ಬ್ರೇಕಿಂಗ್ ನ್ಯೂಸ್
12-09-21 12:59 pm Mangaluru Correspondent ಕ್ರೈಂ
ಮಂಗಳೂರು, ಸೆ.12: ಹಳೇ ಸೇಡು ತೀರಿಸಿಕೊಂಡು ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದ ಯುವಕ ಮತ್ತು ಆತನ ಜೊತೆ ಪರಾರಿಯಾಗಿದ್ದ ಯುವತಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾಲ್ ಬಾಗ್ ನಲ್ಲಿ ತಂದೆ, ತಾಯಿ ಜೊತೆಗಿದ್ದು ಮಂಗಳೂರು ಯುನಿವರ್ಸಿಟಿಯಲ್ಲಿ ಎಂಎಸ್ಸಿ ಕಲಿಯುತ್ತಿದ್ದ ಹುಡುಗಿ ರೇಷ್ಮಾ ಸೆ.23 ರಂದು ನಾಪತ್ತೆಯಾಗಿದ್ದಳು. ಆನಂತರ, ಆಕೆ ತನ್ನ ತಾಯಿ ಕಡೆಯ ಸಂಬಂಧಿಕನೇ ಆಗಿದ್ದ ಅಕ್ಬರ್ ಆಲಿ ಎಂಬವನ ಜೊತೆ ತೆರಳಿದ್ದು ತಿಳಿದುಬಂದಿತ್ತು. ಆದರೆ, ಅದಕ್ಕೂ ಮೊದಲೇ ಹೆತ್ತವರು ನಾಪತ್ತೆ ಜೊತೆಗೆ ಚಿನ್ನದ ಸರ, ಉಂಗುರ, 90 ಸಾವಿರ ನಗದನ್ನು ಹೊತ್ತೊಯ್ದಿದ್ದಾಗಿ ದೂರು ದಾಖಲಿಸಿದ್ದರು. ಎರಡು ದಿನದ ಹಿಂದಷ್ಟೇ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಆಗಿದ್ದು ಎರಡು ದಿನದಲ್ಲೇ ನಾಪತ್ತೆಯಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಕೇಸು ದಾಖಲಿಸಿ, ಹುಡುಕಾಟ ನಡೆಸಿದ್ದರು. ಆನಂತರ, ಹುಡುಗಿಯನ್ನು ತಾಯಿಯ ಅಣ್ಣ ಮತ್ತು ಆತನ ಸಂಬಂಧಿಕರೇ ಸೇರಿ ಹಳೇ ಸೇಡು ತೀರಿಸಿಕೊಳ್ಳಲು ಈ ರೀತಿ ಕಿಡ್ನಾಪ್ ಮಾಡಿದ್ದರು. ಆಕೆಯನ್ನು ಮನವೊಲಿಸಿ, ಸೋದರ ಸಂಬಂಧಿಯಾಗಿದ್ದ ಅಕ್ಬರ್ ಆಲಿ ಎಂಬಾತನ ಜೊತೆಗೆ ಮದುವೆ ಮಾಡಲು ಮುಂದಾಗಿದ್ದು ತಿಳಿದುಬಂದಿತ್ತು. ಅಲ್ಲದೆ, ಹುಡುಗಿ ರೇಷ್ಮಾ ಕೂಡ ತಾನು ಮೇಜರ್ ಆಗಿದ್ದು ಯಾರ ಜೊತೆಗೆ ಮದುವೆಯಾಗಬೇಕೆಂದು ನಾನೇ ನಿರ್ಧರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರಿಂದ ಹೆತ್ತವರು ಕೂಡ ಅಸಹಾಯಕರಾಗಿದ್ದರು. ಗದಗ ಮೂಲದವರೇ ಆಗಿದ್ದರೂ ತಾಯಿ ಮೂಲತಃ ಮುಸ್ಲಿಂ ಆಗಿದ್ದು ಹಿಂದು ವ್ಯಕ್ತಿಯನ್ನು ಮದುವೆಯಾಗಿ ಮಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯಾಗಿ 22 ವರ್ಷಗಳ ನಂತರ ಹಳೆಯ ದ್ವೇಷವನ್ನು ಸೋದರ ಸಂಬಂಧಿಗಳು ಸೇರಿ ಆಕೆಯ ಮಗಳನ್ನು ಮತ್ತೆ ತಮ್ಮದೇ ಹುಡುಗನಿಗೆ ಮದುವೆ ಮಾಡುವ ಮೂಲಕ ತೀರಿಸಿಕೊಂಡಿದ್ದರು.
ಆದರೆ, ಹುಡುಗಿ ಹೆತ್ತವರು ಅಕ್ಬರ್ ಆಲಿ ಬಗ್ಗೆ ಸಂಶಯಿಸಿದ್ದಲ್ಲದೆ, ನಿಶ್ಚಿತಾರ್ಥ ವೇಳೆ ಕೊಟ್ಟಿದ್ದ ಚಿನ್ನಾಭರಣ ಮತ್ತು ಮಗಳ ಖಾತೆಯಲ್ಲಿಟ್ಟಿದ್ದ ಇನ್ಶೂರೆನ್ಸ್ ಹಣವನ್ನು ತೆಗೆದುಕೊಂಡು ಹೋಗಿದ್ದಾಗಿ ದೂರು ನೀಡಿದ್ದರಿಂದ ಕಳ್ಳತನದ ಕೇಸು ದಾಖಲಾಗಿತ್ತು. ಕಳವು ಪ್ರಕರಣದಲ್ಲಿ ಪೊಲೀಸರು ಇದೀಗ ಅಕ್ಬರ್ ಆಲಿ ಮತ್ತು ರೇಷ್ಮಾಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ, ಮಂಗಳೂರಿಗೆ ಕರೆತಂದಿದ್ದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ನೀಡಿ
The girl who went missing from Ballalbagh in the city and was found married to a boy from another community recently is in custody of the police along with her husband. Newly married Reshma and her husband Akram are in Barke police custody on the accusation of theft.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 12:31 pm
Bengaluru staffer
MLA Vedavyas Kamath, Mangalore: ಶಾಸಕ ವೇದವ್ಯಾಸ...
07-02-26 11:47 am
ಅಕ್ರಮ ಸಂಬಂಧವೇ ರಕ್ತಪಾತಕ್ಕೆ ಕಾರಣ.. ನನ್ನ ಹತ್ಯೆಗೆ...
06-02-26 06:36 pm
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm