ರಾಜ್ಯಸಭೆ ಮೂರು ಸ್ಥಾನಗಳಿಗೆ ರಾಜ್ಯ ಕಾಂಗ್ರೆಸಿನಿಂದ ಮೂವರಿಗೆ ಟಿಕೆಟ್, ಇಬ್ಬರು ಹಾಲಿಗಳಿಗೆ ಮತ್ತೆ ಅವಕಾಶ, ಆಕಾಂಕ್ಷಿಗಳಿಗೆ ಶಾಕ್, ಇನ್ನೊಂದು ಸ್ಥಾನ ಎಐಸಿಸಿಗೆ 

14-02-24 08:42 pm       Bangalore Correspondent   ಕರ್ನಾಟಕ

ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಸ್ಪರ್ಧಿಸುವ ಕಾಂಗ್ರೆಸ್‌  ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದಿಂದ ಹಾಲಿ ರಾಜ್ಯಸಭಾ ಸದಸ್ಯರಾದ ನಾಸೀರ್‌ ಹುಸೇನ್‌ ಹಾಗೂ ಬಿಸಿ ಚಂದ್ರಶೇಖರ್‌ಗೆ ಕಾಂಗ್ರೆಸ್‌ ಮತ್ತೊಮ್ಮೆ ಅವಕಾಶ ನೀಡಿದೆ. ಇದರ ಜೊತೆಗೆ, ಎಐಸಿಸಿ ಖಜಾಂಚಿ ಅಜಯ್ ಮಾಕೆನ್ ಅವರಿಗೂ ಕರ್ನಾಟಕದಿಂದ ಆಯ್ಕೆಗೆ ಅವಕಾಶ ನೀಡಲಾಗಿದೆ. 

ಬೆಂಗಳೂರು, ಫೆ.14: ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಸ್ಪರ್ಧಿಸುವ ಕಾಂಗ್ರೆಸ್‌  ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದಿಂದ ಹಾಲಿ ರಾಜ್ಯಸಭಾ ಸದಸ್ಯರಾದ ನಾಸೀರ್‌ ಹುಸೇನ್‌ ಹಾಗೂ ಬಿಸಿ ಚಂದ್ರಶೇಖರ್‌ಗೆ ಕಾಂಗ್ರೆಸ್‌ ಮತ್ತೊಮ್ಮೆ ಅವಕಾಶ ನೀಡಿದೆ. ಇದರ ಜೊತೆಗೆ, ಎಐಸಿಸಿ ಖಜಾಂಚಿ ಅಜಯ್ ಮಾಕೆನ್ ಅವರಿಗೂ ಕರ್ನಾಟಕದಿಂದ ಆಯ್ಕೆಗೆ ಅವಕಾಶ ನೀಡಲಾಗಿದೆ. 

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿಯಿರುವಂತೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದೆ.‌ ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ್ ರಾಜನ್‌ ಹಾಗೂ ಕಾಂಗ್ರೆಸ್‌ ನಾಯಕ ಬಿ.ಎಲ್‌ ಶಂಕರ್‌ ಅವರ ಹೆಸರು ರಾಜ್ಯಸಭಾ ಟಿಕೆಟ್‌ಗೆ ಕೇಳಿಬಂದಿತ್ತು. ಆದರೆ, ಕಾಂಗ್ರೆಸ್‌ ಹಾಲಿ ರಾಜ್ಯಸಭಾ ಸದಸ್ಯರಿಗೇ ಮತ್ತೆ ಮಣೆಹಾಕಿದೆ. ಅಭಿಷೇಕ್‌ ಮನು ಸಿಂಘ್ವಿ ಅವರಿಗೆ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಟಿಕೆಟ್‌ ನೀಡಲಾಗಿದೆ. 

Rajya Sabha Elections: Renuka Chowdhury Gets A Nomination! | Rajya Sabha  Elections: Renuka Chowdhury Gets A Nomination!

ಕರ್ನಾಟಕದ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ವಿಧಾನಸಭೆಯ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ ನಿರಾಯಾಸವಾಗಿ ಮೂರು ಸ್ಥಾನಗಳನ್ನು ಗೆಲ್ಲಲಿದೆ. ಒಂದು ಸ್ಥಾನ ಬಿಜೆಪಿ ಪಾಲಾಗಲಿದೆ. ಈ ಹಿನ್ನೆಲೆ ಕಾಂಗ್ರೆಸ್‌ ಕರ್ನಾಟಕದಿಂದ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತೆಲಂಗಾಣದಲ್ಲಿ ರೇಣುಕಾ ಚೌಧರಿ, ಅನಿಲ್‌ಕುಮಾರ್‌ ಯಾದವ್‌ ಅವರಿಗೆ ಟಿಕೆಟ್‌ ನೀಡಿದ್ದರೆ, ಮಧ್ಯಪ್ರದೇಶದಲ್ಲಿ ಅಶೋಕ್‌ ಸಿಂಗ್‌ ಅವರಿಗೆ ಕಾಂಗ್ರೆಸ್ ರಾಜ್ಯಸಭಾ ಟಿಕೆಟ್‌ ನೀಡಿದೆ. ಒಟ್ಟು 15 ರಾಜ್ಯಗಳಿಂದ 56 ರಾಜ್ಯಸಭೆ ಸ್ಥಾನಗಳಿಗೆ ಫೆ.27ರಂದು ಚುನಾವಣೆ ನಡೆಯಲಿದೆ.‌

The Congress has announced the list of candidates for the Rajya Sabha elections from the state. The Congress has once again fielded sitting Rajya Sabha members Nasir Hussain and BC Chandrasekhar from Karnataka. In addition to this, AICC treasurer Ajay Maken has also been given a chance to be elected from Karnataka.