮ್ಮೆಯನ್ನು ಮನೆಯ ಪರಿಸರದಲ್ಲಿ ಮೇಯಲು ಬಿಟ್ಟಿದ್ದರು. ಎಮ್ಮೆ ರಾತ್ರಿಯಾದರೂ ಮನೆಗೆ ಬರದೇ ಇದ್ದುದರಿಂದ ಮನೆಯವರು ಹುಡುಕಲು ಆರಂಭಿಸಿದ್ದರು. ಹುಡುಕಾಟದ ನಂತರ ಅರಸಿನಮಕ್ಕಿ ಫಲಸ್ತಡ್ಕ ಬಳಿಯ ಕಾಡು ಪ್ರದೇಶದಲ್ಲಿ ಎಮ್ಮೆಯ ಮೃತದೇಹ ಪತ್ತೆಯಾಗಿದೆ.

ಮನೆಯ ದಾರಿ ತಪ್ಪಿ ಅಲೆದಾಡುತ್ತಿದ್ದ ಎಮ್ಮೆಯನ್ನು ಕಾಡೆಮ್ಮೆ ಎಂದು ಭಾವಿಸಿ ಬೇಟೆಗಾರರು ಗುಂಡು ಹಾರಿಸಿರಬಹುದು ಎಂದು ಶಂಕಿಸಲಾಗಿದೆ. ಇದಲ್ಲದೆ, ಎಮ್ಮೆಯನ್ನು ಮೇಯಲು ಬಿಡಬೇಡಿ. ಇದು ನಮ್ಮ ಬೆಳೆಗೆ ಹಾನಿ ಮಾಡುತ್ತಿದೆ. ಇನ್ನು ಬಿಟ್ಟರೆ ಇದನ್ನು ಗುಂಡು ಹಾರಿಸಿ ಕೊಲ್ಲಬೇಕಾಗುತ್ತದೆ ಎಂದು ಕೆಲವು ಸ್ಥಳೀಯರು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. 

ಇತ್ತೀಚೆಗೆ ಮಂಗಳೂರಿನ ಉಳ್ಳಾಲದಲ್ಲಿ ಬೀಡಾಡಿ ಕೋಣವನ್ನು ತೋಟಕ್ಕೆ ಬಂದ ಕಾರಣಕ್ಕೆ ಗುಂಡು ಹಾರಿಸಿ ಕೊಲ್ಲಲಾಗಿತ್ತು.‌ ಈ ಘಟನೆ ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೀಡಾಗಿ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ, ತೋಟದ ಮಾಲೀಕ ಸೇರಿ ಏಳು ಮಂದಿಯನ್ನು ಬಂಧಿಸಿದ್ದರು. ‌


Buffalo killed by Miscreants in Belthangady which was in the field. This is the second incident being reported after a same incident took place in Ullal in Mangalore few weeks ago. Eight we're arrested in this case.