ಬ್ರೇಕಿಂಗ್ ನ್ಯೂಸ್
12-09-21 12:59 pm Mangaluru Correspondent ಕ್ರೈಂ
ಮಂಗಳೂರು, ಸೆ.12: ಹಳೇ ಸೇಡು ತೀರಿಸಿಕೊಂಡು ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದ ಯುವಕ ಮತ್ತು ಆತನ ಜೊತೆ ಪರಾರಿಯಾಗಿದ್ದ ಯುವತಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾಲ್ ಬಾಗ್ ನಲ್ಲಿ ತಂದೆ, ತಾಯಿ ಜೊತೆಗಿದ್ದು ಮಂಗಳೂರು ಯುನಿವರ್ಸಿಟಿಯಲ್ಲಿ ಎಂಎಸ್ಸಿ ಕಲಿಯುತ್ತಿದ್ದ ಹುಡುಗಿ ರೇಷ್ಮಾ ಸೆ.23 ರಂದು ನಾಪತ್ತೆಯಾಗಿದ್ದಳು. ಆನಂತರ, ಆಕೆ ತನ್ನ ತಾಯಿ ಕಡೆಯ ಸಂಬಂಧಿಕನೇ ಆಗಿದ್ದ ಅಕ್ಬರ್ ಆಲಿ ಎಂಬವನ ಜೊತೆ ತೆರಳಿದ್ದು ತಿಳಿದುಬಂದಿತ್ತು. ಆದರೆ, ಅದಕ್ಕೂ ಮೊದಲೇ ಹೆತ್ತವರು ನಾಪತ್ತೆ ಜೊತೆಗೆ ಚಿನ್ನದ ಸರ, ಉಂಗುರ, 90 ಸಾವಿರ ನಗದನ್ನು ಹೊತ್ತೊಯ್ದಿದ್ದಾಗಿ ದೂರು ದಾಖಲಿಸಿದ್ದರು. ಎರಡು ದಿನದ ಹಿಂದಷ್ಟೇ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಆಗಿದ್ದು ಎರಡು ದಿನದಲ್ಲೇ ನಾಪತ್ತೆಯಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಕೇಸು ದಾಖಲಿಸಿ, ಹುಡುಕಾಟ ನಡೆಸಿದ್ದರು. ಆನಂತರ, ಹುಡುಗಿಯನ್ನು ತಾಯಿಯ ಅಣ್ಣ ಮತ್ತು ಆತನ ಸಂಬಂಧಿಕರೇ ಸೇರಿ ಹಳೇ ಸೇಡು ತೀರಿಸಿಕೊಳ್ಳಲು ಈ ರೀತಿ ಕಿಡ್ನಾಪ್ ಮಾಡಿದ್ದರು. ಆಕೆಯನ್ನು ಮನವೊಲಿಸಿ, ಸೋದರ ಸಂಬಂಧಿಯಾಗಿದ್ದ ಅಕ್ಬರ್ ಆಲಿ ಎಂಬಾತನ ಜೊತೆಗೆ ಮದುವೆ ಮಾಡಲು ಮುಂದಾಗಿದ್ದು ತಿಳಿದುಬಂದಿತ್ತು. ಅಲ್ಲದೆ, ಹುಡುಗಿ ರೇಷ್ಮಾ ಕೂಡ ತಾನು ಮೇಜರ್ ಆಗಿದ್ದು ಯಾರ ಜೊತೆಗೆ ಮದುವೆಯಾಗಬೇಕೆಂದು ನಾನೇ ನಿರ್ಧರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರಿಂದ ಹೆತ್ತವರು ಕೂಡ ಅಸಹಾಯಕರಾಗಿದ್ದರು. ಗದಗ ಮೂಲದವರೇ ಆಗಿದ್ದರೂ ತಾಯಿ ಮೂಲತಃ ಮುಸ್ಲಿಂ ಆಗಿದ್ದು ಹಿಂದು ವ್ಯಕ್ತಿಯನ್ನು ಮದುವೆಯಾಗಿ ಮಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯಾಗಿ 22 ವರ್ಷಗಳ ನಂತರ ಹಳೆಯ ದ್ವೇಷವನ್ನು ಸೋದರ ಸಂಬಂಧಿಗಳು ಸೇರಿ ಆಕೆಯ ಮಗಳನ್ನು ಮತ್ತೆ ತಮ್ಮದೇ ಹುಡುಗನಿಗೆ ಮದುವೆ ಮಾಡುವ ಮೂಲಕ ತೀರಿಸಿಕೊಂಡಿದ್ದರು.
ಆದರೆ, ಹುಡುಗಿ ಹೆತ್ತವರು ಅಕ್ಬರ್ ಆಲಿ ಬಗ್ಗೆ ಸಂಶಯಿಸಿದ್ದಲ್ಲದೆ, ನಿಶ್ಚಿತಾರ್ಥ ವೇಳೆ ಕೊಟ್ಟಿದ್ದ ಚಿನ್ನಾಭರಣ ಮತ್ತು ಮಗಳ ಖಾತೆಯಲ್ಲಿಟ್ಟಿದ್ದ ಇನ್ಶೂರೆನ್ಸ್ ಹಣವನ್ನು ತೆಗೆದುಕೊಂಡು ಹೋಗಿದ್ದಾಗಿ ದೂರು ನೀಡಿದ್ದರಿಂದ ಕಳ್ಳತನದ ಕೇಸು ದಾಖಲಾಗಿತ್ತು. ಕಳವು ಪ್ರಕರಣದಲ್ಲಿ ಪೊಲೀಸರು ಇದೀಗ ಅಕ್ಬರ್ ಆಲಿ ಮತ್ತು ರೇಷ್ಮಾಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ, ಮಂಗಳೂರಿಗೆ ಕರೆತಂದಿದ್ದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ನೀಡಿ
The girl who went missing from Ballalbagh in the city and was found married to a boy from another community recently is in custody of the police along with her husband. Newly married Reshma and her husband Akram are in Barke police custody on the accusation of theft.
23-09-25 07:26 pm
Bangalore Correspondent
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
ಪಂಚಮಸಾಲಿ ಲಿಂಗಾಯತರಲ್ಲಿ ಮತ್ತೆ ಒಡಕು ; ಲಿಂಗಾಯತ ಪೀ...
21-09-25 10:23 pm
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
23-09-25 11:01 pm
Mangalore Correspondent
ತುಳು ಸಂಸ್ಕೃತಿ ಬಗ್ಗೆ ಮತ್ತಷ್ಟು ಸಂಶೋಧನೆ ಆಗಬೇಕಾಗಿ...
23-09-25 06:58 pm
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡೀಪ...
23-09-25 05:49 pm
ದಸರಾ ನಂಬಿಕೆ, ಒಗ್ಗಟ್ಟಿನ ಪ್ರತೀಕ ; ಎನ್ಎಂಪಿಎ ಅಧ್ಯ...
22-09-25 10:08 pm
ಜಿಎಸ್ಟಿ 2.0 ಜನಸಾಮಾನ್ಯರ ಹಿತದೃಷ್ಟಿಯಿಂದ ತೆರಿಗೆ ಸ...
22-09-25 04:09 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am