Vijayapura MP Ramesh Jigajinagi, Lok Sabha polls in Karnataka: ನನ್ನ ಬಿಟ್ಟು ಇಲ್ಲಿ ಯಾರಿಗೂ ಟಿಕೆಟ್ ಕೊಡಲ್ಲ , ಕೊಡಕ್ಕೂ ನನ್ ಬಿಡಲ್ಲ ; ನಂಗೆ ಅಡ್ಡ ಬಂದ ಯಾವನೂ ಬದುಕಿಲ್ಲ, ನನ್ನ ವಿರೋಧಿಗಳು ಉಳಿದಿಲ್ಲ..! 

12-03-24 07:53 pm       HK News Desk   ಕರ್ನಾಟಕ

ನನ್ನ ಜೀವನದ 70 ವರ್ಷದ ರಾಜಕಾರಣದಲ್ಲಿ ನನಗೆ ಅಡ್ಡ ಬಂದ ಯಾವನೂ ಬದುಕಿಲ್ಲ. ನನ್ನನ್ನು ಕಾಡಿದ್ರೆ ಅಂತಹವರನ್ನು ದೇವರೇ ನಾಶ ಮಾಡ್ತಾನೆ. ಹಾಗಾಗಿ ನನ್ನ ವಿರೋಧಿಗಳು ಯಾರೂ ಉಳಿದಿಲ್ಲ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪಂಚ್ ಕೊಟ್ಟಿದ್ದಾರೆ. 

ವಿಜಯಪುರ, ಮಾ.12: ನನ್ನ ಜೀವನದ 70 ವರ್ಷದ ರಾಜಕಾರಣದಲ್ಲಿ ನನಗೆ ಅಡ್ಡ ಬಂದ ಯಾವನೂ ಬದುಕಿಲ್ಲ. ನನ್ನನ್ನು ಕಾಡಿದ್ರೆ ಅಂತಹವರನ್ನು ದೇವರೇ ನಾಶ ಮಾಡ್ತಾನೆ. ಹಾಗಾಗಿ ನನ್ನ ವಿರೋಧಿಗಳು ಯಾರೂ ಉಳಿದಿಲ್ಲ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪಂಚ್ ಕೊಟ್ಟಿದ್ದಾರೆ. 

ಟಿಕೆಟ್ ಯಾವಾಗ ಘೋಷಣೆ ಆಗುತ್ತೋ ಏನು ಅಂತ ನನಗೆ ಗೊತ್ತಿಲ್ಲ. ನನ್ನ ಬಿಟ್ಟು ಇಲ್ಲಿ ಯಾರಿಗೂ ಟಿಕೆಟ್ ಕೊಡಲ್ಲ ಮತ್ತು ಕೊಡಲು ನಾನು ಬಿಡಲ್ಲ. ಒಂದು ವೇಳೆ ನೀವು ಸತ್ತರೂ ನಿಮ್ಮ ಹೆಣಕ್ಕೆ ಜನರು ವೋಟ್ ಹಾಕಲಿ ಎಂದು ಹೈಕಮಾಂಡ್ ಹೇಳಿದೆ. ಇಷ್ಟು

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ, ರಮೇಶ್ ಜಿಗಜಿಣಗಿ ಲಿಂಗಾಯತ ವಿರೋಧಿ ಅಂತ ಹೇಳಿದವರ ನಾಲಿಗೆ ಕತ್ತರಿಸಬೇಕು. ನನ್ನ ಜೀವನದಲ್ಲಿ ಜಾತಿ ಅನ್ನೋದು ನನಗೆ ಗೊತ್ತಿಲ್ಲ. 40-45 ವರ್ಷಗಳಿಂದ ಜನರು ನನಗೆ ವೋಟ್ ಹಾಕಿದ್ದಾರೆ. ಇಲ್ಲಿಂದ ಚಿಕ್ಕೋಡಿಗೆ ಹೋದರೂ ಅಲ್ಲಿಯೂ ನನ್ನನ್ನು ಗೆಲ್ಲಿಸಿದರು.

ಲಿಂಗಾಯಿತರಿಗೆ ವಿರೋಧವಾಗಿದ್ದು, ದಲಿತರನ್ನು ಕೊರಳಿಗೆ ಕಟ್ಟಿಕೊಂಡಿದ್ರೆ ಇವತ್ತಿಗೆ ನಾನು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದರು. 

ದೇಶದಲ್ಲಿ ಕಾಂಗ್ರೆಸ್ ಇರಬಾರದು ; 

ಕಾಂಗ್ರೆಸ್ ವಿರುದ್ದ ಸಂಸದ ಅನಂತ್​​ಕುಮಾರ್  ಹೆಗಡೆ ವಾಗ್ದಾಳಿ ಮುಂದುವರೆಸಿದ್ದಾರೆ. ನಾನು ಇರೋವರೆಗೂ ಕಾಂಗ್ರೆಸ್ ನೆಮ್ಮದಿ ಆಗಿ ಇರೊಕೆ ಬಿಡೊದಿಲ್ಲ. ದೇಶವನ್ನ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿ ಕಾಂಗ್ರೆಸ್ ಹಾಳು ಮಾಡಿದೆ. ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿರೋಧಿ ಪಕ್ಷ ಇರಬೇಕು ಎಂದಿದ್ದಾರೆ.

Vijayapura MP Ramesh Jigajinagi says no one will get ticket except me, I wont spare ayone. No one who has come against me has survived, God will destroy their lives he added. Will work till congress is destroyed in India he added.