ಬ್ರೇಕಿಂಗ್ ನ್ಯೂಸ್
02-02-23 04:52 pm HK News Desk ದೇಶ - ವಿದೇಶ
ಕೇರಳ, ಫೆ.2: ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಗರ್ಭಿಣಿ ಸೇರಿ ಇಬ್ಬರು ಸಜೀವ ದಹನವಾಗಿರುವ ಘಟನೆ ಕಣ್ಣೂರಿನಲ್ಲಿ ಗುರುವಾರ ನಡೆದಿದೆ.
ಕಾರಿನಲ್ಲಿದ್ದ 6 ಜನರ ಪೈಕಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡೋರ್ ಜಾಮ್ ಆಗಿ ಮುಂದೆ ಇದ್ದವರು ಹೊರಬರಲಾರದೇ ಸಾವನ್ನಪ್ಪಿದ್ದಾರೆ.
ಕಣ್ಣೂರು ಕುಟ್ಯಾಟೂರ್ ಕಾರರಂಬ್ ನಿವಾಸಿಗಳಾದ ಪ್ರಜಿತ್ ಮತ್ತು ಅವರ ಪತ್ನಿ ರಿಷಾ ಮೃತಪಟ್ಟವರು. ಗರ್ಭಿಣಿಯಾದ ಪತ್ನಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ನಡುವೆ ಈ ಘಟನೆಯು ಕಣ್ಣೂರು ನಗರದ ಜಿಲ್ಲಾ ಆಸ್ಪತ್ರೆ ಬಳಿ ನಡೆದಿದೆ. ಕಾರಿನಲ್ಲಿ ಆರು ಮಂದಿ ಇದ್ದರು. ಕಾರು ಚಲಾಯಿಸುತ್ತಿದ್ದ ಗರ್ಭಿಣಿ ಹಾಗೂ ಆಕೆಯ ಪತಿ ಮುಂದಿನ ಸೀಟಿನಲ್ಲಿ ಹಾಗೂ ನಾಲ್ವರು ಹಿಂದಿನ ಸೀಟಿನಲ್ಲಿದ್ದರು.
ಬೆಂಕಿ ಕಾಣಿಸಿಕೊಂಡಾಗ ಹಿಂದಿನ ಬಾಗಿಲು ತೆಗೆದ ಬಳಿಕ ಮುಂದಿನ ಬಾಗಿಲಿನಿಂದ ಇಳಿಯುವ ಮೊದಲೇ ಬೆಂಕಿ ಆವರಿಸಿಕೊಂಡು ಸಿಲುಕಿದ್ದರು, ಇದರಿಂದ ಇಬ್ಬರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಾಹನ ಚಲಾಯಿಸುತ್ತಿದ್ದ ಪತಿಯೊಂದಿಗೆ ಪತ್ನಿ ಮುಂಭಾಗದಲ್ಲಿದ್ದರು. ಹಿಂದೆ ಒಂದು ಮಗು ಸೇರಿ ನಾಲ್ವರು ಇದ್ದರು. ಮತ್ತೊಂದು ವಾಹನದಲ್ಲಿ ಬಂದವರಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಡೋರ್ ಜಾಮ್ ಆಗಿದ್ದರಿಂದ ವಾಹನದಲ್ಲಿದ್ದವರು ಹೊರಬರಲು ಸಾಧ್ಯವಾಗಲಿಲ್ಲ.
ಬೆಂಕಿ ಹರಡುತ್ತಿದ್ದಂತೆ ಚಾಲಕ ಪ್ರಜಿತ್ ಹಿಂಬಾಗಿಲನ್ನು ತೆರೆದಿದ್ದಾನೆ. ಹಿಂಬದಿ ಸೀಟಿನಲ್ಲಿದ್ದ ಮಗು ಸೇರಿ ನಾಲ್ವರು ಪಾರಾಗಿದ್ದಾರೆ. ಆದರೆ ಮುಂಬಾಗಿಲು ತೆರೆಯಲಾಗಲಿಲ್ಲ. ಅಷ್ಟರೊಳಗೆ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ಬದುಕುಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಅಗ್ನಿಶಾಮಕ ಠಾಣೆ ಇದ್ದರೂ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಷ್ಟು ವೇಗದಲ್ಲಿ ಕಾರಿಗೆ ಬೆಂಕಿ ಆವರಿಸಿಕೊಂಡಿತ್ತು.
In a tragic incident two people, including a pregnant woman, were burned to death when the car in which they were travelling suddenly caught fire in Kannur on Thursday morning. The deceased have been identified as Prajith (32) and his wife Reesha (26), both natives of Karam in Kuttiattoor.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm