ದಾವಣಗೆರೆ ; ಶ್ರೀ ರಾಮನ ಕಟೌಟ್ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ, ಜೈ ಶ್ರೀ ರಾಮ ಎಂದು ಘೋಷಣೆ ಕೂಗಿ ಸಂಭ್ರಮ 

22-01-24 05:10 pm       HK News Desk   ಕರ್ನಾಟಕ

ಬೆಣ್ಣೆನಗರಿಯಲ್ಲಿ  ಶ್ರೀ ರಾಮನ ಕಟೌಟ್ ಮುಂದೆಯೇ ನವ ಜೋಡಿಗಳು ದಾಂಪತ್ಯದ ಜೀವನಕ್ಕೆ ಕಾಲಿರಿಸಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ವಿಶೇಷ ದಿನವೇ ದಾಂಪತ್ಯಕ್ಕೆ ಜೋಡಿ ಕಾಲಿರಿಸಿರುವುದು ಕುಟುಂಬದ ಸಂತಸಕ್ಕೆ ಕಾರಣವಾಗಿದೆ. ‌

ದಾವಣಗೆರೆ, ಜ.22: ಬೆಣ್ಣೆನಗರಿಯಲ್ಲಿ  ಶ್ರೀ ರಾಮನ ಕಟೌಟ್ ಮುಂದೆಯೇ ನವ ಜೋಡಿಗಳು ದಾಂಪತ್ಯದ ಜೀವನಕ್ಕೆ ಕಾಲಿರಿಸಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ವಿಶೇಷ ದಿನವೇ ದಾಂಪತ್ಯಕ್ಕೆ ಜೋಡಿ ಕಾಲಿರಿಸಿರುವುದು ಕುಟುಂಬದ ಸಂತಸಕ್ಕೆ ಕಾರಣವಾಗಿದೆ. ‌ಮದುವೆಯಾದ ನವ ದಂಪತಿ ಇಬ್ಬರು ಮುಹೂರ್ತ ಬಳಿಕ ಶ್ರೀ ರಾಮನ ಆಶೀರ್ವಾದ ಪಡೆದರು.

ದಾವಣಗೆರೆ ನಗರದಲ್ಲಿರುವ ಬಾಪೂಜಿ ಕಲ್ಯಾಣ ಮಂಟಪದಲ್ಲಿ ಈ ವಿಶೇಷ ಮದುವೆಯಾಗಿದ್ದು, ಮದುವೆ ಮನೆಯಲ್ಲೂ ರಾಮ ಮಂದಿರ ಉದ್ಘಾಟನೆ ಸಂಭ್ರಮ ಕಳೆಗಟ್ಟಿತ್ತು.‌ ರಾಮ ಮಂದಿರ ಉದ್ಘಾಟನೆ ದಿನವೇ ಮದುವೆ ಇರುವುದಕ್ಕೆ ನವ ಜೋಡಿಗಳ ಸಂತಸಕ್ಕೆ ಕಾರಣವಾಗಿದೆ‌. ಮದುವೆ ಮಂಟಪದಲ್ಲಿ ಶ್ರೀರಾಮನ ಕಟೌಟ್ ಇರಿಸಿ ಮದುವೆ ಆಗಿರುವುದು ವಿಶೇಷ. ದಾವಣಗೆರೆಯ ರೋಹಿತ್, ಅರ್ಪಿತಾ ವಿವಾಹವಾದ ನವ ದಂಪತಿಯಾಗಿದ್ದಾರೆ.

ಮದುವೆ ಆದ ಬಳಿಕ ಅದೇ ಶ್ರೀ ರಾಮನ ಕಟೌಟ್ ಇರಿಸಿ ಪುಷ್ಪ ನಮನ ಸಲ್ಲಿಸಿದರು.‌ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಶುಭದಿನದಂದೇ ವೈವಾಹಿಕ ಜೀವನಕ್ಕೆ ಕಾಲಿರಿಸಿರುವುದು ನಮ್ಮ ಸೌಭಾಗ್ಯವಾಗಿದೆ ಎಂದ ನವ ದಂಪತಿ ಅಭಿಪ್ರಾಯಪಟ್ಟಿದ್ದಾರೆ‌. ಬಳಿಕ ಜೈ ಶ್ರೀ ರಾಮ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

The newly weds tied the knot in front of a cutout of Lord Rama in Davanagere. The couple got married on the special day of the inauguration of the Ram Temple.