Bangalore cafe blast case arrest: ರಾಮೇಶ್ವರಂ ಕೆಫೆ ಸ್ಫೋಟ ; ಬಳ್ಳಾರಿಯಲ್ಲಿ ಆರೋಪಿ ಭೇಟಿಯಾಗಿದ್ದ ಯುವಕ ಎನ್ಐಎ ವಶಕ್ಕೆ, ತೀವ್ರ ವಿಚಾರಣೆ 

13-03-24 04:42 pm       Bangalore Correspondent   ಕರ್ನಾಟಕ

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದೆ‌. ಈತನಿಗೂ ಸ್ಪೋಟಕ್ಕೂ ಸಂಬಂಧ ಇರುವ ಶಂಕೆಯಲ್ಲಿ ಈ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. 

ಬೆಂಗಳೂರು, ಮಾ.13: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದೆ‌. ಈತನಿಗೂ ಸ್ಪೋಟಕ್ಕೂ ಸಂಬಂಧ ಇರುವ ಶಂಕೆಯಲ್ಲಿ ಈ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. 

ಬಳ್ಳಾರಿಯ ಕೌಲ್‌ ಬಜಾರ್‌ ನಿವಾಸಿ ಶಬ್ಬೀರ್‌ ಎಂಬಾತನನ್ನು ಬುಧವಾರ ಬೆಳ್ಳಂಬೆಳಗ್ಗೆ ಎನ್ಐಎ ವಶಕ್ಕೆ ಪಡೆದಿದೆ. ಶಬ್ಬೀರ್‌ ಬಳ್ಳಾರಿಯ ಕೈಗಾರಿಕೆ ಒಂದರಲ್ಲಿ ಇಲೆಕ್ಟ್ರಿಕಲ್ ಉದ್ಯೋಗಿಯಾಗಿದ್ದ. 

ರಾಮೇಶ್ವರಂ ಕೆಫೆ ಸ್ಫೋಟ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಹಲವಾರು ಶಂಕಿತರ ಮನೆಗಳಲ್ಲಿ ತೀವ್ರ ಶೋಧ ನಡೆಸಿದ್ದರು. ಈ ನಡುವೆ ಆರೋಪಿ ಪರಾರಿಯಾಗೋದಕ್ಕೂ ಮುನ್ನ ಶಬ್ಬೀರ್‌ ನನ್ನು ಭೇಟಿ ಮಾಡಿದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಈಗಾಗಲೇ ಬಳ್ಳಾರಿಯಲ್ಲಿ ಮಿನಾಜ್‌ ಅಲಿಯಸ್‌ ಸುಲೈಮಾನ್‌, ಸೈಯದ್‌ ಸಮೀರ್‌, ಅನಾಸ್‌ ಇಕ್ಬಾಲ್‌ ಶೇಖ್‌, ದೆಹಲಿ ಮೂಲದ ಶಯಾನ್‌ ರೆಹಮಾನ್‌ ಅಲಿಯಾಸ್‌ ಹುಸೈನ್‌ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಅವರಿಂದಲೇ ಶಬೀರ್ ಕುರಿತು ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. 

ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಭಾರೀ ಸ್ಫೋಟ ಸಂಭವಿಸಿತ್ತು. 9 ಮಂದಿ ಗ್ರಾಹಕರು ಗಾಯಗೊಂಡಿದ್ದರು. ಘಟನೆ ಬಳಿಕ ಆರೋಪಿ ಬೆಂಗಳೂರಿನಿಂದ ಬಳ್ಳಾರಿಗೆ ಬಸ್ಸಿನಲ್ಲಿ ತೆರಳಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಆಬಳಿಕ ಎನ್ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ಬಳ್ಳಾರಿ ಕಾರಾಗೃಹದಲ್ಲಿದ್ದ ಮಿನಾಜ್ ಅಲಿಯಾಸ್ ಸುಲೇಮಾನ್ ಎಂಬಾತ​ನನ್ನು ವಶಕ್ಕೆ ಪಡೆದಿದ್ದರು.

Key suspect in Bangalore cafe blast case taken into custody from Bellary district. A key suspect in the Bengaluru Rameshwaram Cafe blast case has been taken into custody by the National Investigation Agency (NIA), sources in the anti-terror agency said.